Tag: Give a befitting reply to those who spread slander against religion.

  • ಧರ್ಮದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕಉತ್ತರ ನೀಡಿ

    ಧರ್ಮದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕಉತ್ತರ ನೀಡಿ

    ಚಿಕ್ಕಮಗಳೂರು:  ಸನಾತನ ಹಿಂದುತ್ವ ಧರ್ಮವನ್ನು ಉಳಿಸಲು ಧರ್ಮಸ್ಥಳದಲ್ಲಿ ಸೇವೆ ಸಲ್ಲಿಸುವ ಧರ್ಮಾಧಿಕಾರಿ ಹಾಗೂ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕಪಾಠ ಕಲಿಸು ವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿ ಎಂದು ಪತ್ರಕರ್ತ ವಸಂತ್ ಗಿಳಿಯಾರ್ ಹೇಳಿದರು.

    ನಗರದ ಬಸವನಹಳ್ಳಿ ಸಮೀಪದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ‘ಸತ್ಯ ಅರಿಯೋಣ ಬನ್ನಿ’ ಎಂಬ ಕಾರ್ಯಕ್ರಮದಲ್ಲಿ ಬುಧವಾರ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

    ಹಿಂದೂಗಳ ಪವಿತ್ರ ಆರಾಧ್ಯ ಕ್ಷೇತ್ರವಾಗಿರುವ ಧರ್ಮಸ್ಥಳದ ಏಳಿಗೆಯನ್ನು ಸಹಿಸಿಕೊಳ್ಳಲಾಗದ ಕೆಲವ ರು ಸನ್ನಿಧಾನವನ್ನು ಅಪಚಾರಗೊಳಿಸಲು ಒಂದಿಲ್ಲೊಂದು ಪ್ರಕರಣವನ್ನು ತಂದಿಡುತ್ತಿವೆ. ಇದರಿಂದ ಕ್ಷೇತ್ರದ ಧರ್ಮಾಧಿಕಾರಿಗಳಿಗೆ ನೋವು, ಸಂಕಟ ಎದುರಾದರೂ ಈ ಕಾಲದ ಜನಾಂಗದವರು ಅಭಿಮಾನ ಶೂನ್ಯ ರಾಗಿರುವುದು ದುರ್ದೈವ ಸಂಗತಿ ಎಂದರು.

    ಸೌಜನ್ಯ ಹೆಣ್ಣು ಮಗಳ ಸಾವಿನ ತನಿಖೆ ನಡೆಸಲು ಮೊದಲು ಧರ್ಮಾಧಿಕಾರಿಗಳೇ ಪತ್ರಬರೆದವರು. ಈ ಪ್ರಕರಣದಲ್ಲಿ ಕೆಲವು ರಾಜಕೀಯ ಪಕ್ಷಗಳು ಪ್ರಕರಣವನ್ನು ತಿರುಚಿ ಕ್ಷೇತ್ರಕ್ಕೆ ಅಪಚಾರಗೊಳಿಸುವುದೇ ಮೂಲಧ್ಯೇವಾಗಿದ್ದು ಈ ಕಾರಣದಿಂದ ನಿರಂತರವಾಗಿ ಸುಳ್ಳಿನ ಕಥೆಯನ್ನು ಕಟ್ಟುತ್ತಿವೆ ಎಂದು ದೂರಿದರು.

    ಸೌಜನ್ಯ ಸಾವಿನಿಂದ, ಅಂತ್ಯಸಂಸ್ಕಾರದವರೆಗೆ ಸಾಕ್ಷಿಗಳನ್ನು ಮರೆಮಾಚಲು ಯತ್ನಿಸಲಾಗಿದೆ. ಈ ನಡು ವೆ ಕೆಲವು ಟ್ಯೂಬರ್‌ಗಳು ಎಐ ವೀಡಿಯೋ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿವೆ. ಅದ ನ್ನೇ ನಂಬಿಕೆಕೊಂಡು ಪವಿತ್ರ ಕ್ಷೇತ್ರವನ್ನು ದೂರುವುದು ಸರಿಯಲ್ಲ. ಅಸತ್ಯದ ಕಥೆಗಳನ್ನು ಟ್ಯೂಬರ್‌ಗಳು ಬ ಳಸಿಕೊಂಡು ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ ಎಂದರು.

    ತಲೆಬುರುಡೆ ಹುಡುಕಿಕೊಂಡು ಬಂದ ಅನಾಮಿಕ ವ್ಯಕ್ತಿಯ ಸುಳ್ಳಿನ ಕಥೆ ಬಯಲಾಗಿದೆ. ಸುಜಾತಭಟ್ ಅಸತ್ಯವು ಎಲ್ಲಾರೆದುರು ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ನಂಬಿಕೊಂಡಿದ್ದ ಅದೆಷ್ಟೋ ಭಕ್ತರು, ತಪ್ಪು ಕಾಣಿಕೆಯನ್ನು ಸಲ್ಲಿಸಲು ಕ್ಷೇತ್ರಕ್ಕೆ ಧಾವಿಸುತ್ತಿದ್ದಾರೆ. ಹಿಂದೂಗಳು ದೈವ, ಧರ್ಮದ ಬಗ್ಗೆ ಅಪನಂಬಿಕೆ ಹುಟ್ಟಿ ಸುವವರ ವಿರುದ್ಧ ಧರ್ಮಾಧಿಕಾರಿಗಳ ಕೈಬಲಪಡಿಸಬೇಕು ಎಂದರು.

    ಧರ್ಮಸ್ಥಳ ಧರ್ಮಾಧಿಕಾರಿ ಕೇವಲ ಕ್ಷೇತ್ರದಲ್ಲಿ ಪೂಜಾಕೈಂಕಾರ್ಯಗೆ ಸೀಮಿತವಾಗಿಲ್ಲ. ಸಾವಿರಾರು ತುಳುತುಟಿ ಮಕ್ಕಳಿಗೆ ಉಚಿತ ಚಿಕಿತ್ಸೆ, ಸಾಮೂಹಿಕ ಮದುವೆ, ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ, ಲೆಕ್ಕವಿಲ್ಲದಷ್ಟು ದೇವಾಲಯಗಳಿಗೆ ಅನುದಾನ, ಜೀರ್ಣೋದ್ದಾರಕ್ಕೆ ಸಹಾಯಹಸ್ತ ನೀಡಿದೆ ಅಲ್ಲದೇ ಸಹಪಂಥೀಯ ಬೋ ಜನಕ್ಕೆ ಮೊದಲು ಹೆಜ್ಜೆಯಿಟ್ಟು ದೊಡ್ಡ ಕ್ರಾಂತಿಯನ್ನೇ ಧರ್ಮಾಧಿಕಾರಿ ಮಾಡಿದ್ದಾರೆ ಎಂದರು.

    ದೇವಾಲಯ ನಮ್ಮ ಸ್ವತ್ತು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಹಿರೇಮಗಳೂರು ಕಣ್ಣನ್ ಮ ನುಷ್ಯನನ್ನು ಎಚ್ಚರಿಸುವ, ಸಂಸ್ಕಾರ, ಸಂಸ್ಕೃತಿ ಕಲಿಸುವ ಹಾಗೂ ಸಮಭಾಂಧವ್ಯ ಮೂಡಿಸುವುದು ದೇವಾಲ ಯಗಳು. ಮೊದಲು ದೇಹದೊಳಗಿನ ದೇವಾಲಯ ಶುದ್ಧವಾಗಿರಬೇಕು. ಆಗಮಾತ್ರ ಭಗವಂತನ ಕೃಪೆಗೆ ಪಾ ತ್ರರಾಗಬಹುದು ಎಂದು ಹೇಳಿದರು.

    ಹಿಂದೂ ಎಂದರೆ ಐದು ಗ್ಯಾರಂಟಿ, ಸರ್ಕಾರ ನೀಡಿದ್ದಲ್ಲ. ಪಂಚಭೂತಗಳಲ್ಲಿರುವ ಸಮ್ಮೀಲನದ ಶಕ್ತಿ. ದೇವಾಲಯ ಜಾತಿ ಸಂಕುಚಿತ ಭಾವನೆ ಇಲ್ಲದೇ ಕರೆದುಕೊಂಡು ಸಾಗುವ ಶ್ರದ್ದಾಕೇಂದ್ರ. ಕೈಮುಗಿದು ಒಳ ಪ್ರವೇಶಿದರೆ ಬದುಕಿನ ಸಂಕಟವನ್ನು ಸಣ್ಣದೆಂದು ತಿಳಿದು ಆತ್ಮವಿಶ್ವಾಸದಿಂದ ಹೊರಬರುವ ಆರ್ಶೀವಾದ ದೇವರ ಸನ್ನಿಧಾನದಲ್ಲಿದೆ ಎಂದು ತಿಳಿಸಿದರು.

    ಸಾಹಿತಿ ನಾಗಶ್ರೀ ತ್ಯಾಗರಾಜ್ ಮಾತನಾಡಿ ಗುಡಿಯೊಳಗೆ ತೆರಳುವ ಮುನ್ನ ಹಣ್ಣು-ಹಂಪಲು, ಹೂವು ಸಾಮಾನ್ಯವಾಗಿರುತ್ತವೆ. ಪೂಜೆ ನೆರವೇರಿಸಿದ ನಂತರ ಎಲ್ಲವೂ ಪ್ರಸಾದವಾಗಿ ಕಣ್ಣೋತ್ತಿಕೊಂಡು ಇರಿಸುತ್ತೇ ವೆ. ಹಾಗೆಯೇ ಮನುಷ್ಯ ಗುಡಿಯೊಳಗೆ ಪ್ರವೇಶಿ ಹೊರಬಂದ ನಂತರ ಸಾತ್ವಿಕ ಜೀವನತ್ತ ಚಿಂತಿಸಿ, ಸನ್ನಡತೆ ಯ ದಾರಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ, ಕಾರ್ಯದರ್ಶಿ ಕೃಷ್ಣ ಹಾಗೂ ಸದಸ್ಯರುಗಳು, ಭಕ್ತಾಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

    Give a befitting reply to those who spread slander against religion.