ಚಿಕ್ಕಮಗಳೂರು: – ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾ ಘಟಕದ ಪದಗ್ರಹ ಣ ಸಮಾರಂಭದ ಆಹ್ವಾನ ಪತ್ರಿಕೆ ಹಾಗೂ ಲಾಂಛನವನ್ನು ಹಿರೇಮಗಳೂರಿನಲ್ಲಿ ಕನ್ನಡಪೂಜಾರಿ ಕಣ್ಣನ್ ಗುರುವಾರ ಸಂಜೆ ನಿವಾಸದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಕಣ್ಣನ್ ದಾಸ ಸಾಹಿತ್ಯ ವೈಚಾರಿಕ ನೆಲೆಯಲ್ಲಿ ಬಂದಿರುವುದರಿಂದ ಶಾಶ್ವತವಾಗಿ ಉಳಿದಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹಾಗೂ ಪರಿಸರ ಎಲ್ಲವೂ ಒಳಗೊಂಡಂತೆ ಮನುಕುಲದ ಹಿತ ಸಹಿ ತವಾದ ವೈಚಾರಿಕೆಯ ಚಿಲುಮೆಯೇ ದಾಸ ಸಾಹಿತ್ಯ. ಅಚ್ಚಕನ್ನಡದಲ್ಲಿ ನಿತ್ಯ ನೆಲೆಯುವ, ಮಡಿವಂತಿಕೆಯಿ ಲ್ಲದೇ ನುಡಿವಂತಿಕೆಯಾಗಬೇಕು ಎಂದರು.
ಪ್ರತಿ ಕುಟುಂಬದಲ್ಲಿ ಚಿಕ್ಕಮಕ್ಕಳು, ವೃದ್ದರು ದಿನಗೊಂದ ದಾಸ ಸಾಹಿತ್ಯ, ವಚನಗಳು ಪಠಿಸುವಂತಾ ಗಬೇಕು. ದಾಸ ಸಂಸ್ಕೃತಿ, ಪರಂಪರೆ ಪಸರಿಸುವ ಕೆಲಸ ಮಾಡಬೇಕು. ಅಲ್ಲದೇ ಮುಂದಿನ ಪೀಳಿಗೆಗೆ ದಾಸ ಸಾಹಿತ್ಯ ಪರಿಮಳವನ್ನು ಎಲ್ಲೆಡೆ ಹಬ್ಬಿಸುವಂತೆ ಮಾಡಿದರೆ ಪೂರ್ವಿಕರು ಕಟ್ಟುಬೆಳೆಸಿದ ಪರಂಪರೆ ಶಾಶ್ವತ ವಾಗಿ ಮನಸ್ಸಿನಲ್ಲಿ ನೆಲೆಯೂರಲು ಸಾಧ್ಯ ಎಂದರು.
ಮಾನವನರ ಅಜ್ಞಾನ, ಅಂಧಕಾರ ಅಳಿಸಿ, ದೇಹ, ಮನಸ್ಸು ಆತ್ಮಗಳಲ್ಲಿ ಕೆಟ್ಟ ಭಾವನೆಗಳನ್ನು ಹೋಗ ಲಾಡಿಸಿ, ಲೋಕದ ಅಂಕುಡೊಂಕುಗಳನ್ನು ತಿದ್ದಿ, ವರ್ಗಬೇಧ ರಹಿತದ ಹೊಸ ಸಮಾಜವನ್ನು ಕಟ್ಟಲು ಹಿರಿ ದಾಸರು ವೈಚಾರಿಕೆ ಹೊನಲು ಹರಿಸಿದ್ದು ದಾಸರ ಸಮಗ್ರ ಚಿಂತನೆಗಳ ಸಾರವನ್ನು ದಾಸ ಸಾಹಿತ್ಯದಲ್ಲಿ ವೈಚಾರಿತೆ ಗ್ರಂಥದಲ್ಲಿ ಹುದುಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಜನ ಸಾಮಾನ್ಯರನ್ನು ಉನ್ನತ ಜೀವನದತ್ತ ಪ್ರೇರೇಪಿಸಿ, ಜಾತಿ, ಮತ , ಪಂಥಗಳನ್ನು ಮೀರಿ ಲೋಕದ ಮಧ್ಯನಿಂತು ಮೌನವೀಯ ಮೌಲ್ಯಗಳನ್ನು ಹರಿ ದಾಸರು ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಟೇಶ್, ಜಿಲ್ಲಾ ದಾಸ ಸಾಹಿ ತ್ಯ ಪರಿಷತ್ತಿನ ಅಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷೆ ಮಹಾಲಕ್ಷ್ಮೀ, ಕಸಾಪ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪನ್ಯಾಸಕಿ ರೂಪನಾಯ್ಕ್ ಹಾಜರಿದ್ದರು.
Dasa Sahitya Parishad logo invitation letter released

Leave a Reply