ಗ್ರಾಮೀಣ ಭಾಗದ ಜನರ ಬದುಕು ಹಸನುಗೊಳಿಸಲು ಸರ್ವಪ್ರಯತ್ನ. ಶಾಸಕ ಶ್ರೀನಿವಾಸ್.

  1. ಅಜ್ಜಂಪುರ: ನಗರ ಪ್ರದೇಶಗಳಂತೆ ಗ್ರಾಮೀಣ ಭಾಗದಲ್ಲಿಯೂ ರಸ್ತೆ ಅಭಿವೃದ್ದಿ,ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರ ಬದುಕು ಹಸನುಗೊಳಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಶಾಕ ಶ್ರೀನಿವಾಸ್ ತಿಳಿಸಿದರು.
    ಭಾನುವಾರ ಅಜ್ಜಂಪುರ ತಾಲೂಕಿನ ಬೇಗೂರು ತಾಂಡ್ಯದಲ್ಲಿ ಸೇವಾಲಾಲ್ ಸಾಂಸ್ಕøತಿಕ ಭವನದ ಗುದ್ದಲಿ ಪೂಜೆ ಶುದ್ದಗಂಗಾ ನೀರಿನ ಘಟಕ ಉದ್ಘಾಟನೆ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೆರಿಸಿ ಮಾತನಾಡಿದರು.
    ತಾವು ಶಾಸಕರದ ನಂತರ ಸರ್ಕಾರದ ಪ್ರತಿಯೊಂದು ಸೌಲಭ್ಯಗಳು ಜನರ ಮನೆಬಾಗಿಲಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ ರೈತರ ಅನುಕೂಲಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಮುದಾಯಭವನಗಳ ನಿರ್ಮಾಣ,ಗುಣಮಟ್ಟದ ರಸ್ತೆಗಳಿಗೆ ಒತ್ತು ನೀಡಲಾಗಿದೆ ಎಂದರು.
    ಇದೇ ಸಂಧರ್ಭದಲ್ಲಿ ಮುಖಂಡರಾದ ನಿರಂಜನ್ ಪಟೇಲ್,ಬೇಗೂರು ಗ್ರಾ,ಪಂ,ಉಪಾಧ್ಯಕ್ಷ ಸೋಮಶೇಖರ್,ಬಂಜಾರ ಸಮಾಜದ ಅಧ್ಯಕ್ಷ ನಾಗರಾಜು, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *