May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಬಸವ ಅಭಿಯಾನ ಜಾಗೃತಿ ಮೂಡಿಸುವುದು

ಚಿಕ್ಕಮಗಳೂರು:  ಬಸವ ಜಾಗೃತಿ ಅಭಿಯಾನ ಬಸವ ಜಾಗೃತಿ ಮೂಡಿಸುವುದೇ ಹೊರತು, ಸಮಾಜವನ್ನು ಒಡೆಯುವ ಉದ್ದೇಶ ಅಲ್ಲ ಎಂದು ಸಾಣೇಹಳ್ಳಿ ಮಠದ ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಲಿಂಗಾಯತ ಮಠಾಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಚಿಕ್ಕಮಗಳೂರು ನೇತೃತ್ವದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ನಾವು ಧರ್ಮ ಪ್ರಚಾರವನ್ನು ಮಾಡಲು ಹೊರಟಿದ್ದೇವೆ. ಇದಕ್ಕೆ ಆರೋಪ, ಪ್ರತಿರೋಧ ಬಂದಿದೆ. ನಮಗೆ ಬಸವಣ್ಣನವರ ಹೆಸರನ್ನು ಕೆಡಿಸುವ, ಸಮಾಜವನ್ನು ಹೊಡೆಯುವ ಉದ್ದೇಶ ಅಲ್ಲ. ಬಸವಣ್ಣನನ್ನು ತತ್ವಾದರ್ಶಗಳನ್ನು ಪಸರಿಸಲು ಟೊಂಕಕಟ್ಟಿ ನಿಂತಿದ್ದೇವೆ. ಇದಕ್ಕೆ ಯಾವುದೇ ಟೀಕೆ ಬಂದರೂ ಸಹ ಪ್ರೀತಿ ಯಿಂದ ಸ್ವಾಗತ ಮಾಡುತ್ತೇವೆ. ದ್ವೇಷಿಸುವುದಿಲ್ಲ ಎಂದ ಅವರು, ಟೀಕಿಸುವವರು ಸಹ ನಾಳೆ ನಮ್ಮ ಜತೆ ಸೇರಿಕೊಳ್ಳುವ ವಿಶ್ವಾಸ ಇದೆ. ಆದ್ದರಿಂದ ಪ್ರಾಮಾಣಿಕವಾಗಿ ಈ ಅಭಿಯಾನ ಮಾಡುತ್ತಿದ್ದು, ಈ ಅಭಿಯಾನ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಇದು ಬಸವಣ್ಣನವರ ಶಕ್ತಿ ಎಂದರು.

ಬಸವಣ್ಣನ ಭಾವಚಿತ್ರ ಮನೆಯಲ್ಲಿರುವ ಜತೆಗೆ, ಅವರ ತತ್ವಗಳು ಮನಸ್ಸಿನಲ್ಲಿರಬೇಕು. ಕೇವಲ ಭಾ ವಚಿತ್ರ ಇಟ್ಟು ಪೂಜಿಸಿದರೆ ಪ್ರಯೋಜನವಿಲ್ಲ. ಬಸವಣ್ಣನ ವಚನಗಳನ್ನು ಕಲಿತು ಅವರ ತತ್ವಾದರ್ಶಗಳನ್ನು ಎಲ್ಲರೂ ತಲೆಯಲ್ಲಿ ತುಂಬಿಕೊಂಡು ಬದುಕಿನಲ್ಲಿ ಆಚರಣೆಗೆ ಬರಲಿ ಎಂದರು.

ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿಯ ಅಭಿಯಾನದಿಂದ ಇಡೀ ವಿಶ್ವವೇ ಬಸವಣ್ಣನ ಹಿಂದೆ ಬರುವ ವಾತಾವರಣ ಮೂಡುತ್ತಿದೆ ಎಂದರು. ಇವತ್ತಿನ ಪಾದಯಾತ್ರೆ ಬಸವಣ್ಣನನ್ನು ಇವರು ಏಕೆ ಇ? ನೆನಪು ಮಾಡಿಕೊಳ್ಳುತ್ತಾರಪ್ಪ ಎಂದು ಒಂದು ಥರಾ ಮುಖ ಮಾಡಿಕೊಳ್ಳುತ್ತಿದ್ದ ಜನರಿಗೆ ತಕ್ಕ ಪಾಠ ನೀಡುವ ಜತೆಗೆ, ಬಸವಣ್ಣನನ್ನು ಬಿಟ್ಟರೆ ಗತಿ ಇಲ್ಲ, ಮತಿ ಇಲ್ಲ ಇನ್ಮುಂದಾದರೂ ಬಸವಣ್ಣನನ್ನು ಒಪ್ಪಿಕೊಂಡು ಇವರ ಜತೆ ಹೋಗಬೇಕು ಎಂಬ ಎಚ್ಚರಿಕೆ ನೀಡಿದೆ ಎಂದರು.

ಕಾಫಿನಾಡು ಕೇವಲ ಪ್ರವಾಸಿತಾಣವಲ್ಲ. ಶರಣ ಪರಂಪರೆಯ ಪ್ರೇರಕ ಶಕ್ತಿ. ಅಕ್ಕನಾಗಮ್ಮ, ನುಲಿಯ ಚಂದಯ್ಯ, ರುದ್ರಮುನಿಯವರಂತಯ ಘಟಾನುಘಟಿಯ ಶರಣರು ತಪ್ಪಸಗೈದು ಲೀಲಾ ವಿಶ್ರಾಂತಿಗೈದಿ ರುವ ಜಿಲ್ಲೆಯಾಗಿದ್ದು, ಇದು ಶಿವಶರಣರ ಜಿಲ್ಲೆ ಎಂದರು.

ಇವತ್ತಿನ ಕಾರ್ಯಕ್ರಮ ಸಂಘಟನಾತ್ಮಕವಾಗಿ ನಾವೆಲ್ಲರೂ `ದ್ರವಾಗಿದ್ದೇವೆ ಎಂಬ `ದ್ರತೆಯ `ವ ಮೂಡಿಸಿದೆ. ಆದರೆ, ಶರಣರ ತತ್ವ, ಚಿಂತನೆ, ವಿಚಾರ`ರೆಗಳನ್ನು ಅನುಸರಿಸುವ ಜತೆಗೆ ಮತ್ತ? ಪರಿಣಾಮ ಬೀರಬೇಕು ಎಂದರು.

ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಸಾಕ? ಗೊಂದಲಮಯವಾಗಿದೆ. ಒಳ ಪಂಗಡಗಳು, ಜಾತಿಗಳ ಕಾಲಂನಲ್ಲಿ ಸಾಕ? ಗೊಂದಲ ಸೃಷ್ಟಿಯಾಗಿದೆ. ಇದರಿಂದ ಒಂದೇ ಆಶಯಗಳನ್ನು ಇಟ್ಟುಕೊಂಡು ಸಾಗು ತ್ತಿರುವ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೆ, ಸಮೀಕ್ಷೆಯ ವೇಳೆ ಎಚ್ಚರಿಕೆಯಿಂದ ಧರ್ಮ, ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಧರ್ಮ, ಜಾತಿಯನ್ನು ನಮೂದು ಮಾಡಿ ಎಂದು ಸಲಹೆ ನೀಡಿದರು.

ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಸಮ, ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ಕೊಡುಗೆ ಅಪಾರ. ೨೧ನೇ ಶತಮಾನದಲ್ಲಿಯೂ ಸಹ ಬಸವಣ್ಣನವರ ವಚನಗಳು ಇವತ್ತು ಪ್ರಸ್ತುತವಾಗಿವೆ. ಬಸವ ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬರ ಮನೆಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಇಟ್ಟು ಪೂಜಿಸ ಬೇಕು ಎಂದ ಅವರು, ಯುವಪೀಳಿಗೆಗೆ ಬಸವಣ್ಣನ ವಿಚಾರ`ರೆಯನ್ನು ತಿಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮ ಅಗತ್ಯ ಎಂದರು.

ಪ್ರಾಸ್ತವಿಕವಾಗಿ ಬಸವ ಸಂಸ್ಕೃತಿ ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷರಾದ ಬಿ.ಎನ್.ಚಿದಾನಂದ್ ಮಾತನಾಡಿದರು. ನಾ ದೇವನಲ್ಲದೆ ನೀ ದೇವನೇ ವಿ?ಯದ ಕುರಿತಿ ಮಹಾಂತ ಸ್ವಾಮಿಗಳು, ಅರಿದೊಡೆ ಶರಣ, ಮರೆದೊಡೆ ಮಾನವ ವಿ?ಯದ ಕುರಿತು ಗಂಗಾಬಿಕೆ ಬಸವರಾಜ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ, ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಯಳನಾಡು ಸಂಸ್ಥಾನ ಮಠದ ಶ್ರೀ ಜ್ಞಾನೊಪ್ರ` ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಪು?ಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಮುಖಂಡರಾದ ಎಚ್.ಸಿ ಕಲ್ಮರುಡಪ್ಪ, ಮಹಡಿಮನೆ ಸತೀಶ್, ಬಿ.ಜಿ. ಸೋಮಶೇಖರಪ್ಪ ಸೇರಿದಂತೆ ಹಲವರು ಇದ್ದರು.

Basava Abhiyan Awareness Raising

Related posts

ಪರೀಕ್ಷಾ ಕೊಠಡಿಗಳಲ್ಲಿ ಏಕಾಗ್ರತೆ-ಆತ್ಮವಿಶ್ವಾಸ ಮುಖ್ಯ

Team Suddigara

ಮೇ.8: ಹೊರನಾಡಿನಲ್ಲಿ ಕಂಚಿನ ಪುತ್ಥಳಿ ಲೋಕಾರ್ಪಣೆ

Team Suddigara

ಆರೋಗ್ಯ ಸದೃಡಗೊಳಿಸಲು ದೇಹದಂಡನೆ ಅವಶ್ಯಕ

Team Suddigara

Leave a Comment