May 20, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಅಲ್ಲಂಪುರ ಮೀಸಲು ಅರಣ್ಯ ಬ್ಲಾಕ್ ಎಂದು ಸಂರಚಿಸದಂತೆ ಗ್ರಾಮಸ್ಥರ ಆಕ್ಷೇಪಣೆ

ಚಿಕ್ಕಮಗಳೂರು: ತಾಲ್ಲೂಕು ಅಲ್ಲಂಪುರ ಬ್ಲಾಕ್ ಪ್ರದೇಶದ ವ್ಯಾಪ್ತಿಗೆ ಬರುವ ಪ್ರದೇಶವನ್ನು ಅಲ್ಲಂಪುರ ಮೀಸಲು ಅರಣ್ಯ ಬ್ಲಾಕ್ ಎಂದು ಸಂರಚಿಸದಂತೆ ಆಗ್ರಹಿಸಿ ಶಾಸಕ ಹೆಚ್.ಡಿ ತಮ್ಮಯ್ಯ ರವರಿಗೆ ಈ ಭಾಗದ ಗ್ರಾಮಸ್ಥರುಗಳು ಆಕ್ಷೇಪಣೆ ಸಲ್ಲಿಸಿದ್ದಾರೆ.

ಶಾಸಕ ಹೆಚ್.ಡಿ ತಮ್ಮಯ್ಯ ರವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ದಾಸರಹಳ್ಳಿ, ಕೈಮರ ಗ್ರಾಮಸ್ಥರುಗಳಾದ ಎಂ. ಕೃಷ್ಣಪ್ಪ, ಪಿ.ಸಿ ಶಿವಾನಂದ, ಟಿ. ಎಸ್ ಶಿವಕುಮಾರ್, ಹೆಚ್.ಎಸ್ ಈಶ್ವರಾಗೌಡ, ಎಂ.ಬಿ ಸತೀಶ್ ಇವರುಗಳು ಅಲ್ಲಂಪುರ ಬ್ಲಾಕ್ ಪ್ರದೇಶದ ವ್ಯಾಪ್ತಿಗೆ ಬರುವ ದಾಸರಹಳ್ಳಿ ಗ್ರಾಮ ಸರ್ವೇ ನಂ. ೪ ಮತ್ತು ೭, ಅಲ್ಲಂಪುರ ಗ್ರಾಮದ ಸರ್ವೇ ನಂ. ೨೬, ಅರಳಗುಪ್ಪೆ ಗ್ರಾಮದ ಸ.ನಂ ೧೫ ಮತ್ತು ಹುಳಿಯಾರಳ್ಳಿ ಗ್ರಾಮದ ಸ.ನಂ ೩೫ ಮತ್ತು ೩೬ ರಲ್ಲಿ ಒಟ್ಟು ೯೮೮ ಎಕರೆ ೧೦ ಗುಂಟೆ ವಿಸ್ತೀರ್ಣದ ಪ್ರದೇಶವನ್ನು ಅಲ್ಲಂಪುರ ಮೀಸಲು ಅರಣ್ಯ ಬ್ಲಾಕ್ ಎಂದು ಸಂರಚಿಸುವ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ,

ಈ ಭಾಗದ ೫೦೦ ಕ್ಕೂ ಹೆಚ್ಚು ರೈತರುಗಳು ೧ ಎಕರೆಯಿಂದ ೪.೩೮ ಎಕರೆವರೆಗೆ ಹಕ್ಕುಪತ್ರ ಪಡೆದುಕೊಂಡು ಜಮೀನು ಸಾಗುವಳಿ ಮಾಡಿ ಜೀವನ ನೆಡೆಸುತ್ತಿದ್ದೇವೆ, ಈ ಜಮೀನುಗಳೆ ನಮ್ಮೆಲ್ಲರಿಗೆ ಜೀವನಾದಾರವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅರಣ್ಯ ಇಲಾಖೆಯವರು ಯಾವುದೇ ಮುನ್ಸೂಚನೆ ನೀಡದೆ ನಮ್ಮ ಭೂಮಿಗಳನ್ನು ಅಲ್ಲಂಪುರ ಮೀಸಲು ಅರಣ್ಯ ಬ್ಲಾಕ್ ಎಂದು ಸಂರಕ್ಷಿಸುವ ಕುರಿತು ಅಧಿಸೂಚನೆ ಹೊರಡಿಸಲು ಮುಂದಾಗಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿತ್ತಿದ್ದೇವೆ ಎಂದಿದ್ದಾರೆ.

ಅತಿ ಸಣ್ಣ ರೈತರುಗಳಾದ ನಾವುಗಳು ಈ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು, ಈ ಸರ್ವೇ ನಂ. ಗಳಲ್ಲಿ ಸಣ್ಣ-ಪುಟ್ಟ ಮನೆಗಳನ್ನು ನಿರ್ಮಿಸಿಕೊಂಡಿರುತ್ತೇವೆ ಅಂಗನವಾಡಿ, ಸರ್ಕಾರಿ ಶಾಲೆಗಳು, ಬಸ್ ನಿಲ್ದಾಣ ಸೇರಿದಂತೆ, ಸರ್ಕಾರಿ ರಸ್ತೆಗಳನ್ನು ಹೊಂದಿದ್ದು ನಗರದಿಂದ ೧೦ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಅರಣ್ಯ ಬ್ಲಾಕ್ ಎಂದು ಅಧಿಸೂಚನೆ ಹೊರಡಿಸಿ ಒಕ್ಕಲೆಬಿಸಲು ಮುಂದಾಗಿರುವುದರಿಂದ ನೋವುಂಟುಮಾಡಿದೆ ಕೂಡಲೇ ಅಲ್ಲಂಪುರ ಮೀಸಲು ಅರಣ್ಯ ಬ್ಲಾಕ್ ಎಂದು ಸಂರಚಿಸುವ ಯೋಜನೆಯನ್ನು ಕೈಬಿಟ್ಟು, ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

Villagers object to Allampura being classified as a reserve forest block

Related posts

ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ 

Team Suddigara

ಭದ್ರಾನದಿಯಲ್ಲಿ ಮುಳುಗಿ ರಾಜಸ್ತಾನಿ ಯುವಕರ ಸಾವು

Team Suddigara

ಸರ್ಕಾರ ಬದುಕಿಗೆ ಆದ್ಯತೆ ನೀಡಿ ಮೂಲ ಸೌಕರ್ಯ ಕಲ್ಪಿಸಿದೆ

Team Suddigara

Leave a Comment