ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸಮಾಡಿದಾಗ ಗೌರವ

ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ರಾಷ್ಟ್ರಾಧ್ಯಕ್ಷ ವಿಜಯ್ ಹಾಗೂ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರನ್ನು ಅನುಗ್ರಹಿಸಿದರು.

ಶೃಂಗೇರಿ: ಪತ್ರಕರ್ತರು ಸಮಾಜದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅವರಿಗೆ ಗೌರವ ಸಿಗುತ್ತಿದೆ.ಹಿರಿಯ ಪತ್ರಕರ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಯತ್ನಕ್ಕೆ ನಾವು ಸ್ಪಂದಿಸಬೇಕು ಎಂದು ನವದೆಹಲಿ ಇಂಡಿಯನ್ ಫೆಡರೇಷನ್ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ.ವಿಜಯ್ ತಿಳಿಸಿದರು.

ಅವರು ಪ್ರವಾಸಿಮಂದಿರದಲ್ಲಿ ಸೋಮವಾರ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಣ್ಣಪತ್ರಿಕೆಯ ಸಂಘಗಳು ರಾಷ್ಟ್ರವ್ಯಾಪ್ತಿಯಾಗಿ ಬಹಳಷ್ಟು ಸಂಖ್ಯೆಗಳಲ್ಲಿ ಇವೆ.ಆದರೆ ಸಂಘಗಳು ಸಕ್ರಿಯವಾಗಿದ್ದರೆ ಮಾತ್ರ ಸಮುದಾಯ ಗುರುತಿಸುತ್ತದೆ.ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣಪತ್ರಿಕೆ ಸಂಪಾದಕರ ಸ್ಥಿತಿ ಏಕಪಾತ್ರಭಿನಯವಾಗಿದ್ದು ಅವರ ಜೀವನ ನಿರ್ವಹಣೆ ಬಲು ಕಷ್ಟಕರ ಎಂದ ಅವರು ಪತ್ರಕರ್ತರಲ್ಲಿ ಏಕತೆ,ಒಗ್ಗಟ್ಟು ಇದ್ದಾಗ ಮಾತ್ರ ಸಂಘದ ಜೊತೆ ಪರ್ತಕರ್ತರಿಗೂ ಮಾನ್ಯತೆ ದೊರಕುತ್ತದೆ ಎಂದರು.

ಸಂಘದ ನೂತನ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರು ಮಾತನಾಡಿ”ಪತ್ರಕರ್ತರ ಆರೋಗ್ಯ ರಕ್ಷಣೆ ಹಾಗೂ ಕುಟುಂಬ ನಿರ್ವಹಣೆಗೆ ಅವರು ಅರ್ಥಿಕವಾಗಿ ಸಬಲತೆ ಪಡೆದಿರುವ ಕಾರಣ ಮುಂಬರುವ ದಿನಗಳಲ್ಲಿ ಪತ್ರಕರ್ತರ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುವುದು.

ಪತ್ರಕರ್ತರಿಗೆ ಸಮಸ್ಯೆಗಳು ಎದುರಾದಾಗ ಎಲ್ಲರೂ ಮಾನವೀಯತೆಯಿಂದ ಪರಿಶ್ರಮಿಸಬೇಕಿದೆ ಎಂದ ಅವರು ಜಿಲ್ಲೆಯ ಅಜ್ಜಂಪುರ ಹಾಗೂ ಶೃಂಗೇರಿಯಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ಆದ್ಯತೆ ನೀಡಿ ಕೂಡಲೇ ಕಾರ್ಯಪ್ರವೃತ್ತರಾಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಶೃಂಗೇರಿಯ ನರಸಿಂಹವನದ ಗುರುನಿವಾಸದಲ್ಲಿ  ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ರಾಷ್ಟ್ರಾಧ್ಯಕ್ಷ ವಿಜಯ್ ಹಾಗೂ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರನ್ನು ಅನುಗ್ರಹಿಸಿದರು.ಸುಗುಣ,ದಿನೇಶ್ ಅಂಗುರ್ಡಿ,ಶೋಭಾ,ಸಸಿಮನೆಶಿವಶಂಕರ್,ಪ್ರಶಾಂತ್ ಕಡೂರು ಇದ್ದರು.

ಸಭೆಯಲ್ಲಿ ಸಂಘದ ಕಾನೂನು ಸಲಹೆಗಾರ ಅಮೃತೇಶ್ವರ,ತಾ|ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಆಗುಂಬೆ ಗಣೇಶ್ ಹೆಗಡೆ,ರಂಜಿತ್,ಸದಸ್ಯರಾದ ರಾಘವೇಂದ್ರ.ಕೆ.ಎನ್,ಗೋಪಾಲಕೃಷ್ಣ,ಅಭಿನವ್,ರಂಜಿತ್,ಸುಬ್ರಮಣ್ಯ ಆಚಾರ್ಯ,ಗಿರಿಜಾ ಪ್ರಸಾದ್ ಹಾಜರಿದ್ದರು.

Respect when journalists work honestly

Comments

Leave a Reply

Your email address will not be published. Required fields are marked *