May 16, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಮಹಾನ್ ಪುರುಷರ ಜಯಂತಿ ಆಚರಿಸುತ್ತಿರುವುದು ಆಶಾದಾಯಕ ಬೆಳವಣಿಗೆ

ಚಿಕ್ಕಮಗಳೂರು: ಎಲ್ಲಾ ಸಮಾಜದ ಮಹಾನ್ ಪುರುಷರ ಜಯಂತಿಗಳನ್ನು ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳು ಆಚರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಅವರ ತತ್ವ ಸಿದ್ಧಾಂತಗಳು ಹಾಗೂ ವಿಚಾರಧಾರೆಗಳನ್ನು ಸರ್ವರೂ ಗೌರವಿಸಬೇಕಾದ ಅಗತ್ಯತೆ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ಅವರು ಇಂದು ಆಜಾದ್‌ಪಾರ್ಕ್ ವೃತದಲ್ಲಿ ಜಿಲ್ಲಾ ಸವಿತಾ ಸಮಾಜ ಹಾಗೂ ತಾಲೂಕು ಸವಿತಾ ಸಮಾಜ ಇವರ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀರಾಮನವಮಿ ಮತ್ತು ಹನುಮಜಯಂತಿ ಅಂಗವಾಗಿ ಶ್ರೀರಾಮಹನುಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪುರ್ಷ್ಪಾಚನೆ ಸಲ್ಲಿಸಿ ಮಾತನಾಡಿದರು.

ಇಂದು ಮಹಾನ್ ಪುರುಷರಿಲ್ಲದೇ ಇದ್ದರೂ ಅವರ ವಿಚಾರಧಾರೆಗಳು ಮತ್ತು ಸಿದ್ಧಾಂತಗಳು ಪ್ರಸ್ತುತವಾಗಿದ್ದು, ಪ್ರಪಂಚ ಇರುವವರೆಗೆ ಜೀವಂತವಾಗಿರುತ್ತವೆ ಎಂದು ಬಣ್ಣಿಸಿದರು. ನಮ್ಮ ಪೂರ್ವಜರು ಈ ಮಹಾನ್ ಪುರುಷರ ತತ್ವಾದರ್ಶಗಳನ್ನು ಪರಿಚಯಿಸಿದಂತೆ ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಿ-ಬೆಳಸಬೇಕಾದ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ವಿಚಾರ-ಸಿದ್ಧಾಂತಗಳ ಕುರಿತು ನ್ಯಾಯಾಧೀಶ ವಿ.ಹನುಮಂತಪ್ಪ ಅವರು ಜಯಂತಿ ಸಂದರ್ಭದಲ್ಲಿ ಜಾಗೃತಿ ಮೂಡಿಸಿದ್ದು ಶ್ಲಾಘನೀಯ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರು ಸಿ.ಟಿ ರವಿ ಮಾತನಾಡಿ, ವಿದ್ಯೆಯ ಮೂಲಕ ಬದುಕನ್ನು ಬದಲಾಯಿಸುವುದಕ್ಕೆ ಸಾಧ್ಯವಿದೆ, ಗೌರವ ಎನ್ನುವುದು ಪ್ರಾಪ್ತಿಯಾಗುವುದು ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಪ್ರಾಪ್ತರಾಗುತ್ತವೆ. ಸವಿತಾ ಸಮಾಜದ ಬಂಧುಗಳು ಶಿಕ್ಷಣ ಕ್ಷೇತ್ರದಲ್ಲೂ ಮತ್ತು ಸರ್ಕಾರದಿಂದ ಸಿಗುವ ನೆರವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಹಾರೈಸಿದರು.

ಬದುಕು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ, ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ಆ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ಇರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸವಿತಾ ಸಮಾಜದ ಬಂಧುಗಳು ಏಳಿಗೆ ಕಾಣಬೇಕು ಎಂದು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ವಿಶ್ವನಾಥ್ ಸಂಕಲ್ಪರವರು ನಾಲ್ಕು ಗೋಡೆಗೆ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದೊಂದಿಗೆ ಗುರುತಿಸಿಕೊಳ್ಳಬೇಕು. ಸವಿತಾ ಸಮಾಜದ ಬಾಂಧವರು ಸಂಘಟಿತರಾಗುವ ಮೂಲಕ ಆಧುನಿಕ ಸಮಾಜದಲ್ಲೂ ಶೋಷಿತರಾಗುತ್ತಿರುವ ನಾವು ನಮ್ಮ ಘರ್ಜನೆ ಸರ್ಕಾರಕ್ಕೆ ಕೇಳುವಂತಾಗಬೇಕು ಎಂದು ಹೇಳಿದರು.

ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರುವ ಸವಿತಾ ಸಮಾಜದ ವಿದ್ಯಾರ್ಥಿಗಳಾದ ಮದನ್.ಸಿ, ಶ್ರೇಯಸ್ ಡಿ.ಕೆ ಇವರುಗಳನ್ನು ಸನ್ಮಾನಿಸಲಾಯಿತು. ಗ್ಲಾಮರ್ ಕೇರ್ ಸಂಸ್ಥೆಯ ವತಿಯಿಂದ ಜೀವಿತ್ ಭಾರತೀಯ ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಶ್ರೀ ರಾಮನವಮಿಯ ಮತ್ತು ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕೋಸಂಬರಿ ಮತ್ತು ಪಾನಕ ವಿತರಣೆಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ದೀಪಕ್ ದೊಡ್ಡಯ್ಯ, ಕಲ್ಮುರುಡಪ್ಪ, ಮಂಜೇಗೌಡ, ಕುರುವಂಗಿ ವೆಂಕಟೇಶ್ ಜಿಲ್ಲಾ ಸವಿತಾ ಸಮಾಜ ಗೌರವ ಸಲಹೆಗಾರರಾದ ಜಿ. ಉಮೇಶ್, ಸವಿತಾ ಸಮಾಜದ ಅಧ್ಯಕ್ಷ ಜೆ. ಸತ್ಯನಾರಾಯಣ, ಮೂಡಿಗೆರೆ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಹೆಚ್.ವಿ ಮಹೇಶ್, ಕಡೂರು ತಾಲೂಕು ಸವಿತ ಸಮಾಜದ ಅಧ್ಯಕ್ಷರಾದ ಎನ್. ವೆಂಕಟೇಶ್, ನರಸಿಂಹರಾಜಪುರ ತಾಲೂಕು ಸವಿತ ಸಮಾಜದ ಅಧ್ಯಕ್ಷರಾದ ಕುಮಾರ್, ಆಲ್ದೂರು ಹೋಬಳಿ ಸವಿತಾ ಸಮಾಜದ ಅಧ್ಯಕ್ಷರಾದ ಎ.ಆರ್. ಚಂದ್ರಶೇಖರ್, ಬೀರೂರು ಹೋಬಳಿ ಸವಿತಾ ಸಮಾಜದ ಉಪಾಧ್ಯಕ್ಷರದ ಕೃಷ್ಣಮೂರ್ತಿ, ಚಿಕ್ಕಮಗಳೂರು ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷರಾದ ಆಲೂರು ಎನ್. ಸತೀಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಎಸ್.ಎಂ, ಖಜಾಂಚಿ ಎಂ. ರಾಘವೇಂದ್ರ, ಉಪಾಧ್ಯಕ್ಷರುಗಳಾದ ಸಿ. ಮಾಧವ, ಟಿ.ಪಿ. ವಿಜಯಕುಮಾರ್, ಟೈಟಾನಿಕ್ ಮಂಜು, ಸಹಕಾರ್ಯದರ್ಶಿಗಳಾದ ಸುಜಿತ್, ಎಚ್. ಸಂದೇಶ್, ಶಬರೀಶ್, ಚಂದನ್, ಮಹಿಳಾ ಘಟಕದ ಅಧ್ಯಕ್ಷರಾದ ಸಿ. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಶ್ರೀಲಕ್ಷ್ಮಿ ಎಚ್.ಎಸ್, ಸಂಚಾಲಕರಾದ ಎಸ್.ಎಚ್. ಮಂಜುಳಾ, ಸದಸ್ಯರಾದ ಡಿ.ಎನ್ ಉಮೇಶ್, ಚೇತನ್ ಘೋಗಿ, ಮೆಹಬೂಬ್ ಬಾಬು, ಸಚಿನ್ ಐ.ಆರ್, ಪಿ.ಯಶ್ವಂತ್, ಎಲ್‌ಐಸಿ ಈರಣ್ಣ, ಟಿ.ಲಕ್ಷ್ಮಿಕಾಂತ, ಎ.ಬಿ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು

Celebrating the birth anniversaries of great men is a hopeful development

Related posts

ಎಸ್‌ಎಸ್‌ಎಲ್‌ಸಿಯಲ್ಲಿ ಜೆವಿಎಸ್ ಶಾಲೆಗೆ ಶೇ 100 ಫಲಿತಾಂಶ

Team Suddigara

ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯಕ

Team Suddigara

ಧರ್ಮದ ದಿಕ್ಸೂಚಿ ಬಾಳಿನ ಭಾಗ್ಯೋದಯಕ್ಕೆ ಅಡಿಪಾಯ

Team Suddigara

Leave a Comment

[t4b-ticker] [t4b-ticker]