ಫ್ಲವರ್ ಬಾಯ್ಸ್ ವತಿಯಿಂದ ಗಣೇಶೋತ್ಸವ ಮೆರವಣಿಗೆ

ಚಿಕ್ಕಮಗಳೂರು: ದೇಶಭಕ್ತಿ ಮತ್ತು ದೈವಭಕ್ತಿಯನ್ನು ಜನರಲ್ಲಿ ಮೂಡಿಸುವುದೇ ಗಣೇಶೋತ್ಸವದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

ಅವರು ಇಂದು ನಗರದ ರಾಮನಹಳ್ಳಿ ಬಡಾವಣೆಯಲ್ಲಿ ಫ್ಲವರ್ ಬಾಯ್ಸ್ ವತಿಯಿಂದ ಏರ್ಪಡಿಸಲಾಗಿದ್ದ ೨೬ನೇ ವರ್ಷದ ಗಣೇಶೋತ್ಸವ ಮೆರವಣಿಗೆಗೆ ಚಾಲನೆ ನೀಡಿ ಜಿಲ್ಲೆಯಲ್ಲಿ ಪ್ರಥಮವಾಗಿ ಅದ್ದೂರಿ ರಥ ಸಿದ್ಧಪಡಿಸಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಜಾತೀಯತೆ ಮತ್ತು ಅಸ್ಪೃಶ್ಯತೆಗೆ ಜಾಗ ಇಲ್ಲದಂತೆ ನೋಡಿಕೊಳ್ಳುವುದು ಗುರಿಯಾಗಿದ್ದು, ನಾವೆಲ್ಲಾ ಹಿಂದೂ ಬಂಧು ಎಂಬ ಮನೋಭಾವ ಬೆಳೆಸಬೇಕೆಂಬುದು ಗಣೇಶೋತ್ಸವ ಆಚರಣೆಯ ಉದ್ದೇಶ ಎಂದರು.

ರಾಮನಹಳ್ಳಿಯಲ್ಲಿ ಆಯೋಜಿಸಿರುವ ಗಣೇಶೋತ್ಸವ ದೈವಭಕ್ತಿ ಜೊತೆಗೆ ದೇಶಭಕ್ತಿ ಜೋಡಿಸುವ ಪ್ರತೀಕವಾಗಿದೆ. ಜಾತೀಯತೆ, ಅಸ್ಪೃಶ್ಯತೆ ದೂರಮಾಡಿ, ನಾವೆಲ್ಲಾ ಹಿಂದೂ ಬಂಧುತ್ವ ಭಾವನೆ ಬೆಳೆಯಲು ಗಟ್ಟಿಗೊಳಿಸಲಿ ಎಂದು ಶುಭಹಾರೈಸಿದರು.

ಅರ್ಜುನನ ನೇತೃತ್ವದಲ್ಲಿ ಅಭಿಮನ್ಯು ಎಲ್ಲಾ ಸವಾಲುಗಳನ್ನು ಎದುರಿಸಿದ್ದು ಇತಿಹಾಸವಾಗಿದ್ದು, ಅದೇ ರೀತಿ ಹಿಂದೂ ಸಮಾಜಕ್ಕೆ ಬರುವ ಸವಾಲು ಮತ್ತು ದೇಶಕ್ಕೆ ಬರುವ ಸವಾಲನ್ನು ಎದುರಿಸಿ ಜಯಶಾಲಿಯಾಗಲಿ ಎಂದು ಹೇಳಿದರು.

ಹೂವಾಡಿಗರ ಸಮುದಾಯ ಭವನ ನಿರ್ಮಾಣಕ್ಕೆ ತನು, ಮನ, ಧನ ನೀಡಿ ಸಹಕರಿಸಿ ಬೆಂಬಲಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಫ್ಲವರ್ ಬಾಯ್ಸ್ ಯುವಕರ ಬಳಗದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Flower Boys’ Ganesh Festival procession

Comments

Leave a Reply

Your email address will not be published. Required fields are marked *