ಆಧುನಿಕ ನಗರೀಕರಣದ ಅಡಿಪಾಯವೇ ಕೆಂಪೇಗೌಡರು

ಚಿಕ್ಕಮಗಳೂರು:  ವಿಶ್ವಮಟ್ಟದಲ್ಲಿ ಬೆಂಗಳೂರನ್ನು ಪ್ರಗತಿಯತ್ತ ಕೊಂಡೊಯ್ಯಲು ಹಾ ಗೂ ಆಧುನಿಕ ನಗರೀಕರಣಕ್ಕೆ ಮೊಟ್ಟಮೊದಲ ಅಡಿಪಾಯ ಹಾಕಿದವರೇ ನಾಡುಪ್ರಭು ಕೆಂಪೇಗೌಡರು ಎಂ ದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ನಾಡುಪ್ರಭು ಶ್ರೀ ಕೆಂಪೇಗೌಡರ ೫೧೬ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ವಿಜಯನಗರ ಸಾಮ್ರಾಜ್ಯದ ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿ ಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರ ಮುಖ ನಗರಗಳಲ್ಲಿ ಒಂದಾಗುವ ಜೊತೆಗೆ ಗಾರ್ಡನ್‌ಸಿಟಿಯಾಗಿ ಪರಿವರ್ತನೆಯಾಗಿದೆ ಎಂದರು.

ರಾಜಧಾನಿಯಲ್ಲ್ಲಿ ನೂರಾರು ದೇವಾಲಯ, ಬೆಂಗಳೂರನ್ನು ನಾಲ್ಕು ದಿಕ್ಕನ್ನು ಪ್ರತಿಬಿಂಬಿಸಲು ಕೋಟೆ ಗಳ ನಿರ್ಮಾಣ, ಸರ್ವ ಜನಾಂಗದ ಅಭಿವೃಧ್ದಿ ದೃಷ್ಟಿಯಿಂದ ಆಯಾ ಸಮಾಜಕ್ಕೆ ಮೀಸಲಿರಿಸಿದ ಹೆಸರಿನಲ್ಲಿ ಬಡಾವಣೆ ಹಾಗೂ ಹದಿನೇಳಕ್ಕೂ ಹೆಚ್ಚು ಪೇಟೆಗಳ ನಿರ್ಮಾಣಕ್ಕೆ ಮೂಲವೇ ಕೆಂಪೇಗೌಡರು ಎಂದು ಬಣ್ಣಿ ಸಿದರು.

ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಐಟಿಬಿಟಿ, ಯಾತ್ರಿಕ ನಗರೀಕರಣ ವಿಶ್ವಾದಾದ್ಯಂತ ಹೆಸರು ಸಂಪಾ ದಿಸಲು ಕೆಂಪೇಗೌಡರ ಕೊಡುಗೆ ಬಹಳಷ್ಟಿದೆ. ಅಲ್ಲದೇ ವರಮಾನ ವಿಚಾರದಲ್ಲೂ ತೆರಿಗೆ ರೂಪದಲ್ಲಿ ರಾಜ್ಯ ದಿಂದ ಬಹುದೊಡ್ಡ ಸಾಧನೆಯಿದೆ. ಇಂದಿಗೂ ರಾಜಧಾನಿಯಲ್ಲಿ ಕೋಟ್ಯಾಂತರ ಕುಟುಂಬ ಬೆಳಕು ಕಾಣ ಲು ಕೆಂಪೇಗೌಡರ ನಿರ್ಧಾರಗಳೇ ಕಾರಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ಕೆಂಪೇಗೌಡರು ಸ್ವಾರ್ಥಕ್ಕೆ ಆಸೆಪಡದೇ ಸ ಮಾಜದ ಹಿತದೃಷ್ಟಿಯಿಂದ ಸಾವಿರಾರು ಎಕರೆಯನ್ನು ಬೃಹತ್ ಬೆಂಗಳೂರು ನಿರ್ಮಾಣಕ್ಕೆ ಮೀಸಲಿಟ್ಟ ಯು ಗಪುರುಷ ಎಂದರೆ ತಪ್ಪಾಗಲಾರದು ಎಂದ ಅವರು ಇಂದಿನ ಯುವಪೀಳಿಗೆ ಕೆಂಪೇಗೌಡರ ಚರಿತ್ರೆ ಅಧ್ಯಯ ನಡೆಸಿ ಇತಿಹಾಸ ಅರಿಯಬೇಕಿದೆ ಎಂದು ಹೇಳಿದರು.

ಕೆಂಪೇಗೌಡರ ಆಲೋಚನೆಗಳಿಂದ ನೂರಾರು ಕೆರೆಗಳು ಅಭಿವೃದ್ದಿಗೊಂಡರೆ, ಕೆಲವು ರಾಜಕಾರಣಿಗಳ ದುರಾಸೆಯಿಂದ ಕೆರೆಗಳನ್ನು ಮುಚ್ಚಿಸಿ ಸಾಮ್ರಾಜ್ಯವಾಗಿಸಿದ ಕಾರಣ ಮಳೆಗಾಲದಲ್ಲಿ ಬೆಂಗಳೂರಿನ ಕೆಲವು ಬಡಾವಣೆಗಳು ಜಲಾವೃತಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಹೆಚ್.ಲೋಕೇಶ್ ಮಾತನಾಡಿ ಬೆಂಗಳೂರಿನಲ್ಲಿ ಸುಮಾರು ೧೦೦ ಕೆರೆಗಳ ಅಭಿವೃದ್ದಿ, ಬೃಹತ್ ನಾಲ್ಕು ಉದ್ಯಾನವನ ನಿರ್ಮಿಸಿ ವಾಯುವಿಹಾರಿಗಳಿಗೆ ಅನುಕೂಲ, ರಾಜಧಾನಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಲು ಮೂಲವೇ ಕೆಂಪೇಗೌಡ ಮುಂದಾಲೋಚನೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅನುಮಧುಕರ್, ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ, ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ಕೋಟ್ಯಾನ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕು ಮಾರ್, ಮುಖಂಡರುಗಳಾದ ನಾರಾಯಣಗೌಡ, ಗೌತಮ್‌ಜೈನ್, ಜಯಣ್ಣ, ಸಚಿನ್‌ಗೌಡ, ವೈ.ಜಿ.ಸುರೇ ಶ್, ಓಂಕಾರೇಗೌಡ, ಬಸವರಾಜ್, ಹೆಚ್.ಕೆ.ಕೇಶವಮೂರ್ತಿ, ದುರ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.

Kempegowda is the foundation of modern urbanization.

Comments

Leave a Reply

Your email address will not be published. Required fields are marked *