ಚಿಕ್ಕಮಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಮೂರ್ತಿ ಮತ್ತು ಜೀವ ಪ್ರತಿಷ್ಠಾಪನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾಡಿದರು, ಅದೇ ರೀತಿ ಎಲ್ಲಾ ದೇಗುಲಗಳಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ನೀಡುವ ಕಾನೂನು ಜಾರಿಗೆ ತರಲಿ ಎಂದು ಕಾರ್ಮಿಕ ಸಚಿವ ಲಾಡ್ ಹೇಳಿದರು.
ಶೃಂಗೇರಿ ಕ್ಷೇತ್ರದ ಕೊಪ್ಪ ಪಟ್ಟಣದಲ್ಲಿ ನಡೆದ ಗಾಂಧಿ ಭಾರತ ಸಮಾವೇಶದ ಭಾಗವಹಿಸಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ರವರು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ವೇಳೆ ಯಾವ ಪುರೋಹಿತರಾಗಲಿ, ಬ್ರಾಹ್ಮಣರಾಗಲಿ ಇರಲಿಲ್ಲ ಮೋದಿ ಅವರು ಮಾತ್ರ ಇದ್ದರು. ಒಬಿಸಿ ವರ್ಗಕ್ಕೆ ಸೇರಿದವರು ಎಂದು ಮೋದಿ ಅವರೇ ಹೇಳಿಕೊಂಡಿದ್ದಾರೆ. ಗುಡಿ ಕಟ್ಟಿದವರು,ಮೂರ್ತಿ ಕೆತ್ತಿದ ಶಿಲ್ಪಿಗಳು ಸೇರಿ ಸಣ್ಣ ಸಮುದಾಯಗಳಿಗೆ ಮೂರ್ತಿ ಪ್ರತಿಷ್ಠಾಪನೆ ಅವಕಾಶ ಸಿಗಲಿಲ್ಲವೇಕೆ ಎಂದು ಪ್ರಶ್ನಿಸಿ, ವಕ್ಫು ತಿದ್ದುಪಡಿ ಮಸೂದೆ ರೀತಿಯಲ್ಲಿ ಹಿಂದುಳಿದವರಿಗೆ ದೇಗುಲದಲ್ಲಿ ಪೂಜಿಸಲು ಕಾನೂನು ಜಾರಿಯಾಗಬೇಕು ಎಂಬುದು ನನ್ನ ಮನವಿ ಎಂದರು.
ಕೊಪ್ಪ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಆಯೋಜಿಸಿದ್ದ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಉದ್ದೇಶಿಸಿ ಮಾತನಾಡುತ್ತಾ. ಇತಿಹಾಸದ ಸತ್ಯದ ಕುರಿತು ಬಿಜೆಪಿ ನಾಯಕರು ಎಂದು ಮಾತನಾಡುವುದಿಲ್ಲ ಬದಲಿಗೆ ಇತಿಹಾಸವನ್ನು ತಿರಿಚುವ ರಾಜಕೀಯಕ್ಕಾಗಿ ಹಿಂದೂತ್ವವನ್ನು ಚೆನ್ನಾಗಿ ಬಳಸಿಕೊಳ್ಳುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಅನುಷ್ಠಾನಕ್ಕೆ ತರುವುದು ಕಾಂಗ್ರೆಸ್ ಅಧಿಕಾರದಿಂದ ಬಿಜೆಪಿ ಹೊರಗುಳಿದರೆ ಮಾತ್ರ ಸಂವಿಧಾನ ಉಳಿತ್ತದೆ ಎಂದು ಹೇಳುತ್ತಾ. ಬಿಜೆಪಿ ನಾಯಕರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ದೂಷಿಸುತ್ತಾರೆ. ನೆಹರು ಅವರಿಂದಲೇ ಭಾರತ ಒಡೆದು ಹೋಯಿತು ಎನ್ನುತ್ತಾರೆ, ದೇಶ ವಿಭಜನೆಯಾಗಿದ್ದರಿಂದ ಅನುಕೂಲವಾಗಿದ್ದು ಬಿಜೆಪಿಗೆ, ಹೀಗಾಗಿ ಬಿಜೆಪಿ ಕಚೇರಿಯಲ್ಲಿ ನೆಹರು ಫೋಟೋ ಹಾಕಿಕೊಳ್ಳ ಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಬಿಜೆಪಿಯವರು ಪ್ರಚಾರಕ್ಕಾಗಿ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ, ಭಾರತ ಒಡದು ಹೋಗಿರುವುದಕ್ಕೆ ನೆಹರು ಕಾರಣ ಎಂಬ ಬಗ್ಗೆ ಮಾತನಾಡುವ ಬಿಜೆಪಿಯವರು ಒಂದು ವೇಳೆ ದೇಶ ಇಬ್ಬಾಗವಾಗದೇ ಮುಸಲ್ಮಾನ ಸಮುದಾಯ ಭಾರತದಲ್ಲಿ ಇದ್ದರೆ ಆಗ ಏನು ಮಾಡುತ್ತಿದ್ದರು. ಇಬ್ಬಾಗ ಆಗಿರುವುದು ಅನುಕೂಲ ಆಗಿದ್ದರೆ ಅದು ಬಿಜೆಪಿಗೆ ಎಂದರು.
ಭಾರತದ ಸಾಲ 2.10 ಲಕ್ಷ ಕೋಟಿ ರು ಇದೆ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ಒಂದು ತೊಲ ಬಂಗಾರದ ಬೆಲೆ ರೂ.27,000 ಇತ್ತು ಈಗ ಒಂದು ತೊಲಕ್ಕೆ 87,000 ಆಗಿದೆ. 15 ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ. ಕಳೆದ ಹತ್ತು ವರ್ಷದಲ್ಲಿ ಒಂದುವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ನಡುವೆ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ. ರಾಜೇಗೌಡರು ಮಾತನಾಡುತ್ತಾ ಬುದ್ಧ, ಬಸವ ಅಂಬೇಡ್ಕರ್ ನಾರಾಯಣ ಗುರುವಿನಂತಹ ಮಹಾನ್ ವ್ಯಕ್ತಿಗಳು ಕಟ್ಟಿದ ದೇಶ ಭಾರತ. ನಾಡಗೀತೆ, ರೈತ ಗೀತೆ ಆದರ್ಶದಂತೆ ನಡೆದುಕೊಂಡರೆ ಇಡೀ ಪ್ರಪಂಚ ನಿಬ್ಬೆರಗಾಗಿ ಭಾರತ ಕಡೆ ನೋಡುವಂತಾಗುತ್ತದೆ ಎಂದು ಹೇಳುತ್ತಾ. ಶೃಂಗೇರಿ ಕ್ಷೇತ್ರದಲ್ಲಿ ಕೆಲವರು ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡುತ್ತೇನೆ ಕ್ಷೇತ್ರದಲ್ಲಿ ಕೆಲಸ ಆಗಿದಿಯೋ ಇಲ್ಲವೇ ಎಂಬುದು ಅವರೇ ಸ್ಪಷ್ಟಪಡಿಸಿಕೊಳ್ಳಲಿ ಎಂದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಮನವಿ ಸಲ್ಲಿಸಿ ಕಾಫಿ ಟೀ ಪ್ಲಾಂಟೇಶನ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲ ಕಾರ್ಮಿಕರಿಗೆ ಪ್ರತ್ಯೇಕ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಬೇಕು, ಕಾರ್ಮಿಕರು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ನೀಡಿ ಒತ್ತಾಯಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಸಮಾವೇಶ ಉದ್ಘಾಟಿಸಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಕಾಂಗ್ರೆಸ್ ಸಿದ್ಧಾಂತ, ಮಹಾತ್ಮ ಗಾಂಧಿ ಭೇಟಿ ಕೊಟ್ಟ ಸ್ಥಳವನ್ನು ಸ್ಮಾರಕವಾಗಿ ನಿರ್ಮಿಸುವ ನಿಟ್ಟಿನಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡುತ್ತಾ ಗಾಂಧೀಜಿ ಬಿಟ್ಟು ಭಾರತ ವಿರಲು ಸಾಧ್ಯವಿಲ್ಲ. ಗಾಂಧಿ ಬರುವ ಮುಂಚೆಯು ಸ್ವತಂತ್ರ ಸಂಗ್ರಾಮ ನಡೆಯುತ್ತಿತ್ತು, ಸೂಕ್ತ ನಾಯಕತ್ವ ಇರಲಿಲ್ಲ ಗಾಂಧಿಬಂದ ಬಳಿಕ ಹೋರಾಟಕ್ಕೆ ನಾಯಕತ್ವ ಸಿಕ್ಕಿತು. ಜಾತಿ, ಧರ್ಮ ಭೇದ ಇಲ್ಲದೆ ಎಲ್ಲರೂ ಅಣ್ಣತಮ್ಮಂದಿರಂತೆ ಬದುಕಬೇಕು ಎಂಬುದು ಸಂವಿಧಾನದ ಆಶಯ ಇದನ್ನೇ ಕಾಂಗ್ರೆಸ್ ಅನುಸರಿಸುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ವಕ್ತಾರ ಸುದೀರ್ ಕುಮಾರ್ ಮುರುಳಿ ಮಾತನಾಡುತ್ತಾ ಗಾಂಧಿ ಕಾರ್ಯಕ್ರಮ ಕಾಂಗ್ರೆಸ್ ಮೂಲ ಮಂತ್ರ. ಗಾಂಧಿಯವರು ಅಸ್ಪೃಶ್ಯತೆ ಪಾಪ ಎಂದರೆ, ಅಂಬೇಡ್ಕರ್ ಅವರು ಅಸ್ಪೃಶ್ಯತೆ ಪಾಪ ಮಾತ್ರವಲ್ಲ ಅಪರಾಧ ಕೂಡ ಎಂದು ಹೇಳಿದರು ಎನ್ನುತ್ತಾ. ಶೃಂಗೇರಿ ಕ್ಷೇತ್ರದಲ್ಲಿ ಪ್ರೀತಿಯ ರಾಜಕಾರಣ ಮಾಡುತ್ತಿರುವುದು ಶಾಸಕ ಟಿ.ಡಿ. ರಾಜೇಗೌಡ, ಆದರೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿ ಅಭ್ಯರ್ಥಿಯಾಗಿದ್ದವರು. ಅವರಿಗೆ ವಯಸ್ಸಾಗಿದೆಯೇ ಹೊರತು ಬುದ್ದಿ ಬೆಳೆದಿಲ್ಲ ಗಾಂಧಿ ಭಾರತ ನಿರ್ಮಾಣ ಮಾಡಬೇಕೆ ಹೊರತು ಗೋಡ್ಸೆ ಭಾರತವಲ್ಲ ಎಂದು ಬಿಜೆಪಿಯ ಡಿ .ಎನ್. ಜೀವರಾಜ್ ಕುರಿತು ವ್ಯಂಗವಾದರು.
ಸಮಾವೇಶವನ್ನು ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕುಕ್ಕುಡಿಗಿ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನುಗ್ಗಿ ಮಂಜುನಾಥ್ ಪ್ರಸ್ತಾವಿಕ ಮಾಡಿದರು, ಪ್ರಿಯಾಂಕ ರಾಜು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿಸಿದರು.
ಕಿಸಾನ್ ಅಧ್ಯಕ್ಷ ಸಚಿನ್ ಮಿ ಘ, ಕೆಪಿಸಿಸಿ ವಕ್ತಾರ ಅನಿಲ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್. ಹರಿಹರಪುರದ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕೆಟಿಮಿತ್ರ, ಮೇಗುಂದ ಹೋಬಳಿ ಘಟಕದ ಅಧ್ಯಕ್ಷ ಡಿ .ಬಿ. ರಾಜೇಂದ್ರ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ ಮುಂತಾದವರು ಉಪಸ್ಥಿತರಿದ್ದರು.
ಈ ಸಮಾವೇಶದಲ್ಲಿ ಕಾಂಗ್ರೆಸ್ ಘಟಕದ ಪದಾಧಿಕಾರಿಗಳಿಗೆ ಹಾಗೂ ಸಹಕಾರ ಸಂಘಗಳಿಂದ ಆಯ್ಕೆಯಾದ ನಿರ್ದೇಶಕರುಗಳಿಗೆ ಸನ್ಮಾನಿಸಲಾಯಿತು.
Laws should be implemented to allow backward classes to worship in all temples.
