ವೃದ್ಧಿ ಸಹಕಾರ ಸಂಘ ಸಾರ್ವಜನಿಕರ ಆರ್ಥಿಕ ಪ್ರಗತಿಗೆ ಸಹಕರಿಸಲಿ

ಚಿಕ್ಕಮಗಳೂರು: ನಗರದಲ್ಲಿ ನೂತನವಾಗಿ ಆರಂಭವಾಗಿರುವ ವೃದ್ಧಿ ಸೌಹಾರ್ದ ಸಹಕಾರಿ ಸಂಘ ಯಶಸ್ವಿಯಾಗಿ ನಡೆಯುವ ಮೂಲಕ ಸಾರ್ವಜನಿಕರಿಗೆ ಹಾಗೂ ಷೇರುದಾರರಿಗೆ ಸಾಲಸೌಲಭ್ಯ ನೀಡಿ ಆರ್ಥಿಕ ಪ್ರಗತಿಗೆ ಸಹಕರಿಸಲಿ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್ ಶುಭ ಹಾರೈಸಿದರು.

ಅವರು ಇಂದು ವೃದ್ಧಿ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಆಡಳಿತ ಮಂಡಳಿಯಲ್ಲಿ ಹೆಚ್ಚು ಯುವಕರೇ ಇರುವುದರಿಂದ ಹಾಗೂ ಸಿಇಓ ಜವಾಬ್ದಾರಿ ಬಹಾಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸೌಹಾರ್ದ ಸಹಕಾರ ಸಂಘ ಚನ್ನಾಗಿ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ ಮಾತನಾಡಿ, ಚಿಕ್ಕಮಗಳೂರು ನಗರದ ಜನತೆ ಹಾಗೂ ಸುತ್ತಮುತ್ತಲ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವೃದ್ಧಿ ಸೌಹಾರ್ದ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದಾರೆಂದು ಶುಭ ಹಾರೈಸಿದರು.

ಈಗಾಗಲೇ ಬಹಳಷ್ಟು ಜನ ಅವರವರ ಅನುಕೂಲಕ್ಕೆ ತಕ್ಕಂತೆ ಹಣಕಾಸಿನ ನೆರವು ಪಡೆಯುತ್ತಾರೆ. ಮೈಕ್ರೋಫೈನಾನ್ಸ್ ಮೂಲಕ ಆರ್ಥಿಕ ಸಹಾಯ ಪಡೆದುಕೊಳ್ಳುತ್ತಾರೆ. ಆ ದೃಷ್ಟಿಯಲ್ಲಿ ಈ ಸಹಕಾರ ಸಂಘ ಲಾಭದಾಯಕವಾಗಿ ನಡೆಯಲಿ ಎಂದು ಹೇಳಿದರು.

ಪಲ್ಲವಿ ಸಿ.ಟಿ. ರವಿ ಮಾತನಾಡಿ. ಹೆಚ್ಚು ಗ್ರಾಹಕರು ಠೇವಣಿ ಇಟ್ಟು ಸಹಕಾರ ಸಂಘಗಳ ಬೆಳವಣಿಗೆಗೆ ಕಾರಣರಾದಾಗ ಹೆಸರೇ ಹೇಳುವಂತೆ ಈ ಸಹಕಾರ ಸಂಘ ವೃದ್ಧಿಯಾಗುತ್ತದೆ, ತಂಡದ ಒಗ್ಗಟ್ಟು ಚನ್ನಾಗಿದೆ ಎಂದು ಶ್ಲಾಘಿಸಿದರು.

ವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಟಿ.ಜಯವರ್ಧನ್ ಸ್ವಾಗತಿಸಿ ಮಾತನಾಡಿ, ಸಂಘದ ಆಡಳಿತ ಕಚೇರಿ, ಆಡಳಿತ ಮಂಡಳಿಯ ಸಭಾ ಕೊಠಡಿ ಅಧ್ಯಕ್ಷರು-ಉಪಾಧ್ಯಕ್ಷರು ನಿರ್ದೇಶಕರ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಇಂದು ಉದ್ಘಾಟನೆ ನೆರವೇರಿಸಲಾಯಿತು ಎಂದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಮಹೇಶ್, ನಿರ್ದೇಶಕರಾದ ಅಣ್ಣಪ್ಪ ಎಂ ಕುಡಲ್ಕರ್, ಉದಯ್ ಶಂಕರ್ ಭಟ್, ಮನೀಶ್ ಜೈನ್, ಪವನ್‌ಕುಮಾರ್, ಪ್ರಶಾಂತ್ ಕುಮಾರ್, ಚಂದನ್, ವೆಂಕಟೇಶ್, ಅರುಣ್ ಭಾರದ್ವಜ್, ಪ್ರಜ್ಞಾಗಣಪತಿ, ದನ್ಯಾ.ಹೆಚ್.ಗೌಡ, ಸಿಇಓ ಮಂಜುನಾಥ.ಎ ಕುಡಲ್ಕರ್ ಮತ್ತಿತರರು ಇದ್ದರು.

Vriddhi Sahakari Sangha contributes to the economic progress of the public.

Comments

Leave a Reply

Your email address will not be published. Required fields are marked *