ಅಜ್ಜಂಪುರ: ಸಮಗ್ರ ಭಾರತ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ ರವರ ಚಿಂತನೆಗಳನ್ನು ಜಾರಿಗೊಳಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದು ಕಾಂಗ್ರೇಸ್ ಸರ್ಕಾರ ಎಂದು ತರೀಕೆರೆ ಶಾಸಕ ಜಿ,ಎಚ್,ಶ್ರೀನಿವಾಸ್ ತಿಳಿಸಿದರು.
ಸೋಮವಾರ ಅಜ್ಜಂಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ರಾಂ ರವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹನೀಯರು ತೋರಿಸದ ಹಾದಿಯಲ್ಲಿ ನಡೆದಾಗ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥಬರಲಿದೆ ಅಂಬೇಡ್ಕರ್ರವರ ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಸಮಾನತೆ ಹಿಂದುಳಿದವರ ಅಭಿವೃದ್ದಿ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಕಾಂಗ್ರೇಸ್ ಸರ್ಕಾರ ಸಂವಿದಾನವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದೆವೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಭದ್ರವತಿ ಪದವಿಪೂರ್ವ ಕಾಲೇಜೀನ ಉಪನ್ಯಾಸಕರಾದ ಕಿರಣ್ ಮಾತನಾಡಿ ಮಹನೀಯರನ್ನು ಜಾತಿಗೆ ಸಿಮೀತಗೊಳಿಸದೆ ವಿಶ್ವವ್ಯಾಪಿಗೊಳಿಸಬೇಕಿದೆ, ಜಾತಿ ವ್ಯವಸ್ಥೆ ದೂರವಾದಾಗ ಮಾತ್ರ ಸಶಕ್ತ ಭಾರತ ನಿರ್ಮಾಣವಾಗುವುದು ಎಂದರು.ಜ್ಞಾನಕ್ಕೆ ಪರ್ಯಾಯ ಹೆಸರು ಅಂಬೇಡ್ಕರ್ ಅಂತಹ ಮಾಹಾನ್ ವ್ಯಕ್ತಿಗಳ ಆದರ್ಶಗಳು ಪರಿಪಾಲನೆಯದಾಗ ಸದೃಡ ದೇಶ ನಿರ್ಮಾಣವಾಗಲಿದೆ ಎಂದರು.
ಬಾಬು ಜಗಜೀವನರಾಂ ರವರು ಹಸಿರು ಕ್ರಾಂತಿಯ ಹರಿಕಾರರು ಸ್ವಾತಂತ್ರ್ಯ ನಂತರದ ಭಾರತದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗಿದ್ದು ಆ ಸಂಧರ್ಭದಲ್ಲಿ ತಮ್ಮ ದೂರ ದೃಷ್ಠಿಯಿಂದ ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅಳವÀಡಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿ ಭಾರತವನ್ನು ಕಟ್ಟಿದವರು ಅಂತಹ ಮಹಾನ್ ನಾಯಕರು ಜಾತಿ ವ್ಯವಸ್ಥೆಯಿಂದ ಪ್ರಾಧಾನಿ ಹುದ್ದೆ ವಂಚಿತರಾದರು ಇದು ಈ ದೇಶದ ವಿಪರ್ಯಾಸ ಎಂದರು.
ತಹಶಿಲ್ದಾರ್ ವಿನಾಯಕ ಸಾಗರ್ ಮಾತನಾಡಿ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಹೋರಾಡಿದವರು ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆಗೆ ಮುನ್ನುಡಿ ಬರೆದವರು ಅಂಬೇಡ್ಕರ್ ರವರು ಅಂತಹ ಮಹನೀಯರ ಜಯಂತಿಗಳು ಮನೆ ಮನೆಗಳಲ್ಲಿ ಆಚರಿಸುವಂತಾಗಬೇಕು ಅವರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಗಳಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಅಂತರಜಾತಿ ವಿವಾಹವಾದ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾ,ಪಂ,ಇಲಾಖೆಯ ನವೀನ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್,ಕಂದಾಯ ಇಲಾಖೆ ಶಿರಸ್ತೆದಾರ್ ನಟರಾಜು,ಮುಖಂಡರಾದ ಮಹೇಂದ್ರಸ್ವಾಮಿ,ಶಿವಣ್ಣ,ಬಸವರಾಜು,ಶಿವಮೂರ್ತಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
Leave a Reply