Tag: Enter as Shepherd in the caste survey

  • ಜಾತಿ ಸಮೀಕ್ಷೆಯಲ್ಲಿ ಕುರುಬ ಎಂದು ನಮೂದಿಸಿ

    ಜಾತಿ ಸಮೀಕ್ಷೆಯಲ್ಲಿ ಕುರುಬ ಎಂದು ನಮೂದಿಸಿ

    ಚಿಕ್ಕಮಗಳೂರು: ಸರ್ಕಾರ ಇದೇ ಸೆ.೨೨ ರಿಂದ ಅ.೭ ರವರೆಗೆ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಗಣತಿದಾರರು ಮನೆಗೆ ಬಂದಾಗ ಜಾತಿ ಕಾಲಂ ಸಂಖ್ಯೆ ೯ ರಲ್ಲಿ ಂ-೦೮೦೯ ಕುರುಬ ಎಂದು ಬರೆಸುವಂತೆ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್ ಶಾಂತೇಗೌಡ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.

    ಅವರು ಇಂದು ಕನಕ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡಿದ್ದು, ಸಮಾಜದ ಮುಖಂಡರು ಸಮುದಾಯದ ಪ್ರತಿ ಮನೆಗೆ ಭೇಟಿನೀಡಿ ಮನವರಿಕೆ ಮಾಡಬೇಕೆಂದು ಸೂಚನೆ ನೀಡಿ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕು ಕುರುಬರ ಸಂಘದ ಪದಾಧಿಕಾರಿಗಳು, ಮುಖಂಡರು ಸಮಾಜ ಬಾಂಧವರಿಗೆ ಈ ಕುರಿತು ಮನವರಿಕೆ ಮಾಡಬೇಕೆಂದು ಕರೆನೀಡಿದ್ದೇವೆ ಎಂದರು.

    ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಪುಟ್ಟೇಗೌಡ ಮಾತನಾಡಿ, ಜಾತಿ ಸಮೀಕ್ಷೆಯಲ್ಲಿ ರಾಜ್ಯ ಕುರುಬರ ಸಂಘದ ಸೂಚನೆ ಮೇರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರಚಾರ ಮಾಡುತ್ತಿದ್ದು, ಗಣತಿದಾರರಿಗೆ ಹಿಂದೂ, ಕುರುಬ, ಕಸುಬು ಕಾಲಂನಲ್ಲಿ ಕುರಿ ಸಾಕಾಣಿಕೆ ಎಂದು ಬರೆಸಬೇಕು, ಯಾವುದೇ ಗೊಂದಲ ಮಾಡಿಕೊಳ್ಳಬಾರದು ಎಂದು ವಿನಂತಿಸಿದರು.

    ನಿರ್ದೇಶಕ ಕೆಂಪನಹಳ್ಳಿ ಪುಷ್ಟರಾಜ್ ಮಾತನಾಡಿ, ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಗಣತಿದಾರರು ಮನೆಗೆ ಬಂದಾಗ ಹಿಂದೂ, ಜಾತಿ ಕಾಲಂನಲ್ಲಿ ಕುರುಬ, ಕಸುಬು ಕಾಲಂನಲ್ಲಿ ಕುರಿ ಸಾಕಾಣಿಕೆ ಎಂದು ಬರೆಸುವಂತೆ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಮನವಿ ಮಾಡುತ್ತಿದ್ದೇವೆ ಎಂದರು.

    ನಿರ್ದೇಶಕಿ ರೇಖಾಪುಲಿಯಪ್ಪಗೌಡ ಮಾತನಾಡಿ, ಸಮಾಜದ ಬಂಧುಗಳಲ್ಲಿ ಜಾತಿ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂದು ಸಭೆ ನಡೆಸಲಾಗಿದ್ದು, ಪ್ರತಿ ಗ್ರಾಮ, ಪಂಚಾಯಿತಿಯಿಂದ ಸಮಾಜದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡುವಂತೆ ಮನೆಗೆ ಭೇಟಿನೀಡಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಇನ್ನೋರ್ವ ಮುಖಂಡ ಹೆಚ್.ಪಿ ಮಂಜೇಗೌಡ ಮಾತನಾಡಿ, ಜಾತಿ ಸಮೀಕ್ಷೆಯಲ್ಲಿ ಗೊಂದಲಕ್ಕೊಳಗಾಗದೆ ಹಿಂದೂ ಕುರುಬ ಎಂದು ತಪ್ಪದೆ ಸರಿಯಾದ ಮಾಹಿತಿ ನೀಡಿ ಬರೆಸಲು ವಿನಂತಿಸಿದ ಅವರು, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಬಗ್ಗೆ ತಲೆಕೆಡಿಸಿಕೊಳ್ಳದೆ ಹಾಲಿ ಕುರುಬ ಎಂದು ಬರೆಸಿ ಸರ್ಕಾರದಿಂದ ಸಿಗುವ ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

    ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಕೆ.ವಿ ಮಂಜುನಾಥ್, ಕೆಂಪನಹಳ್ಳಿ ಪುಷ್ವರಾಜ್, ಖಜಾಂಚಿ ಸಿದ್ದೇಗೌಡ, ನಿರ್ದೇಶಕರುಗಳಾದ ಈಶ್ವರಹಳ್ಳಿ ಮಹೇಶ್, ತ್ರಿಭುವನ್, ಮಣ್ಣೇನಹಳ್ಳಿ ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ್, ಎನ್.ಟಿ ಚಂದ್ರಪ್ಪ, ಸಚಿನ್, ಎತ್ತಿನಮನೆ ದಾಸೇಗೌಡ, ಕನಕ ಮಹಿಳಾ ಮಂಡಳಿ ಅಧ್ಯಕ್ಷೆ ಶಾರದಮ್ಮ ಮಾಸ್ತಿಗೌಡ ಮತ್ತಿತರರು ಉಪಸ್ಥಿತರಿದ್ದರು.

    Enter as Shepherd in the caste survey