April 17, 2025
Suddigaralive News
ಚಿಕ್ಕಮಗಳೂರುಜಿಲ್ಲಾ ಸುದ್ದಿತಂತ್ರಜ್ಞಾನತಾಲೂಕು

ಮಾ.೨೦-೨೧ ನಿರ್ಮಿತಿ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ತರಬೇತಿ

ಚಿಕ್ಕಮಗಳೂರು: ಕಟ್ಟಡ ಕಾರ್ಮಿಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುಶಲ ಕಲೆಗಳನ್ನು ಪ್ರೋತ್ಸಾಹಿಸಲು ನಿರ್ಮಿತಿ ಕೇಂದ್ರದಲ್ಲಿ ಮಾ.೨೦ ಹಾಗೂ ೨೧ ರಂದು ಎರಡು ದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಷಿಯೇಷನ್ ಜಿಲ್ಲಾಧ್ಯಕ್ಷ ಜಿ. ರಮೇಶ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಷಿಯೇಷನ್, ನಿರ್ಮಿತಿ ಕೇಂದ್ರ ಮತ್ತು ಬೆಂಗಳೂರಿನ ಇನ್ಸ್ಟ್ರಕ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಕುಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಟ್ಟಡ ಕಾರ್ಮಿಕರು, ಅಪೇಕ್ಷಿತರು, ಕಟ್ಟಡ ಕಟ್ಟುವ ಕಲೆ, ನೀರು ಸೋರದ ಹಾಗೆ ಕಟ್ಟುವ ತಂತ್ರಜ್ಞಾನ ಹಾಗೂ ನೆಲಹಾಸು ಈ ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಸಂಪೂರ್ಣ ಉಚಿತವಾಗಿ ನೀಡಲಿದ್ದು, ತರಬೇತಿಯಲ್ಲಿ ಭಾಗವಹಿಸುವವರಿಗೆ ದಿನಕ್ಕೆ ೭೦೦ ರೂಗಳಂತೆ ಊಟ ನೀಡಲಾಗುವುದು ಎಂದರು.

ಈ ತರಬೇತಿಗೆ ಹಾಜರಾಗ ಬಯಸುವವರು ಇಂಜಿನಿಯರ್ ಪ್ರಮಾಣೀಕರಿಸಿದ ದೃಢೀಕರಣ ಪತ್ರದೊಂದಿಗೆ ನೊಂದಾಯಿಸಿಕೊಳ್ಳಬೇಕು. ತರಬೇತಿ ಮುಕ್ತಾಯಗೊಳಿಸಿದವರಿಗೆ ಕಟ್ಟಡ ಕಟ್ಟಲು ಅಗತ್ಯ ಇರುವ ಕರಣಿ, ತೂಕುಗುಂಡು ಮತ್ತು ಪಾದರಸ ಮಟ್ಟ ಇವುಗಳನ್ನೊಳಗೊಂಡ ಸಲಕರಣೆಗಳ ಕಿಟ್‌ನೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದರು.

ಮುಂಚಿತವಾಗಿ ನೊಂದಾಯಿಸಿಕೊಂಡವರಿಗೆ ಮಾತ್ರ ಅವಕಾಶವಿದ್ದು, ನೇರ ಪ್ರವೇಶವಿರುವುದಿಲ್ಲ. ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಕೆ.ಜಿ. ವೆಂಕಟೇಶ್, ಸಂಯೋಜಕರು-೯೪೪೮೫೫೪೬೭೬ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಇ ಅಬ್ದುಲ್ ಕಬೀರ್ ಉಪಸ್ಥಿತರಿದ್ದರು.

Mar. 19 All-member meeting of retired state government employees

Related posts

ಸಿರಿಧಾನ್ಯ ಉತ್ಪನ್ನಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ

Team Suddigara

ಮನುಷ್ಯನ ಹೃದಯಾಳದಿ ಭಗವಂತನ ನೆಲೆ

Team Suddigara

ಸರ್ವರ ಪ್ರಗತಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಕರ್ತವ್ಯ

Team Suddigara

Leave a Comment

[t4b-ticker] [t4b-ticker]