ಚಿಕ್ಕಮಗಳೂರು: ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಅಂಜಿಕೆಯಿಲ್ಲದೆ ಪ್ರದರ್ಶಿಸಬೇಕು. ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡು ಆತ್ಮಸ್ಥೈರ್ಯದಿಂದ ಮುಂದೆ ಬರಬೇಕು ಎಂದು ಮಿಸೆಸ್ ಇಂಡಿಯಾ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ಸಾಲಿಯಾನ್ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿ.ಕೆ.ರಘು ವಾಯ್ಸ್ ಆಫ್ ನೇಚರ್ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಬಹುತೇಕ ಕಲಾವಿದರಿಗೆ ಅವಕಾಶಗಳು ದೊರೆಯುವುದು ವಿರಳ. ಇಲ್ಲಿನ ವಾಯ್ಸ್ ಆಫ್ ನೇಚರ್ ಇಂತಹ ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷ. ದನಿಯಿದ್ದವರಿಗೆ ಇದೊಂದು ಸುವರ್ಣ ಅವಕಾಶ. ಇಲ್ಲಿ ಅರಳಿದ ಕಲಾವಿದರ ಪಯಣ ರಾಜ್ಯಮಟ್ಟದವರೆಗೂ ಸಾಗಲಿ ಎಂದು ಹಾರೈಸಿದರು.
ಮೇಘಮಾಲೆ ಚಲನಚಿತ್ರದ ನಾಯಕ ನಟ ಸುನಾದ್ ರಾಜ್ ಮಾತನಾಡಿ, ತಮ್ಮಲ್ಲಿರುವ ಕಲೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ ನಮ್ಮ ಮನಸ್ಸು ಅರಳುತ್ತದೆ. ವೀಕ್ಷಕರಿಗೂ ಮುದ ನೀಡುತ್ತದೆ. ಸಂಗೀತ ಎಂತಹವರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ ಎಂದರು.
ಸಿನೆಮಾ ನಿರ್ದೇಶಕ ಅಶೋಕ್ ಕಡಬ ಮಾತನಾಡಿ, ಎಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಕಾರ್ಯಕ್ರಮದ ಆಯೋಜಕ ವಕೀಲ, ನೋಟರಿ, ಕಲಾವಿದ ವಿ.ಕೆ.ರಘು ಮಾತನಾಡಿ ಶುಭಹಾರೈಸಿದರು. ಬೆಂಗಳೂರು, ಮಂಗಳೂರು, ಕಾರವಾರ, ಮೈಸೂರು, ಹಾಸನ ಮತ್ತಿತರೆ ಜಿಲ್ಲೆಯಿದ ೧೦೦ ಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದರು. ಮೂಡಿಗೆರೆ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾವಿದರ ತಂಡ ಜಾನಪದ ಗೀತಗಳ ಮೂಲಕ ಜನಮನ ಸೆಳೆಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಕಲಾವಿದ ಎ.ಎನ್.ಮೂರ್ತಿ, ಜಯರಾಂ ಮತ್ತಿತರರಿದ್ದರು. ಕಲಾವಿದರಾದ ಬಕ್ಕಿ ಮಂಜುನಾಥ, ಸ್ವಾಮಿ ಸೋಮಶೇಖರ, ಮೂರ್ತಿ, ಹರೀಶ್, ವಿರೂಪಾಕ್ಷ, ನಿರ್ಮಾಪಕ ಮಾದೇಶ್, ಸಿನೆಮಾ ಕೆಮೆರಾಮನ್ ಸಿದ್ದು, ಪ್ರತಿಭಾ ಸಾಲಿಯಾನ್ ಮತ್ತಿತರರನ್ನು ಗೌರವಿಸಲಾಯಿತು. ಮಾಗಡಿ ವಿರೂಪಾಕ್ಷ ನಿರೂಪಣೆ ಮಾಡಿದರು.
Artists should display their talent without fear.
.

Leave a Reply