ಎನ್ ಆರ್ ಪುರ: ಎನ್ ಆರ್ ಪುರ ಮುಖ್ಯ ರಸ್ತೆ ಅಗಲೀಕರಣಕ್ಕೆ ಕಳೆದ 5-6 ತಿಂಗಳುಗಳಿಂದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಮನವಿ ಸಲ್ಲಿಸಲಾಗಿತ್ತು ಕೋರಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೀಗ 60 ಕೋಟಿ ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ನಿಗಮ ಅಧ್ಯಕ್ಷರು ಮಾಜಿ ವಿಧಾನ ಪರಿಷತ್ ಸದಸ್ಯರದ ಎಂ,ಶ್ರೀನಿವಾಸ್ ತಿಳಿಸಿದರು.
ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇದು ಈ ಭಾಗದ ಜನರ ದಶಕಗಳ ಬೇಡಿಕೆಯಾಗಿತ್ತು ನರಸಿಂಹರಾಜಪುರಕ್ಕೆ ಹಿಂದೆ ಯಡೆಹಳ್ಳಿ ಎಂಬ ಹೆಸರಿತ್ತು ಮೈಸೂರು ಮಹಾರಾಜರು ಬಂದ ಹಿನ್ನಲೆಯಲ್ಲಿ ನರಸಿಂಹರಾಜಪುರ ಎಂಬ ಹೆಸರು ಮರು ನಾಮಕರಣಕ್ಕೆ ಕಾರಣವಾಯಿತು.
ನೂರು ವರ್ಷದ ನಂತರ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 2016ರಲ್ಲಿ 68 ಕೆರೆಗಳಗೆ ನೀರು ಒದಗಿಸುವ ಕಡೈನಬೈಲು ಏತ ನೀರಾವರಿ ಉದ್ಘಾಟನೆಗೆ ಬಂದ ಸಂಧರ್ಭದಲ್ಲಿ ಮುಖ್ಯಮಂತ್ರಿಗಳಿಗೆ ನರಸಿಂಹರಾಜಪುರಕ್ಕೆ ಶತಮನೋತ್ಸವ ತುಂಬಿದ ಸಂಧರ್ಭದಲ್ಲಿ ಭೇಟಿ ನೀಡಿರುವುದರಿಂದ ದೊಡ್ಡ ಕೋಡುಗೆ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದರು
ಅದಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳು 35 ಕೋಟಿ ವೆಚ್ಚದಲ್ಲಿ ಹೊನ್ನೆಕುಡುಗೆ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದರು ನಂತರ ಪಟ್ಟಣದಿಂದ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 5 ಕೋಟಿ ಅನುದಾನ ಒದಗಿಸಿದರು. ಅಲ್ಲದೆ ನರಸಿಂಹರಾಜಪುರದ ರಸ್ತೆ ಸಮುದಾಯ ಭವನ ದೇವಾಲಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತರಲಾಗಿದೆ ಎಂದರು.
ಇನ್ನೂ ಮುಂದುವರೆದಂತೆ ಇದೀಗ ಮುಖ್ಯ ರಸ್ತೆ ಅಗಲೀಕರಣಕ್ಕೆ 60 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಸಚಿವ ಸಂಪಟ ಅನುಮೋದನೆ ನೀಡಿದ್ದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಇದಕ್ಕೆ ಸಹಕರಿಸಿದ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಅಭಿನಂದನೆ ತಿಳಿಸಿದರು.
ಎನ್ ಆರ್,ಪುರ7: ಎನ್ ಆರ್ ಪುರ ರಸ್ತೆ ಅಗಲೀಕರಣಕ್ಕೆ 60 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಸಚಿವ ಸಂಪಟ ಅನುಮೋದನೆ ನೀಡಿದ್ದು ಈ ಹಿನ್ನಲೆಯಲ್ಲಿ ಎಂ,ಶ್ರೀನಿವಾಸ್ ರವರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.
Cabinet approves 60 crore sanction for development of NR Pura main road
