May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಜಿಎಸ್‌ಟಿ ಇಳಿಕೆ ದೊಡ್ಡ ಕ್ರಾಂತಿ

ಚಿಕ್ಕಮಗಳೂರು:  ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಜಿಎಸ್‌ಟಿ ಇಳಿಕೆ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಬಡ ಹಾಗೂ ಮಧ್ಯಮ ವರ್ಗದ ಜನರ ತೆರಿಗೆ ಇಳಿಸುವ ಮೂಲಕ ಕೇಂದ್ರ ಸರ್ಕಾ ರ ನಾಗರೀಕ ಸರ್ವತೋಮುಖ ಅಭಿವೃದ್ದಿಗೆ ದೊಡ್ಡ ಹೆಜ್ಜೆಯನ್ನಿಟ್ಟಿದೆ ಎಂದು ಆರ್ಥಿಕ ತಜ್ಞ ವಿಶ್ವನಾಥ್‌ಭಟ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ‘ನವಪೀಳಿಗೆ ಜಿಎಸ್‌ಟಿ ೨.೦’ ಸುಧಾರಣೆ ಕುರಿತ ವಿಚಾರ ಸಂಕಿರಣದಲ್ಲಿ ಟಿಪಿಟಿ ಮೂಲಕ ವಿಷಯ ಮಂಡಿಸಿ ಅವರು ಮಾತನಾಡಿ ಸಾಮಾನ್ಯ ಜನರ ಆಕಾಂಕ್ಷೆಗಳನ್ನು ನನಸುಗೊಳಿಸಲು ಕೇಂದ್ರ ಸರ್ಕಾರ ಶೇ.೯೯ರಷ್ಟು ಸರಕು-ಸಾಗಣಿ ಕೆ ವೆಚ್ಚದ ತೆರಿಗೆ ಇಳಿಕೆಗೊಳಿಸಿದ್ದು ಇದು ಬಹುತೇಕ ಫಲಪ್ರದವಾಗಿದೆ. ಪ್ರಧಾನಿ ಮೋದಿ ಹಾಗೂ ಹಣಕಾ ಸು ಸಚಿವೆ ನಿರ್ಮಲರವರ ಜಿಎಸ್‌ಟಿ ಕ್ರಾಂತಿ ದೊಡ್ಡ ಅಲೆಯನ್ನೇ ಸೃಷ್ಟಿಸಿ ಜನತೆಗೆ ದೀಪಾವಳಿ ಕೊಡುಗೆ ಯನ್ನು ನೀಡಿದೆ ಎಂದರು.

ಕೇಂದ್ರ ಸರ್ಕಾರ ಜನತೆಯ ಒಳಿತಿಗಾಗಿ ನಾಲ್ಕು ಸ್ಪಾಬ್‌ಗಳಲ್ಲಿ ತೆರಿಗೆ ಇಳಿಕೆ ಮಾಡಿದೆ. ಶೇ.೧೦, ೧೨ ಮ ತ್ತು ೧೮ರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಕಡಿತಗೊಳಿಸಿದ ಪರಿಣಾಮ ರಾಷ್ಟ್ರದ ೧೪೫ ಕೋಟಿ ಜನಸಂಖ್ಯೆ ಗೆ ಬಹಳಷ್ಟು ಹರ್ಷ ತರುವ ಮೂಲಕ ಭಾರತದ ಇತಿಹಾಸದಲ್ಲೇ ದೊಡ್ಡಮಟ್ಟಿನ ಜಿಎಸ್‌ಟಿ ಕ್ರಾಂತಿಯನ್ನೇ ಮೂಡಿಸಿದೆ ಎಂದು ಹೇಳಿದರು.

ನರೇಂದ್ರ ಮೋದಿಯವರ ದೂರದೃಷ್ಟಿ, ಆಲೋಚನೆಗಳಿಂದ ದೇಶ ಸದೃಢವಾಗುವ ಜತೆಗೆ ಬದ್ಧತೆಯ ನ್ನು ತೋರಿಸಿದೆ. ಸತತ ಹನ್ನೊಂದು ವರ್ಷಗಳ ಅಧ್ಯಯನದಿಂದ ಜಿಎಸ್‌ಟಿಯ ರಚನಾತ್ಮಕ ಹೆಜ್ಜೆಯನ್ನು ಇರಿಸಿದೆ ಎಂದ ಅವರು ಜನರ ಬಳಿ ಉಳಿತಾಯ ಹೆಚ್ಚಾದಾಗ ಮಾರುಕಟ್ಟೆ ಉತ್ಪಾದನೆ ಹೆಚ್ಚಾಗಲಿದ್ದು ಇದು ತೆರಿಗೆ ಸಂಗ್ರಹಕ್ಕೆ ದುಪ್ಪಟ್ಟಾಗಲಿದೆ ಎಂದು ತಿಳಿಸಿದರು.

ನಾಗರೀಕರ ಅತ್ಯಗತ್ಯ ಆಹಾರ ಪದಾರ್ಥಗಳ ತೆರಿಗೆ ಶೂನ್ಯವಾಗಿದೆ. ಸೌಂದರ್ಯ ವರ್ಧಕ ಸಾಮಾಗ್ರಿ ಗಳಿಗೆ ಶೇ.೧೩ ತೆರಿಗೆ ಇಳಿಸಿದೆ. ನವರಾತ್ರಿ ಹಬ್ಬದಂದು ಜಿಎಸ್‌ಟಿ ಇಳಿಕೆಗೊಂಡ ಪರಿಣಾಮ ದೀಪಾವಳಿ ದಿನದಂದೇ ೧.೬೫ ಲಕ್ಷ ಕಾರುಗಳು ಖರೀದಿಯಾಗಿದ್ದು ಇದಕ್ಕೆ ಮೋದಿ ಸರ್ಕಾರದ ಕೊಡುಗೆಗಳೇ ಕಾರಣವಾ ಗಿದೆ ಎಂದರು.

ಜನರ ಜೀವನ ಸುಧಾರಣೆಗೆ ಆರ್ಥಿಕ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರದ ನಡೆ ಮಧ್ಯಮ ವರ್ಗಕ್ಕೆ ಉಪಕಾರಿ ಸಾಬೀತಾಗಿದೆ. ಈ ನಡುವೆ ರಾಜ್ಯದ ಮುಖ್ಯಮಂತ್ರಿಗಳು ಅಭಿವೃದ್ದಿ ರಾಷ್ಟ್ರವನ್ನು ಕೊಂಡಾಡುವ ಬದಲು ಮೊಸರಿನಲ್ಲಿ ಕಲ್ಲು ಹುಡುಕಿ ಅಪಪ್ರಚಾರಕ್ಕೆ ಮುಂದಾಗಿದೆ. ಕೋವಿಡ್‌ನಲ್ಲೂ ಲಸಿಕೆ ಪಡೆದುಕೊಂಡ ರೆ ಸಂತಾನಹರಣವೆಂಬ ಸುಳ್ಳುವದಂತಿ ಹಬ್ಬಿಸುವ ಕಾರ್ಯಕ್ಕೆ ಮುಂದಾಗಿತ್ತು ಎಂದು ದೂರಿದರು.

ಜಿಎಸ್‌ಟಿ ಕ್ರಾಂತಿ ಬಡವರ ಪಾಲಿಗೆ ಸಿಹಿಯಾದರೆ, ಐಶರಾಮಿ ಶ್ರೀಮಂತರಿಗೆ ಕಹಿಯಾಗಿ ಪರಿಣಾಮಿ ಸಿದೆ. ಮನುಷ್ಯನಿಗೆ ಹಾನಿಗೊಳಿಸುವ ತಂಬಾಕು ಪದಾರ್ಥ ಹಾಗೂ ದುಬಾರಿ ಕಾರುಗಳ ಬೆಲೆಗಳು ದುಪ್ಪಟ್ಟಾ ಗಿದೆ. ಕರ್ನಾಟಕ ದೇಶದಲ್ಲೇ ಜಿಎಸ್‌ಟಿ ಕಟ್ಟುವಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು ಕೇಂದ್ರ ಸರ್ಕಾರ ಸಂಪನ್ಮೂಲ ಕ್ರೂಢೀಕರಿಸಿ, ಜನರಿಗಾಗಿ ಬಳಸಿರುವುದು ಹೆಮ್ಮೆಯ ಸಂಗತಿ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಅಂತರಾಜ್ಯ ಗಡಿಭಾಗದಲ್ಲಿ ಗೂಡ್ಸ್ ವಾಹನಗಳಿಗೆ ಜಿಎಸ್‌ಟಿಯಡಿ ತೆರಿಗೆ ಶೂನ್ಯಗೊಳಿಸಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಗಬ್ಬರ್‌ಸಿಂಗ್ ಆಳ್ವಿಕೆಯಿತ್ತು. ಮೋದಿ ಸರ್ಕಾರದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಹೊರೆಯಾಗದೇ, ಭ್ರಷ್ಟಚಾರ ನಿಯಂತ್ರಿಸಿ ಜಿ ಎಸ್‌ಟಿ ತನ್ನದೇ ದಾಪುಗಾಲು ಇಟ್ಟಿದೆ ಎಂದು ಹೇಳಿದರು.

ಒಂದು ದೇಶ, ಒಂದು ತೆರಿಗೆ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ತೀರ್ಪು ಕೈಗೊಂಡಿದೆ. ಆ ದರೆ ರಾಜ್ಯದಲ್ಲಿ ವ್ಯತಿರಿಕ್ತವಾಗಿ ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಳಗೊಳಿಸಿ ಅಧಿಕಾರ ನಡೆಸುತ್ತಿದೆ. ದೈನಂದಿನ ವ್ಯವಹಾರ ಹಾಗೂ ಕುಟುಂಬ ನಿರ್ವಹಣೆಗೂ ಜನರ ಜೇಬಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕು ತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಆಳ್ವಿಕೆ ಗ್ರಾಹಕಸ್ನೇಹಿಯಾದರೆ, ರಾಜ್ಯಸರ್ಕಾರ ಗ್ರಾಹಕರಿಗೆ ಶತ್ರುವಿನಂತೆ ವರ್ತಿಸುತ್ತಿ ದೆ. ಪ್ರಸ್ತುತ ಭಾರತ ವಿಶ್ವದಲ್ಲೇ ನಾಲ್ಕನೇ ಆರ್ಥಿಕ ಶಕ್ತಿಯಾಗಿದೆ. ಸದ್ಯದಲ್ಲೇ ಜರ್ಮನ್ ರಾಷ್ಟ್ರ ಹಿಂದಿಕ್ಕಿ ಮೂ ರನೇ ಶಕ್ತಿಯಾಗಲಿದ್ದು ಉಳಿದಂತೆ ಚೀನಾ ಮತ್ತು ಅಮೇರಿಕಾ ದೇಶದ ಮುಂದೆ ಬಲಿಷ್ಟವಾಗಲು ದೇಶದ ಜನತೆ ಆತ್ಮನಿರ್ಭಾರತೆ ಕಾಯ್ದುಕೊಳ್ಳಬೇಕು ಎಂದು ಆಶಿಸಿದರು.

ಭಾರತವನ್ನು ವಿಶ್ವದ ಮುಂದೆ ಸೋಲದಂತೆ ಗಮನಹರಿಸಲು ಕೇಂದ್ರ ಸರ್ಕಾರ ಜನಪ್ರಿಯ ಯೋಜನೆ ಗಳನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಆಳವಾಗಿ ಭಿತ್ತಬೇಕು. ದೇಶದ ಒಳಗೆ ಮತ್ತು ಹೊರಗಿನ ಪಿತೂರಿಕೋ ರರನ್ನು ಹಿಮ್ಮೆಟ್ಟಿಸಲು ಸ್ವಯಂಪ್ರೇರಿತರಾಗಿ ಪಣ ತೊಡಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಜನತೆ ಊಹಿಸ ಲಾರದಷ್ಟು ಮಟ್ಟದಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತಗೊಳಿಸಿದೆ. ಇಂಥ ಜನೋಪಯೋಗಿ ವಿಚಾರಗಳ ನ್ನು ಜನಸಾಮಾನ್ಯ ಮಧ್ಯೆ ಪಸರಿಸಬೇಕು. ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಕೇಂದ್ರ ಜನಪರ ಯೋ ಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಗೊಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ರವೀಂದ್ರ ಬೆಳವಾಡಿ, ಪುಣ್ಯಪಾಲ್, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಜಿಲ್ಲಾ ಬಿಜೆಪಿ ಮಹಿಳಾ ಮೋ ರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಮುಖಂಡರುಗಳಾದ ಕೋಟೆ ರಂಗನಾಥ್, ದೀಪಕ್‌ದೊಡ್ಡ ಯ್ಯ ಮತ್ತಿತರರು ಉಪಸ್ಥಿತರಿದ್ದರು.

GST reduction is the biggest revolution in the history of independent India.

Related posts

ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ

Team Suddigara

ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರು

Team Suddigara

ದೇಶಕ್ಕೆ ಯುವಜನರ ಪಾತ್ರ ಬಹುದೊಡ್ಡದು

Team Suddigara

Leave a Comment