ಹಸದವರಿಗೆ ಅನ್ನ-ಆಹಾರ ನೀಡುವುದು ಶ್ರೇಷ್ಠ

ಚಿಕ್ಕಮಗಳೂರು: ಹಸದವರಿಗೆ ಅನ್ನ ,ಆಹಾರ ನೀಡುವುದು ಶ್ರೇಷ್ಠ ಎಂದು ಅಲ್ಲಾಹ ಹೇಳಿದ್ದಾರೆ. ಧರ್ಮ ಪಾಲನೆಗಾಗಿ ಪ್ರತಿ ವರ್ಷ ಸಮಾಜಸೇವಕ, ಉದ್ಯಮಿ ಅಕ್ಮಲ್ ಅವರು ರಂಜಾನ್ ಮಾಸದಲ್ಲಿ ಬಡವರಿಗೆ ಆಹಾರದ ಕಿಟ್ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಷರೀಫ್ ಗಲ್ಲಿಯಲ್ಲಿ ರಂಜಾನ್‌ಹಬ್ಬದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಉಳ್ಳವರು ಬಡವರಿಗೆ , ಹಸಿದವನಿಗೆ ದಾನ ಮಾಡುವುದು ಶ್ರೇಷ್ಠ. ಅದನ್ನು ಪೈಗಂಬರರಿಗೆ ಪ್ರೀತಿ. ಬಸವಣ್ಣ ಕೂಡ ಅದನ್ನೇ ಹೇಳಿದ್ದಾರೆ.

ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ಮಹಾಪುರುಷರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಯಮಿ ಸಿ.ಎನ್.ಅಕ್ಮಲ್ ಅವರು ತಮ್ಮ ದುಡಿಮೆಯ ಹಣದಲ್ಲಿ ಒಂದು ಭಾಗವನ್ನು ಬಡವರಿಗೆ ಆಹಾರದ ರೂಪದಲ್ಲಿ ನೀಡುವ ಮೂಲಕ ಸಾರ್ಥಕ ಬದುಕು ಸೆವೆಸುತ್ತಿದ್ದಾರೆ ಎಂದು ಹೇಳಿದರು.

ಈಶ್ವರ , ಅಲ್ಲ ಎರಡೂ ಒಂದೇ. ಅವರವರ ಭಕ್ತಿ, ಭಾವ ವಿಭಿನ್ನವಾದರೂ ಭಕ್ತಿ ಮಾರ್ಗ ಒಂದೇ. ಬಡವರಿಗೆ ದಾನ ಮಾಡುವುದು ಅಲ್ಲಾನ ಪ್ರೀತಿ ಗಳಿಸುವುದಕ್ಕೆ ಎಂಬುದನ್ನು ಅರಿತಿದ್ದೇನೆ ಎಂದರು.

ದಾನಿ ಸಿ.ಎನ್.ಅಕ್ಮಲ್ ಮಾತನಾಡಿ, ದುಡಿಮೆಯ ಸಂಪತ್ತಿನಲ್ಲಿ ಶೇ.೨.೫ ರಷ್ಟನ್ನು ದಾನ ಕೊಡಬೇಕು ಎಂದು ಕುರಾನ್ ನಲ್ಲಿ ಹೇಳಿದೆ. ಅದನ್ನು ನಮ್ಮಜನರೆಲ್ಲಾ ತೆಗೆದರೆ ನಮ್ಮ ಸಮಾಜದಲ್ಲಿ ಒಂದಿಷ್ಟು ಬಡತನ ದೂರ ಮಾಡಬಹುದೇನೋ ಎಂದ ಅವರು ಮನೆ, ಮತ್ತೊಂದು ಕಳವು ಮಾಡಿದರೆ ಮಾತ್ರ ಕಳ್ಳತನ ಆಗುವುದಿಲ್ಲ. ಕುರಾನ್ ಪ್ರಕಾರ ಹಕ್ಕಿನಂತೆ ನಡೆದುಕೊಳ್ಳದವರು ಕೂಡ ಆ ಗುಂಪಿಗೆ ಸೇರುತ್ತಾರೆ ಎಂದು ಹೇಳಿದರು.

ನಾನು ಜಾತಿ ಮತ ಧರ್ಮ ನೋಡದೆ ಎಲ್ಲ ಬಡವರಿಗೂ ಆಹಾರ ವಿತರಣೆ ಮಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಅತೀಕ್‌ಖೈಸರ್, ಅಂಜುಮನ್ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಸಿರಾಜ್ ಅಹ್ಮದ್, ಮೌಲನಾಸಾಹಿಬ್, ಅಕ್ಬರ್ ಮತ್ತಿತರರಿದ್ದರು.

Free food kit distribution program on the occasion of Ramadan

Comments

Leave a Reply

Your email address will not be published. Required fields are marked *