June 15, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆ ಯೋಜನೆಗೆ ನಿಧಿ ಬಿಡುಗಡೆ ಮಾಡಲು ಪ್ರಸ್ತಾವನೆ

ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಾರ್ಯಕ್ರಮದ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ  ನಿಧಿಯ ಯೋಜನೆಯ ಕುರಿತು ನಡೆದ ಸಭೆ
ಚಿಕ್ಕಮಗಳೂರು:  ರಾಜ್ಯದಲ್ಲಿ ಕಾಳು ಮೆಣಸು, ಕಾಫಿ ಅಡಿಕೆ, ಇವುಗಳ ಸಂಸ್ಕರಣೆಗಾಗಿ ಚಿಕ್ಕಮಗಳೂರಿನಲ್ಲಿಯೇ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ಕೇಂದ್ರ ಸರ್ಕಾಕರಕ್ಕೆ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಡುಪಿ ಚಿಕ್ಕಮಗಳೂರು  ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಇಂದು  ನಡೆದ  ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಾರ್ಯಕ್ರಮದ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ  ನಿಧಿಯ ಯೋಜನೆಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಂದ್ರ ಸರ್ಕಾರದಿಂದ  ಶೇಕಡಾ ೯೦% ಅನುದಾನ  ಪಡೆದು ಉಳಿದ ಶೇಕಾಡ ೧೦%  ಅನುದಾನವನ್ನು  ಫಲಾನುಭವಿಗಳು ಭರಿಸಿ ಒಟ್ಟು ೨.೫೦ ಕೋಟಿಯಿಂದ ೫ ಕೋಟಿಯ ಯೋಜನೆ ಇದಾಗಿದೆ. ಇನ್ನು ಈ ಯೋಜನೆಯಡಿ ಕಾಳು ಮೆಣಸು, ತೆಂಗು, ಕಾಫಿ,  ಅಡಿಕೆ, ಖಾದಿ ಕೈಗಾರಿಕೆ, ಗ್ರಾಮ ಕೈಗಾರಿಕೆ, ಕಾಯರ್ ಇಂಡಸ್ಟ್ರೀಸ್ , ಇಂತಹ ಸಂಪ್ರದಾಯಿಕ ಕೈಗಾರಿಕೆಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ ಎಂದ ಅವರು ಈ ಯೋಜನೆಯ ಮೂಲ ಉದ್ದೇಶ ಸಾಂಪ್ರದಾಯಿಕ ಕೈಗಾರಿಕೆ ಮತ್ತು ಕುಶಲಕರ್ಮಿಗಳನ್ನು ಸಾಮೂಹಿಕವಾಗಿ ಸಂಘಟಿಸಲು ಅವರನ್ನು ಸ್ಪರ್ಧಾತ್ವಕವಾಗಿಸಲು ಹಾಗೂ ಅವರ ಧೀರ್ಘಾವಧಿಯ ಸುಸ್ಥಿರತೆ ಹಾಗೂ ಪ್ರಮಾಣ ಆರ್ಥಿಕತೆಗೆ ಬೆಂಬಲವನ್ನು ಒದಗಿಸುವುದು.
ಸಾಂಪ್ರಾದಾಯಿಕ ಉದ್ಯಮದ ಕುಶಲಕರ್ಮಿಗಳು ಮತ್ತು ಉತ್ಪಾದಕರಿಗೆ ನಿರಂತರ ಉದ್ಯೋಗವನ್ನು ಒದಗಿಸುವುದಲ್ಲದೇ ಹೊಸ ಉತ್ಪನ್ನಗಳಿಗೆ ಬೆಂಬಲ ನೀಡುವುದು. ಸುಧಾರಿತ ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ಅಂತಹ ಕ್ಲಷ್ಟರ್‌ಗಳ ಸಾಮೂಹಿಕ ಉತ್ಪನ್ನಗಳ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಯೋಜನೆ ಒಳಗೊಂಡಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ಉಪನಿರ್ದೇಶಕ ವೆಂಕಟೇಶ್ ಚೌಹಾಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Traditional Industries Regeneration Project

Related posts

ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದೇ ಸ್ವಚ್ಚತಾ ರ್‍ಯಾಲಿ ಉದ್ದೇಶ

Team Suddigara

ನಗರಸಭೆ ಆಸ್ತಿಗಳ ಡ್ರೋನ್ ಸರ್ವೆ ಮೂಲಕ ಗಣಕೀಕರಣ

Team Suddigara

ಸಾರ್ವಜನಿಕರ ಸಲಹೆ-ಸೂಚನೆ ಹಂತಹಂತವಾಗಿ ಅನುಷ್ಠಾನ

Team Suddigara

Leave a Comment