ಚಿಕ್ಕಮಗಳೂರು: ಸಿಡಿಲು ಬಡಿದು ವೃದ್ದೆ ಬಲಿಯಾಗಿರುವ ಘಟನೆ ತಾಲೂಕಿನ ಕುರುಬರಹಳ್ಳಿಯಲ್ಲಿ ನಡೆದಿದೆ.
ನಾಗಮ್ಮ (65) ಸಿಡಿಲು ಬಡಿದು ಮೃತಪಟ್ಟ ವೃದ್ದೆ. ಬೇಲೂರು ಮೂಲದ ನಾಗಮ್ಮ ಮಗಳ ಮನೆಯಲ್ಲಿ ಶುಂಠಿ ನಾಟೆ ಮಾಡಲು ಬಂದಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಶುಂಠಿ ನಾಟಿ ಮಾಡುವ ಕೆಲಸ ಇದ್ದಿದ್ದರಿಂದ ನಾಗಮ್ಮ ದಂಪತಿಗಳನ್ನು ಅಳಿಯನೇ ಹೋಗಿ ಕರೆದುಕೊಂಡು ಬಂದಿದ್ದ.
ಭಾನುವಾರ ಮಧ್ಯಾಹ್ನ ಮಳೆಯ ಬರುತ್ತಿದ್ದ ಸಂದರ್ಭದಲ್ಲಿ ಹೊಲದಲ್ಲಿ 12 ಜನರು ಕೆಲಸ ಮಾಡುತ್ತಿದ್ದರು. ಈ ವೇಳೆ ನಾಗಮ್ಮ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸುರಿದ ಮೊದಲ ಮಳೆ ವೃದ್ದೆಯನ್ನು ಬಲಿ ಪಡೆದುಕೊಂಡಿದೆ.
Elderly woman killed in lightning strike in Kurubarahalli

Leave a Reply