ಹರಪನಹಳ್ಳಿ: ಪ್ರಾಚೀನ ಇತಿಹಾಸ ಮತ್ತು ಪರಂಪರೆ ಹೊಂದಿದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳಲ್ಲಿ ಸಾಮರಸ್ಯ ಬೆಳೆದು ಬರುವ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ಹರಪನಹಳ್ಳಿಗೆ ಸಮೀಪದಲ್ಲಿರುವ ಕಾಯಕದಹಳ್ಳಿ ಶ್ರೀ ಮಯೂರಿ ಸಭಾಂಗಣದಲ್ಲಿ ಸೋಗಿ ಎ.ಎಂ. ಹಾಲಯ್ಯ ಶಾಸ್ತ್ರಿಗಳವರ ೯೦ನೇ ವ?ದ ಜನ್ಮದಿನೋತ್ಸವದ ನಿಮಿತ್ಯ ಜರುಗಿದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ವೀರಶೈವ ಲಿಂಗಾಯತ ಇವೆರಡು ಒಂದೇ ಆಗಿದ್ದು ಯಾವುದೇ ಭಿನ್ನ ಭಾವನೆಗಳಿಲ್ಲ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಇವೆರಡರಲ್ಲಿ ಭೇದವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಬರಲಿರುವ ಜಾತಿ ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂಜಇ ಬರೆಯಿಸಿ ಧರ್ಮದ ಸಮಗ್ರತೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಅವಶ್ಯಕತೆ ಇದೆ. ೨೮ ಆಗಮಗಳ ಉತ್ತರ ಭಾಗದಲ್ಲಿ ವೀರಶೈವ ಧರ್ಮದ ಹಿರಿಮೆ ಮತ್ತು ಪ್ರಾಚೀನತೆಯನ್ನು ಕಾಣಬಹುದಾಗಿದೆ.
ಬಸವಾದಿ ಶರಣರು ಈ ಶ್ರೇ?ವಾದ ಧರ್ಮ ಪರಂಪರೆಯಲ್ಲಿ ಬೆಳೆದು ಈ ಧರ್ಮವನ್ನು ಮತ್ತ? ಬೆಳೆಸಿದ ಇತಿಹಾಸ ಸೂರ್ಯ ಪ್ರಕಾಶದ? ಸತ್ಯವಾಗಿದೆ. ಕೆಲವರು ವಿನಾಕಾರಣ ದ್ವಂದ್ವಗಳನ್ನು ಹುಟ್ಟುಹಾಕಿ, ಧರ್ಮದ ಘನತೆ ಗೌರವಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ. ೨೦ ವ?ಗಳ ಹಿಂದಿನ ಪಠ್ಯಪುಸ್ತಕದಲ್ಲಿ ಬಸವಣ್ಣನವರು ವೀರಶೈವ ಲಿಂಗಾಯತ ಧರ್ಮದ ಸುಧಾರಕರೆಂದು ಸ್ಪ?ಪಡಿಸಿದ ದಾಖಲೆಗಳಿವೆ.
ಎಲ್ಲ ಪಂಗಡಗಳನ್ನು ಒಂದೆಡೆ ಬೆಸೆಯುವ ಕೆಲಸವನ್ನು ಬಸವಣ್ಣನವರು ಮಾಡಿದರೆ ಇಂದಿನ ಅವರ ಅನುಯಾಯಿಗಳು ಅವರ ವಿಚಾರಧಾರೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ. ಹುಸಿಯ ನುಡಿಯಲು ಬೇಡ ಎಂಬ ಅವರ ಮಾತಿನಂತೆ ನಡೆದುಕೊಳ್ಳುವುದು ಬಹಳ? ಉತ್ತಮ ಮಾರ್ಗ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ವೀರಶೈವ ಮತ ಸಿದ್ಧಾಂತವನ್ನು ಭೂಮಂಡಲದಲ್ಲಿ ಸ್ಥಾಪಿಸಿದರೆ ಬಸವಾದಿ ಶರಣರು ಅದನ್ನು ಮತ್ತ? ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಾತಿ ಜನಗಣತಿಯ ಸಂದರ್ಭದಲ್ಲಿ ಭಾವನಾತ್ಮಕವಾಗಿ ಒಂದುಗೂಡಿ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ ಎಂದರು.
ಹರಪನಹಳ್ಳಿ ಕ್ಷೇತ್ರದ ಶಾಸಕಿ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಸಮಾರಂಭ ಉದ್ಘಾಟಿಸಿ ವೀರಶೈವ ಲಿಂಗಾಯತ ಧರ್ಮದ ಸಮಗ್ರತೆಯಲ್ಲಿ ನಮ್ಮೆಲ್ಲರ ಹಿತ ಮತ್ತು ಪ್ರಗತಿ ಒಳಗೊಂಡಿದೆ ಎಂದರು. ಸಂಸ್ಥಾನ ತಗ್ಗಿನ ಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮತ್ತು ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮನಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನು ನೀಡಿದರು. ಡಾ ಚಂದ್ರಶೇಖರಯ್ಯ ಮತ್ತು ಸದ್ಯೋಜಾತಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಎ.ಎಂ ಹಾಲಯ್ಯ ಶಾಸ್ತ್ರಿಗಳು ಸನ್ಮಾನಕ್ಕೆ ಉತ್ತರಿಸಿ ನನ್ನ ಪೂರ್ವಾರ್ಜಿತದ ಪುಣ್ಯದ ಫಲದ ಸುದಿನ. ಇಂದು ಈ ಭಾಗದ ಭಕ್ತರರೆಲ್ಲರೂ ಭಾವನೆಗಳಿಗೆ ಸಂಸ್ಕಾರ ಕೊಡುವಂತ ಕೆಲಸವನ್ನು ಪರಮಾಚಾರ್ಯರ ಆಶೀರ್ವಾದದಿಂದ ಮಾಡುತ್ತಾ ಬಂದಿರುವೆ. ಕಾರ್ಯಕ್ರಮ ಸಂಘಟಿಸಿದ ಮತ್ತು ಆಗಮಿಸಿದ ಎಲ್ಲ ಜನತೆಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು. ಚಿರಸ್ತಹಳ್ಳಿ ಕಲ್ಮಠದ ಮಲ್ಲಿಕಾರ್ಜುನ್ ನಿರೂಪಿಸಿದರು.
May harmony prevail among the Veerashaiva Lingayat community members.
