Category: ಕಳಸ

  • ಭದ್ರಾ ನದಿಗೆ ಬಿದ್ದು ಮಗ –  ಮನನೊಂದು ತಾಯಿ ಕೂಡ ಆತ್ಮಹತ್ಯೆ

    ಭದ್ರಾ ನದಿಗೆ ಬಿದ್ದು ಮಗ – ಮನನೊಂದು ತಾಯಿ ಕೂಡ ಆತ್ಮಹತ್ಯೆ

    ಚಿಕ್ಕಮಗಳೂರು: ಭದ್ರಾ ನದಿಗೆ ಪಿಕ್‌ಅಪ್‌ ವಾಹನ ಬಿದ್ದು ಮಗ ಕಣ್ಮರೆಯಾಗಿದ್ದರಿಂದ ಮನನೊಂದು ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಗಣಪತಿಕಟ್ಟೆ ಶಮಂತ್‌ (22)ಅವರು ಚಾಲನೆ ಮಾಡುತ್ತಿದ್ದ ಪಿಕ್‌ಅಪ್ ವಾಹನ ಕಳಸ– ಕಳಕೋಡು ರಸ್ತೆಯ ಕೊಳಮಗೆ ಬಳಿ ರಸ್ತೆ ಪಕ್ಕದಲ್ಲಿ ಹರಿಯುವ ಭದ್ರಾ ನದಿಗೆ ಗುರುವಾರ ಮಧ್ಯಾಹ್ನ ಉರುಳಿತ್ತು. ಸಂಜೆಯಾ ದರೂ ಶಮಂತ್ ಪತ್ತೆಯಾಗಿಲ್ಲ.

    ಅವರ ತಾಯಿ ರವಿಕಲಾ (45) ಅಪಘಾತ ನಡೆದ ಸ್ಥಳಕ್ಕೆ ತೆರಳಿ ಮಗನಿಗಾಗಿ ಹುಡುಕಾಡಿದ್ದರು. ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸುವ ಮೇಸ್ತ್ರಿಯಾಗಿದ್ದ ರವಿಕಲಾ ಅವರು, ಇದೇ ಉದ್ದೇಶಕ್ಕೆ ಮಗನಿಗೆ ಪಿಕ್ಅಪ್ ವಾಹನವನ್ನು 6 ತಿಂಗಳ ಹಿಂದೆ ಕೊಡಿಸಿದ್ದರು. ಮಗ ವಾಹನದ ಸಮೇತ ಭದ್ರಾ ನದಿಗೆ ಬಿದ್ದಿರುವುದರಿಂದ ರವಿಕಲಾ ಆಘಾತಗೊಂಡಿದ್ದರು.

    ರಾತ್ರಿ 10.30ರ ವೇಳೆಗೆ ಮನೆಯ ಸಮೀಪದ ಕೆರೆಗೆ ರವಿಕಲಾ ಹಾರಿದ್ದಾರೆ. ಅವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನ ಮಾಡಿದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ತಾಯಿ ಮತ್ತು ಮಗನ ಸಾವಿನಿಂದ ಗಣಪತಿಕಟ್ಟೆ ಪ್ರದೇಶದಲ್ಲಿ ದುಃಖ ಆವರಿಸಿದೆ. ನೂರಾರು ಕಾರ್ಮಿಕರು ಶುಕ್ರವಾರ ಕೆಲಸಕ್ಕೆ ಹೋಗದೆ ರತ್ನಕಲಾ ಅವರ ಮನೆ ಬಳಿ ಜಮಾಯಿಸಿದ್ದರು.

    ಭದ್ರಾ ನದಿಯಲ್ಲಿ ಶಮಂತ್ ಶವ ಹುಡುಕಾಟ ಮುಂದುವರಿದಿದೆ. ನೀರಿನಲ್ಲಿದ್ದ ಪಿಕ್‌ಅಪ್ ವಾಹನವನ್ನು ಮೇಲೆತ್ತಲಾಗಿದೆ. ಮಳೆಯ ನಡುವೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶವ ಪತ್ತೆ ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

    Son falls into Bhadra river – heartbroken mother also commits suicide

  • ಭದ್ರಾನದಿಯಲ್ಲಿ ಮುಳುಗಿ ರಾಜಸ್ತಾನಿ ಯುವಕರ ಸಾವು

    ಭದ್ರಾನದಿಯಲ್ಲಿ ಮುಳುಗಿ ರಾಜಸ್ತಾನಿ ಯುವಕರ ಸಾವು

    ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ರಾಜಸ್ತಾನಿ ಯುವಕರ ಪೈಕಿ ಇಬ್ಬರು ಭದ್ರಾನದಿಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

    ಭದ್ರಾನದಿಯ ವಶಿಷ್ಠಾಶ್ರಮದ ಸಂಜೀವ ಮೆಟ್ಟಿಲಿನ ತೂಗುಸೇತುವೆ ಬಳಿ ದುರ್ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುವ ರಾಜಸ್ತಾನ ಮೂಲದ ಯುವಕರಾದ ಜಗದೀಶ್(೩೩) ಮತ್ತು ಚೋಟಾ ಸಿಂಗ್(೨೮) ಮೃತಪಟ್ಟಿದ್ದಾರೆ. ಹೋಳಿ ಹಬ್ಬ ರಜೆ ಹಿನ್ನಲೆ ೧೨ ಜನ ಯುವಕರು ಎರಡು ಕಾರಿನಲ್ಲಿ ಶನಿವಾರ ಕಳಸಕ್ಕೆ ಬಂದಿದ್ದರು.

    ಕಳಸ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ ಯುವಕರು ಭಾನುವಾರ ಬೆಂಗಳೂರಿಗೆ ಮರಳುವ ಮೊದಲು ವಿಶಿಷ್ಠಾಶ್ರಮದ ತೂಗು ಸೇತುವೆ ನೋಡಲು ತೆರಳಿದ್ದರು. ೧೦ಜನ ಸ್ನೇಹಿತರು ತೂಗುಸೇತುವೆ ನೋಡಲು ತೆರಳಿದ್ದ ವೇಳೆ ಇಬ್ಬರು ಯುವಕರು ನೀರಿನಲ್ಲಿ ಈಜಾಡಲು ತೆರಳಿದ್ದಾರೆ.

    ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಳುಗುತಜ್ಞ ಭಾಸ್ಕರ್ ನೆರವಿನಿಂದ ಇಬ್ಬರ ಮೃತದೇಹವನ್ನು ಹೊರತಗೆಯಲಾಗಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Rajasthani youth dies after drowning in Bhadra river

  • ಕಳಸ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

    ಕಳಸ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

    ಚಿಕ್ಕಮಗಳೂರು: ಪತ್ನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಕಳಸ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ನಿತ್ಯಾನಂದಗೌಡ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

    ನಿತ್ಯಾನಂದ ಅವರ ಪತ್ನಿ ಉಡುಪಿ ಮೂಲದ ಅಮಿತಾ ಅವರು ಶನಿವಾರ ಕಳಸ ಠಾಣೆಗೆ ದೂರು ನೀಡಿದ್ದರು. ‘ನನ್ನ ಮೇಲೆ ನನ್ನ ಪತಿ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿದ್ದಾರೆ’ ಎಂದು ದೂರಿದ್ದರು. ಪತ್ನಿ ವಿರುದ್ಧ ಅವರು ಕೂಡ ಪ್ರತಿ ದೂರು ದಾಖಲಿಸಿದ್ದರು.

    ಮರು ದಿನವೇ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಆದೇಶ ಹೊರಡಿಸಿದ್ದಾರೆ. ‘ಪತ್ನಿ ನೀಡಿರುವ ದೂರು ಮಾತ್ರ ಅಮಾನತಿಗೆ ಕಾರಣವಲ್ಲ. ಅಶಿಸ್ತಿನ ಬೇರೆ ಪ್ರಕರಣಗಳೂ ಇವೆ’ ಎಂದು ಎಸ್ಪಿ ಸ್ಪಷ್ಟಪಡಿಸಿದರು.

    Kalasa Police Station Sub-Inspector suspended