July 14, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಶಿಕ್ಷಣ ಪಡೆದ ಶಾಲೆಯ ಋಣ ತೀರಿಸಿದ ಶಾಸಕ ತಮ್ಮಯ್ಯ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಭಾಗವಾದ ಹಿರೇಮಗಳೂರಿನಲ್ಲಿ ಜೂ.೨೧ ರಂದು ಸಂಭ್ರಮವೋ ಸಂಭ್ರಮ. ಕಾರಣ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಡಿ.ತಮ್ಮಯ್ಯನವರ ಹುಟ್ಟುಹಬ್ಬ ಹಿರೇಮಗಳೂರಿನವರೇ ಆದ ಅವರು, ತಾನು ವ್ಯಾಸಂಗ ಮಾಡಿದ ಶತಮಾನದ ಅಂಚಿನಲ್ಲಿರುವ ಶಾಲೆಗೆ ಹೊಸಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಸಂಭ್ರಮದಲ್ಲಿ ಇಡೀ ಊರಿಗೆ ಊರೇ ಸಂತಸದಲ್ಲಿ ಮುಳುಗಿತ್ತು. ಕ್ಷೇತ್ರದ ಅಭಿಮಾನಿಗಳು, ಹಿರಿಯರು ಕೂಡ ಇಲ್ಲಿಗೆ ಬಂದು ಆಶಿರ್ವದಿಸುತ್ತಿದ್ದ ಆ ಸಮಯ ಹಬ್ಬದೋಪಾದಿಯಲ್ಲಿ ಕಂಗೊಳಿಸುತ್ತಿತ್ತು.

ಹಿರೇಮಗಳೂರು ಎಂದಾ ಕ್ಷಣ ಇತಿಹಾಸ ಮತ್ತು ಪ್ರಸ್ತುತಗಳನ್ನು ನೆನಪಿಸಿಕೊಳ್ಳಬೇಕು. ಸಖರಾಯಪಟ್ಟಣದ ರಾಜರುಕ್ಮಾಂಗದವರು ತನ್ನ ಹಿರಿಯಮಗಳನ್ನು ಹಿರೇಮಗಳೂರಿಗೂ, ಕಿರಿಯಮಗಳನ್ನು ಚಿಕ್ಕಮಗಳೂರಿಗೂ ಕೊಟ್ಟು ಮದುವೆ ಮಾಡಿದ ಕಾರಣಕ್ಕೆ ಹಿರೇಮಗಳೂರು ಮತ್ತು ಚಿಕ್ಕಮಗಳೂರೆಂದು ಕರೆಯಲಾಗುತ್ತಿದೆ ಎಂಬ ಐತಿಹ್ಯವಿದೆ. ಕೋದಂಡ ರಾಮನ ದೇವಸ್ಥಾನ ನಾಡಿನ ಜನರನ್ನು ಕೈಬೀಸಿ ಕರೆಯುತ್ತದೆ. ಇದರ ಪೂಜಾರಿ ಕಣ್ಣನ್ ಮಾಮ ಕನ್ನಡದ ಪೂಜಾರಿ ಎಂದೇ ಪ್ರಖ್ಯಾತಿಗೊಂಡಿರುವುದು ಪ್ರಸ್ತುತ ವಿಶೇಷ.

ಈ ಊರಿನಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ತಮ್ಮಯ್ಯ ಪೂರ್ವ ಶಿಕ್ಷಣವನ್ನು ತನ್ನೂರಿನ ೧೯೩೬ ರಲ್ಲಿ ಆರಂಭವಾದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ೧೯೭೪-೭೫ನೇ ಸಾಲಿನಲ್ಲಿ ಓದಲು ಆರಂಭಿಸುತ್ತಾರೆ. ಶಾಲೆಯ ದಾಖಲೆಯ ಪ್ರಕಾರ ಅವರ ನೊಂದಣಿ ಸಂಖ್ಯೆ ೦೨ ಆಗಿರುತ್ತದೆ. ಈ ಶಾಲೆ ಸುಮಾರು ೦೨ ಎಕರೆ ವಿಸ್ತೀರ್ಣವಿರುವ ಹಿರೇಮಗಳೂರಿನ ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಹಳೆಯ ಕಟ್ಟಡ ಬಹಳ ಶಿಥಿಲಗೊಂಡಿತ್ತು. ಕಾಂಪೌಂಡ್ ಇಲ್ಲದೆ ಶಾಲೆಗೆ ಭಂಗ ತರುತ್ತಿತ್ತು. ಹಲವಾರು ಎಡರು ತೊಡರುಗಳೊಂದಿಗೆ ಇದುವರೆಗೆ ದುಡಿದ ಶಿಕ್ಷಕರು ಮತ್ತು ಊರಿನವರ ಸಹಕಾರದಿಂದ ಶಾಲೆಯ ಜಾಗ ಹಾಗೆಯೇ ಉಳಿದಿದ್ದು ವಿಶೇಷ

ಶಾಸಕರಾದ ತಮ್ಮಯ್ಯನವರಿಗೆ ಸ್ವಾಭಾವಿಕವಾಗಿ ಹುಟ್ಟೂರು ಅಭಿವೃದ್ಧಿ ಅನಿವಾರ್ಯವೆನಿಸದೆ ಇರಲಾರದು. ಈ ಹಿಂದೆ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಊರಿನ ರಸ್ತೆ, ಚರಂಡಿ, ಯಾತ್ರಿ ನಿವಾಸ ಮುಂತಾದ ಚಟಿವಟಿಕೆಗಳೊಂದಿಗೆ ಎಲ್ಲರ ಮನೆಯ ಮಗನಂತೆ ಪ್ರೀತಿ ಔದಾರ್ಯಗಳಿಂದ ಇದ್ದವರಿಗೆ ನೆನಪಾದದ್ದು ತಾನು ಓದಿದ ಶಾಲೆ. ಅತ್ಯಂತ ದುರಸ್ಥಿಗೊಂಡಿರುವ ಶಾಲೆಗೆ ಕಾಯಕಲ್ಪ ಕೊಡಬೇಕೆಂದು ಆಲೋಚನೆ ಬಂದಿದ್ದು ೨೦೨೫ ರ ಆರಂಭದಲ್ಲಿ. ಕಟ್ಟಡವನ್ನು ಸಂಪೂರ್ಣ ಕೆಡವಿ ಹೊಸಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದರು.

ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ತಂದು ಹೊಸ ಕಟ್ಟಡ ನಿರ್ಮಾಣ ಕ?ದ ಕೆಲಸ. ಹೀಗಾಗಿ ದುರಸ್ಥಿಗೆ ಮುಂದಾಗಬೇಕೆಂಬ ಆಲೋಚನೆಯಲ್ಲಿದ್ದವರಿಗೆ ಹೊಳೆದದ್ದು ಹೆಸರೇಳಲು ಇಚ್ಚಿಸದ ಆಮಿತ್ರನ ಸಹಕಾರದ ಮಾತು ಹಿಂದೆ ಸಹಾಯ ಪಡೆದುಕೊಂಡಿದ್ದ ಸ್ನೇಹಿತರೊಬ್ಬರು ಶಾಸಕರಿಗೆ ಋಣ ತೀರಿಸಲು ತವಕದಲ್ಲಿದ್ದರು. ಇದನ್ನು ಸದುಪಯೋಗಪಡಿಸಿಕೊಂಡ ತಮ್ಮಯ್ಯನವರು ಅವರ ಸಿ.ಎಸ್.ಆರ್. ಫಂಡ್ನಲ್ಲಿ ಶಾಲೆ ಕಟ್ಟಲು ಮುಂದಾದರು.

ಬಹಳ ಆಶ್ಚರ್ಯವೆಂದರೆ ಕೇವಲ ಮೂರೇ ತಿಂಗಳಲ್ಲಿ ಹೊಸ ೬ ಕೊಠಡಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಕಾಂಪೌಂಡ್ ಎಲ್ಲವೂ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿವೆ. ವಿಶೇ?ವೆಂದರೆ ನೀರಿನನಲ್ಲಿ, ಶೌಚಾಲಯದ ಸಲಕರಣೆಗಳೆಲ್ಲಾ ಪ್ರತಿಷ್ಠಿತ ಜಾಗ್ವಾರ್ ಕಂಪನಿಗೆ ಸೇರಿದ್ದವಾಗಿವೆ. ಶಾಲೆಯ ಎತ್ತರದ ಅಚ್ಚುಕಟ್ಟಾದ ಚಾವಣಿ, ನೆಲಹಾಸಿಗೆ, ವಿಶಾಲ ಕೊಠಡಿಗಳು ಅಬ್ಬಾ ಇದೆಲ್ಲಾ ಸಾಧ್ಯವೇ ಸೋಜಿಗ ಅನಿಸುತ್ತದೆ ಆದರೂ ಸತ್ಯ.

ಪ್ರಸ್ತುತ ೮೧ ಮಕ್ಕಳು ೧ ರಿಂದ ೭ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ೫ ಶಿಕ್ಷಕರು ಇದ್ದಾರೆ. ಇನ್ನುಮುಂದೆ ಹೆಚ್ಚು ಮಕ್ಕಳನ್ನು ಆಕರ್ಷಿಸುತ್ತದೆ ಎನ್ನುವ ಮುಖ್ಯ ಶಿಕ್ಷಕಿ ಶಿವಮ್ಮ, ಮುಂದಿನ ದಿನಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಬೇಕು ಎನ್ನುತ್ತಾರೆ.
ಬೋರ್ವೆಲ್, ಕಲ್ಲುಬೆಂಚು, ದಾಸೋಹ ಕೊಠಡಿ ದುರಸ್ಥಿ, ಗಾರ್ಡನ್‌ಗಳು ನಮ್ಮ ಮುಂದಿರುವ ಸವಾಲುಗಳು. ಇದೆಲ್ಲಾ ಮಾಡಿರುವ ಶಾಸಕರು ಮತ್ತು ದಾನಿಗಳು ಇವೆಲ್ಲವನ್ನೂ ಒದಗಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ ಶಿಕ್ಷಕಿ, ಜಿಲ್ಲಾನೌಕರರ ಸಂಘದ ಉಪಾಧ್ಯಕ್ಷೆ ವಿಲ್ಮಾ ಅವರು ಇದೆಲ್ಲಾ ಕನಸಿನಂತೆ ನಡೆದುಹೋಯಿತು ಎಂದು ಹ? ವ್ಯಕ್ತಪಡಿಸುತ್ತಾರೆ.

ನಾನು ಓದಿದಶಾಲೆಯನ್ನು ನನಗೆ ಅವಕಾ ಮತ್ತು ಅಧಿಕಾರಸಿಕ್ಕಾಗಲೂ ಸರಿಪಡಿಸಿದ್ದರೆಹೇಗೆ, ಮನೆಗೆದ್ದು ಮಾರುಗೆಲ್ಲು ಅನ್ನುತ್ತಾರೆ ಹಿರಿಯರು. ಆ ಕೆಲಸಮಾಡಿದ್ದೇನೆ ಎನ್ನುತ್ತಾರೆ ತಮ್ಮಯ್ಯ. ಕ್ಷೇತ್ರದಲ್ಲಿ ಕೂಡ ನನ್ನ ಕೆಲಸ ಹೀಗೆಯೆ ಮುಂದುವರೆಯುತ್ತದೆ ಎನ್ನುವ ಅವರು ಸಿ.ಎಸ್.ಆರ್. ಫಂಡ್ ನೀಡಿದ ಗೆಳೆಯರ ಹೆಸರನ್ನು ಬಹಿರಂಗಪಡಿಸದೆ ಮತ್ತೊಮ್ಮೆ ಅವರಿಗೆ ಕೃತಜ್ಞತೆ ಹೇಳುವುದನ್ನು ಮರೆಯಲಿಲ್ಲ.

MLA Thammayya pays off the debt of the school he studied at

Related posts

ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಸರ್ಕಾರ ಸಿರಿಧಾನ್ಯಗಳಿಗೆ ಉತ್ತೇಜನ

Team Suddigara

jಜಿಲ್ಲೆಯ ಕೆರೆಗಳ ಒತ್ತುವರಿ ತೆರವಿಗೆ ಶೀಘ್ರ ಕ್ರಮ ಅಗತ್ಯ

Team Suddigara

ಅರಿವಿಗಿಂತ ಆಚಾರ ದೊಡ್ಡದ್ದು

Team Suddigara

Leave a Comment

[t4b-ticker] [t4b-ticker]