ಚಿಕ್ಕಮಗಳೂರು: ಮಾಜಿ ಸೈನಿಕ ಅಧಿಕಾರಿ ಗೌರವಾನ್ವಿತ ಸುಬೇದಾರ್ ಮೇಜರ್ ಹಾಗೂ ಬೆಂಗಳೂರಿನ ವಸತಿ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ್ ಸ್ವಾಮಿ ಅವರಿಗೆ ಕರ್ನಾಟಕ ಕಲಾ ವೇದಿಕೆ ‘ಭಾರತ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಜು.೨೬ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಕಲಾವೇದಿಕೆಯ ೫೦ನೇ ಸುವರ್ಣ ಮಹೋತ್ಸವ ಮತ್ತು ೧೭ ಸಾಂಸ್ಕೃತಿಕ ಸಿಂಚನ ವೇದಿಕೆ ಏರ್ಪಡಿಸಿದ್ದ ಡಾ. ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಉದ್ಘಾಟಿಸಿದ ನಿವೃತ್ತ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಮಾತನಾಡಿ ಸನ್ಮಾನಿಸಿ ಗೌರವಿಸಿದರು.
ಕಲಾ ವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್ ಅವರು ಪ್ರಶಸ್ತಿಯನ್ನು ನೀಡಿದ್ದು, ಭಾರತ ದೇಶಾದ್ಯಂತ ಮಲ್ಲಿಕಾರ್ಜುನ್ ಸ್ವಾಮಿಯವರು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರನ್ನು ಭಾರತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ್ ಸ್ವಾಮಿಯವರು ಜಿಲ್ಲೆಯ ಅಂಬಳೆ ರಸ್ತೆಯಲ್ಲಿರುವ ಲಕ್ಷ್ಮೀಪುರ ಗ್ರಾಮದವರಾಗಿದ್ದು, ವೇದಮೂರ್ತಿ ಬಸವಣ್ಣಯ್ಯ ಕುಟುಂಬಸ್ಥರಾದ ವೇದಮೂರ್ತಿ ಶಿವಕುಮಾರ್ಸ್ವಾಮಿ ಹಾಗೂ ಭಾಗೀರಥಮ್ಮ ಇವರ ಜೇಷ್ಠ ಪುತ್ರರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಪತ್ರಕರ್ತ ಗಂಡಸಿ ಸದಾನಂದಸ್ವಾಮಿ, ಡಾ. ಟಿ. ಶಿವಕುಮಾರ್, ಶುಭಾಧನಂಜಯ್, ನೃತ್ಯ ನಿರ್ದೇಶಕ ಮುರುಳಿ ಮಾಸ್ಟರ್, ಲಿಖಿತ್ ಮತ್ತಿತರರು ಭಾಗವಹಿಸಿದ್ದರು.
Former soldier Mallikarjuna Swamy awarded ‘Bharat Sevaratna’

Leave a Reply