ಚಿಕ್ಕಮಗಳೂರು: ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಹಿಳಾ ಒಕ್ಕಲಿಗರ ಸಂಘ ಸಮಾಜದ ಒಳಿತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಿದೆ ಎಂದು ಮೌಂಟೇನ್ವ್ಯೂ ಪ್ರೌಢಶಾಲೆಯ ಗೀತಾ ಸುಬ್ಬರಾವ್ ಹೇಳಿದರು.
ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಬಗ್ಗೆ ಮಹಿಳಾ ಸಂಘ ಪೂರೈಸುವಲ್ಲಿ ಶ್ರಮಿಸುತ್ತಿದೆ, ಎಲ್ಲರ ಸಹಕಾರ ವಿಶ್ವಾಸ ಪಡೆದುಕೊಂಡು ವಿಶಿಷ್ಟ ಸಂಘವನ್ನಾಗಿ ಬೆಳೆಸಬೇಕೆಂದು ಆಶಯ ವ್ಯಕ್ತಪಡಿಸಿದರು.
ಇಂದು ಸಮಾಜದಲ್ಲಿ ಮಹಿಳೆಯನ್ನು ಒಂದೊಂದು ರೀತಿ ಕಾಣುವ ಪ್ರವೃತ್ತಿ ಇದೆ, ಇದನ್ನು ದೈರ್ಯವಾಗಿ ಎದುರಿಸುವ ಜೊತೆಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಕರೆ ನೀಡಿದರು.
ಕಾಳಿದಾಸ ಹೇಳಿದ್ದಾರೆ ಮಗಳು ಕುಲದ ಗೌರವನ್ನು ಎತ್ತುಹಿಡಿಯುತ್ತಾಳೆ, ಕುಶಲಮತಿ ಮತ್ತು ಒಳ್ಳೆಯ ನಡೆತೆಯ ಹೆಣ್ಣು ಮಗಳು ಮಗನಿಗಿಂತ ಮಿಗಿಲು, ಮಹಿಳೆಯ ಉತ್ತಮ ಸಹನೆ ದಾಂಪತ್ಯ ನಿಷ್ಠೆಯ ಬಗ್ಗೆ ಋಗ್ವೇದದಲ್ಲಿ ಚಿತ್ರೀಕರಿಸಿದ್ದಾರೆ ಎಂದು ಉಲ್ಲೇಖಿಸಿದರು.
ಹಿಂದಿನ ಕಾಲದಲ್ಲಿ ಮಹಿಳೆಗೆ ಹೆಚ್ಚಿನ ಸ್ಥಾನಮಾನದ ಜೊತೆಗೆ ಪೂಜ್ಯ ಭಾವನೆಯಿಂದ ಕಾಣಲಾಗುತಿತ್ತು, ಹೊರಗಿನಿಂದ ದಂಡೆತ್ತಿ ಬಂದವರು ಪುರುಷ ಪ್ರಧಾನ ಸಮಾಜ ನಿರ್ಮಾಣ ಮಾಡಿ, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಂಸ್ಕೃತಿಯನ್ನು ಬಿತ್ತಿದ್ದಾರೆ ಎಂದು ವಿಷಾಧಿಸಿದರು.
ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ಗಂಡನ ಪಾಲುದಾರಿಕೆ ಪಡೆದು ಮಹಿಳೆ ಇಂದು ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಸಂಘದಲ್ಲಿ ಲೆಕ್ಕಪತ್ರಗಳು ಪಾರದರ್ಶಕತೆಯಿಂದ ಕೂಡಿ ನಿಷ್ಠೆ, ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ರಾಜ್ಯದಲ್ಲೇ ಪ್ರತಿಷ್ಟಿತ ವಿಶಿಷ್ಟವಾದ ಸಂಘವಾಗಿ ಮಾದರಿಯಾಗಬೇಕೆಂಬ ಹಿನ್ನಲೆಯಲ್ಲಿ ಶ್ರಮಿಸುತ್ತಿರುವ ಸಂಘದ ಪ್ರದಾಧಿಕಾರಿಗಳ ಕಾಯಕ ನಿಷ್ಠೆಗೆ ಧನ್ಯವಾದಗಳನ್ನು ಸಲ್ಲಿಸಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಧ್ವನಿಸಿದ್ದು ತುಂಬಾ ಸಂತಸ ತಂದಿದೆ ಜೊತೆಗೆ ಸಮಾಜದ ಸೇವೆ ಮಾಡಲು ಇನ್ನಷ್ಟು ಸ್ಪೂರ್ತಿ ನೀಡಿದೆ ಎಂದು ಹೇಳಿದರು.
ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂಬ ಮಾತಿಗೆ ಕೇಳಿಬರುತ್ತಿದೆ, ಅಭಿನಂದಿಸಿದವರೆಲ್ಲರ ಸಹಕಾರದಿಂದ ಸೇವೆಯಲ್ಲಿ ಯಶಸ್ವಿಯಾಗಿದ್ದು ತೃಪ್ತಿ ತಂದಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎ ಪೂರ್ಣೇಶ್ ಮಾತನಾಡಿ ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ಮಹಿಳಾ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು ತಾವು ನಿರ್ದೇಶಕರಾದ ಬಳಿಕ ಮೊಟ್ಟ ಮೊದಲಬಾರಿಗೆ ೧೦.೨೦ ಕೋಟಿ ರೂ ವೆಚ್ಚದಲ್ಲಿ ಸಮುದಾಯದ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಆರಂಭವಾಗಿದ್ದು ಶೀಘ್ರದಲ್ಲಿಯೇ ಮುಕ್ತಾಯಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿ ಸಂಘದ ಚಟುವಟಿಕೆಗಳ ಬಗ್ಗೆ ಆರೋಗ್ಯಪೂರ್ಣ ಚರ್ಚೆಗಳಾಗಿದ್ದು, ಯಾವುದೇ ಗೊಂದಲಕ್ಕೆ ಕಾರಣವಾಗಿಲ್ಲ, ಹೆಚ್ಚು ಕಾರ್ಯಕ್ರಮಗಳನ್ನು ನೆಡೆಸಲು ವಂತಿಕೆ ಸಂಗ್ರಹದಲ್ಲಿ ತೊಡಗಿರುವುದರಿಂದ ನಿಧಾನವಾಗಿದೆ ಎಂದು ಹೇಳಿದರು.
ಸಂಘದ ಎಲ್ಲಾ ಪದಾಧಿಕಾರಿಗಳು ಬೆಳ್ಳಿ ಭವನ ಕಟ್ಟಡ ನಿರ್ಮಾಣಕ್ಕೆ ವಂತಿಗೆ ಸಂಗ್ರಹಿಸಲು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಕಾವ್ಯಸುಕುಮಾರ್, ಗೌರವ ಕಾರ್ಯದರ್ಶಿ ಅಮಿತ ವಿಜಯೇಂದ್ರ, ಸಹಕಾರ್ಯದರ್ಶಿ ಕೋಮಲಾ ರವಿ, ನಿರ್ದೇಶಕರುಗಳಾದ ಶಕುಂತಲಾ ವಿರೇಗೌಡ, ಮಂಜುಳಾ ಹರೀಶ್, ಚಂಪಾ ಜಗಧೀಶ್, ವೇಧ ಚಂದ್ರಶೇಖರ್, ತನುಜಾ ಸುರೇಶ್, ಅನುಪಮಾರಮೇಶ್, ಕೀರ್ತಿಕೌಶಿಕ್, ವಿನುತಾಪ್ರಸಾದ್, ಸಂಧ್ಯಾನಾಗೇಶ್, ಸುನೀತ ನವೀನ್ ಗೌಡ, ರಾಜೇಶ್ವರಿ ಅಭಿಷೇಕ್, ಮಾಜಿ ಅಧ್ಯಕ್ಷೆ ಸವಿತಾರಮೇಶ್, ಜಾಹ್ನವಿಜಯರಾಮ್, ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಗೌರವ ಕಾರ್ಯದರ್ಶಿ ಎಂ.ಎಸ್.ಪ್ರದೀಪ್ ಕುಮಾರ್, ನಿರ್ದೇಶಕರುಗಳಾದ ಕೆ.ಪಿ.ರಾಜೇಂದ್ರ, ಕೆ.ಯು.ರತೀಶ್ ಕುಮಾರ್, ಎಂ.ಅಶೋಕ್, ಹೆಚ್.ಕೆ.ನವೀನ್, ಪಿ.ರಾಜು, ಹೆಚ್.ಪಿ.ಸಜಿತ್, ಹೆಚ್.ಎಸ್.ಮೋಹನ್, ಸಿ.ಟಿ.ರೇವತಿ, ಪವಿತ್ರಾಲೋಕೇಶ್, ಭವ್ಯನಟೇಶ್, ಹೋಯ್ಸಳ ಎಂ.ಸಿ.ಪ್ರಕಾಶ್, ಉಪಸ್ಥಿತರಿದ್ದರು.
The organization should be strengthened through dynamic activities.