May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಪದವೀಧರರ ಸಂಘಕ್ಕೆ 14.71 ಲಕ್ಷ ರೂ.ಗಳ ನಿವ್ವಳ ಲಾಭ

ಚಿಕ್ಕಮಗಳೂರು:  ಸಹಕಾರಿ ರಂಗದಲ್ಲಿನ ಬಹಳಷ್ಟು ಸವಾಲುಗಳ ನಡುವೆ ಪದವೀ ಧರರ ಸಂಘ ಹತ್ತು ವರ್ಷದಿಂದ ಸದಸ್ಯರಿಗೆ ಶೇ.೧೦ ಡಿವಿಡೆಂಟ್ ಒದಗಿಸಿಕೊಡುವ ಮೂಲಕ ಶ್ರೇಯೋಭಿ ವೃದ್ಧಿಗೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಹೇಳಿ ದರು.

ನಗರದ ಬಸವನಹಳ್ಳಿ ಸಮೀಪದ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಶನಿ ವಾರ ಸರ್ವಸದಸ್ಯರ ೨೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿ ನಲ್ಲಿ ೧೪.೭೧ ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಗಟ್ಟಿಯಾಗಿದೆ ಎಂದು ತಿಳಿಸಿದರು.

ಸದಸ್ಯರಿಗೆ ವೈಯಕ್ತಿಕ ೨ ಲಕ್ಷ ರೂ.ಗಳ ಸಾಲಸೌಲಭ್ಯದ ವ್ಯವಸ್ಥೆಯನ್ನು ಸಕಲ ಭದ್ರತೆಯಡಿ ಹೆಚ್ಚಳಗೊ ಳಿಸುವ ವಿಚಾರವನ್ನು ತೀರ್ಮಾನಿಸಲಾಯಿತು. ಅಲ್ಲದೇ ೭೫ ಲಕ್ಷ ಸಾಲಸೌಲಭ್ಯವನ್ನು ಮುಂದೆ ಹೆಚ್ಚಳಗೊಳಿ ಸುವ ಗುರಿಯಿದೆ. ಜೊತೆಗೆ ಪದವಿಧರರ ಸಂಘದ ಸದಸ್ಯರಾಗಿ ಠೇವಣಿ ಹೂಡಿಸಿದ್ದಲ್ಲಿ ಸದಸ್ಯರಿಗೂ ಅನುಕೂಲವಾಗುವ ಜೊತೆಗೆ ಸಂಘವು ಆರ್ಥಿಕವಾಗಿ ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದರು.

ಸಾಲಸೌಲಭ್ಯ ಒದಗಿಸುವ ಜೊತೆಗೆ ವಸೂಲಾತಿ ಕಾರ್ಯವು ಯಶಸ್ಸಿನಿಂದ ಸಾಗುತ್ತಿದೆ. ಇತರೆ ಸಹಕಾ ರಿ ಸಂಘ, ಬ್ಯಾಂಕ್‌ಗಳು ಹೊರತಾಗಿ ಪದವೀಧರರ ಸಂಘವು ಸದಸ್ಯರಿಗೆ ಹೆಚ್ಚು ಸ್ಪಂದಿಸುತ್ತಿದೆ. ಅಲ್ಲದೇ ಎಲ್ಲಾ ರೀತಿಯ ಸೌಕರ್ಯವು ಕಲ್ಪಿಸುತ್ತಿರುವ ಪರಿಣಾಮ ಪದವೀಧರರ ಸಂಘವು ಮುಂಚೂಣಿಯಲ್ಲಿರಲು ಸಾಧ್ಯವಾಗಿದೆ ಎಂದು ಹೇಳಿದರು.

ನಗರದ ಬಹುತೇಕ ಸಹಕಾರಿ ಸಂಘದ ಆಡಳಿತ ಮಂಡಳಿ ಮನೆ ಮನೆ ತಿರುಗಿ ಸಂಘದ ಧ್ಯೇಯೋ ದ್ದೇಶವನ್ನು ಜನತೆಗೆ ಮನವರಿಕೆ ಮಾಡಿಕೊಟ್ಟಿರುವುದರಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾ ಗಿದೆ. ಆ ನಿಟ್ಟಿನಲ್ಲಿ ಪದವೀಧರರ ಸಂಘವು ಹೆಚ್ಚಿನ ಶ್ರಮವಿಟ್ಟು ಕಾರ್ಯನಿರ್ವಹಿಸಿ ಸಂಘದ ಬೆಳ ವಣಿಗೆಗೆ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

ಸಂಘದ ನಿರ್ದೇಶಕ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಸದಸ್ಯರುಗಳ ಸಹಕಾರದಿಂದ ಸ ಂಘವು ಆರ್ಥಿಕ, ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುತ್ತಿದೆ. ಸಂಘದಲ್ಲಿ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ನೇರವಾಗಿ ಸಂಪರ್ಕಿಸಿ ಬಗೆಹರಿಸಿಕೊಂಡಲ್ಲಿ ಸಂಘವು ಸಮಾಜದ ಮುಂದೆ ಶಕ್ತಿಶಾಲಿಯಾಗಿ ಹೊರಹೊಮ್ಮ ಲು ಸಾಧ್ಯವಾಗಲಿದೆ ಎಂದರು.

ಇದೇ ವೇಳೆ ಸಂಘದ ವ್ಯವಸ್ಥಾಪಕ ಸಿ.ಎಂ.ನಾರಾಯಣಸ್ವಾಮಿ ವಾರ್ಷಿಕ ಲೆಕ್ಕ ಪರಿಶೋಧನೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮರುಳಪ್ಪ, ನಿರ್ದೇಶಕರುಗಳಾದ ಎಂ. ಸಿ.ಶಿವಾನಂದಸ್ವಾಮಿ, ಸಿ.ಆರ್.ಪ್ರೇಮ್‌ಕುಮಾರ್. ಎ.ಎನ್.ಮಹೇಶ್, ಯು.ಟಿ.ನಾಗರಾಜ್, ಕೆ.ವೆಂಕಟೇಶ್ ಪೈ, ಬಿ.ಹೆಚ್.ಶಂಕರ್, ಎಂ.ಪಿ.ಗಂಗೇಗೌಡ, ಸಿ.ಪಿ.ದುಗ್ಗೇಗೌಡ, ಗೋವಿಂದೇಗೌಡ ಮತ್ತಿತರರಿದ್ದರು.

Net profit of Rs. 14.71 lakhs for the Graduate Association

Related posts

ಯುವಜನತೆ ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು

Team Suddigara

ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆ ಯೋಜನೆಗೆ ನಿಧಿ ಬಿಡುಗಡೆ ಮಾಡಲು ಪ್ರಸ್ತಾವನೆ

Team Suddigara

ಬುಡಕಟ್ಟು ಜನಾಂಗದ ಅಸಾಮಾನ್ಯ ಮಹಾ ಪುರುಷ ಬಿರ್ಸಾಮುಂಡಾ

Team Suddigara

Leave a Comment