May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಮಹಿಳಾ ಸಹಕಾರ ಬ್ಯಾಂಕ್ ಗ್ರಾಹಕರಿಗೆ ಶೇ.12 ರಷ್ಟು ಡಿವಿಡೆಂಟ್ ಘೋಷಣೆ

ಚಿಕ್ಕಮಗಳೂರು:  ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಗ್ರಾಹಕರಿಗೆ ನಿರಾಶೆಯಾಗದಂತೆ ಬ್ಯಾಂಕಿನ ಲಾಭಾಂಶದಲ್ಲಿ ಶೆ.೧೨ ರಷ್ಟು ಡಿವಿಡೆಂಟ್ ನೀಡುವುದಾಗಿ ಬ್ಯಾಂಕಿನ ಅಧ್ಯಕ್ಷೆ ಕುಮಾರಿ ಬಿ.ಸಿ. ಗೀತಾ ಘೋಷಣೆ ಮಾಡಿದರು.

ಅವರು ಇಂದು ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ೨೬ ನೇ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಬ್ಯಾಂಕಿನ ಕ್ಯೂಆರ್ ಕೋಡನ್ನು ಬಿಡುಗಡೆಗೊಳಿಸಿ ಮಾತನಾಡಿ ಯಾವುದೇ ವಂಚನೆ ಇಲ್ಲದೆ ಬ್ಯಾಂಕಿನ ಪ್ರಗತಿ ಸಾಗಬೇಕಾದರೆ ಆಡಳಿತ ಮಂಡಳಿಯ ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದ ಅವರು, ಕನ್ನಡದಲ್ಲಿ ವ್ಯವಹಾರ ಮಾಡುವುದರ ಜೊತೆಗೆ ತ್ವರಿತ ಸೇವೆ ಮಾಡುವಲ್ಲಿ ಬ್ಯಾಂಕಿನ ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.

ಬ್ಯಾಂಕಿನ ವಹಿವಾಟು ಅತ್ಯಂತ ತೃಪ್ತಿಕರವಾಗಿದೆ. ವಿಶೇಷವಾಗಿ ಇಂದು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದು, ಇದರಿಂದ ಪ್ರತಿಯೊಬ್ಬ ಗ್ರಾಹಕರಿಗೂ ವ್ಯವಹಾರ ತಲುಪಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಬ್ಯಾಂಕಿನ ವರದಿ ಸಾಲಿನಲ್ಲಿ ರೂ ೧೭೭೩ ಕೋಟಿಗಳ ವ್ಯವಹಾರ ಮಾಡಿದ್ದು ೩೧೩ ಕೋಟಿಗಳ ಠೇವಣಿ ಹೊಂದಲಾಗಿದೆ, ರೂ ೨೦೮ ಕೋಟಿ ಹೊರಬಾಕಿ ಸಾಲ ಇರುತ್ತದೆ, ಬ್ಯಾಂಕಿನಲ್ಲಿ ೭೧೫೭ ಸದಸ್ಯರಿದ್ದು ೨೨೯೧೪ ಗ್ರಾಹಕರನ್ನು ಹೊಂದಿದ್ದು ಒಟ್ಟು ರೂ ೫.೫೭ ಕೋಟಿ ಲಾಭ ಗಳಿಸಿದೆ, ತೆರಿಗೆ ಪಾವತಿ ನಂತರ ರೂ ೩.೩೭ ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ, ಈ ಸಾಲಿನಲ್ಲಿ ಶೇ ೧೨% ಡಿವಿಡೆಂಟನ್ನು ನೀಡಲಾಗುವುದು ಎಂದರು.

ನಗರದ ಎಲ್ಲಾ ಸಹಕಾರಿ ಬ್ಯಾಂಕ್‌ಗಳಿಗಿಂತ ವಿಭಿನ್ನವಾಗಿ ಸೇವೆ ಸಲ್ಲಿಸುತ್ತಿದ್ದು, ಎಲ್ಲಾ ರೀತಿಯ ಡಿಜಿಟಲ್ ಬ್ಯಾಂಕಿಂಗ್, ಎಟಿಎಂ, ಪಿಓಎಸ್, ಮೊಬೈಲ್ ಬ್ಯಾಂಕಿಂಗ್ ನೀಡಲಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಸಾಧನೆಗೆ ಕಾರಣವಾಗಿದ್ದು, ಶಿವಮೊಗ್ಗದಲ್ಲಿ ನಿವೇಶನ ಖರೀದಿಸಲಾಗಿದೆ. ಹಾಸನದಲ್ಲಿ ನೂತನ ಶಾಖೆ ಆರಂಭವಾಗಿದೆ. ವ್ಯವಹಾರಗಳು ಉತ್ತಮವಾಗಿ ನಡೆಯುತ್ತಿದ್ದು, ಈ ಮೂಲಕ ಬ್ಯಾಂಕಿನ ಗ್ರಾಹಕರಲ್ಲಿ ಹಂತ ಹಂತವಾಗಿ ನಂಬಿಕೆ ಮೂಡಿಸುತ್ತಿದ್ದೇವೆಂದು ತಿಳಿಸಿದರು.

ಮಹಿಳಾ ಬ್ಯಾಂಕಿನ ೪ ಶಾಖೆಗಳಲ್ಲಿಯೂ ಗ್ರಾಹಕರನ್ನು ನಗುತ ಸ್ವಾಗತಿಸಿ ಸಂಯಮದಿಂದ ಅವರ ಕೆಲಸ ಕಾರ್ಯಗಳನ್ನು ಸಿಬ್ಬಂದಿ ಮಾಡುತ್ತಿದ್ದಾರೆಂದು ಶ್ಲಾಘಿಸಿದರು. ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಣೆ ಜೊತೆಗೆ ಬ್ಯಾಂಕಿನ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಗುರಿ ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಧಾ ಹೆಚ್.ಆರ್‌ರಾಜು, ಸೌಭಾಗ್ಯಗೋಪಾಲನ್, ನಿರ್ದೇಶಕರುಗಳಾದ ಕಮಲಾಬಸವರಾಜ್, ಸೌಭಾಗ್ಯಗೋಪಾಲನ್, ಜಯಶ್ರೀನಂಜರಾಜ್, ಟಿ.ಪಿ ಜಯಲಕ್ಷ್ಮೀರಾಮೇಗೌಡ, ಬನಶಂಕರಿಜೋಷಿ, ತಾರಾಮೋಹನ್, ಕವಿತಾ.ಎಂ.ರಾಹುಲ್ ನಾಯಕ್, ಮೀನಾ.ಪಿ, ಆಶಾಹೇಮಂತ್‌ಕುಮಾರ್, ಸ್ಮಿತಾ ಬಿ.ಎಂ, ಸೌಜನ್ಯ ಕೆ.ಆರ್, ಅರುಂಧತಿ ಹೆಚ್.ಎಸ್, ಸುಮ.ಎಂ.ಸಿ, ಜನರಲ್ ಮ್ಯಾನೇಜರ್ ಸತೀಶ್, ವ್ಯವಸ್ಥಾಪಕರುಗಳಾದ ಕವಿತಾ, ಅಜಿತ್‌ಕುಮಾರ್, ಶ್ರೀರಾಮ್, ಅಭಿಜಿತ್, ಬ್ಯಾಂಕ್ ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Women’s Cooperative Bank announces 12% dividend for customers

Related posts

ಸುಳ್ಳು ಆರೋಪ ಮಾಡಿದ ಆರೋಪಿಗಳ ಗಡಿಪಾರು ಮಾಡಬೇಕು

Team Suddigara

ದತ್ತಮಾಲಾ ಕಾರ್ಯಕ್ರಮ ಶಾಂತಿಯುತ ತೆರೆ

Team Suddigara

ಸರ್ಕಾರ ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳನೇಕು

Team Suddigara

Leave a Comment