ಶಶಿತರೂರ್ ಪ್ರತಿನಿಧಿಸಿರುವುದು ಭಾರತದ ೧೪೦ ಕೋಟಿ ಜನರನ್ನು

ಚಿಕ್ಕಮಗಳೂರು: ಶಶಿತರೂರ್ ಭಾರತ ಹಾಗೂ ೧೪೦ ಕೋಟಿ ಜನರನ್ನು ಪ್ರತಿನಿಧಿಸಿರುವುದು. ಬಿಜೆಪಿ ಅಥವಾ ಕಾಂಗ್ರೆಸ್ ಪ್ರತಿನಿಧಿಸಲು ಹೋಗಿರುವುದು ಅಲ್ಲಾ, ಭಾರತದ ಜನರ ಭಾವನೆಯನ್ನು ಪ್ರತಿನಿಧಿಸಿ ಹೋಗುತ್ತಿದ್ದಾರೆ ಎಂದಾಗ ಅದನ್ನ ಗೌರವಿಸ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಿಳಿಸಿದರು

ಅವರು ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿ ರಾಷ್ಟ್ರೀಯ ಪಕ್ಷ ಹಾಗೂ ರಾಷ್ಟ್ರೀಯ ಪ್ರಜ್ಞೆ ಇರುವ ಪಕ್ಷಗಳ ಕರ್ತವ್ಯ ಕಾಂಗ್ರೆಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತ ಹೆಸರನ್ನ ಇಟ್ಟುಕೊಂಡಿದೆ ನ್ಯಾಷನಲ್ ಅನ್ನೋದನ್ನ ಕಾಂಗ್ರೆಸ್‌ನವರು ಮರೆಯ ಬಾರದು ಸಲಹೆ ನೀಡಿದರು

ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್‌ರನ್ನು ಆಯ್ಕೆ ಮಾಡಿದ ವಿಷಯವು ಇದೀಗ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣದ ಕುರಿತು ಪ್ರತಿಕ್ರಿಯೆ ನೀಡಿದರು.

ಕೌರವರು ಹಾಗೂ ಪಾಂಡವರ ಕಥೆಯ ಮೂಲಕ ಕಾಂಗ್ರೆಸ್ಸಿಗರನ್ನು ಕುಟುಕಿದ್ದಾರೆ. ಕೌರವರು ಪಾಂಡವರನ್ನ ವನವಾಸಕ್ಕೆ ಕಳುಹಿಸ್ತಾರೇ, ಈ ಸಂದರ್ಭದಲ್ಲಿ ಕೌರವರು ಹಾಗೂ ಗಂಧರ್ವರ ನಡುವೆ ಯುದ್ದ ನಡೆಯುತ್ತೇ ಗಂಧರ್ವರು ಕೌರವರನ್ನು ಸೆರೆ ಹಿಡಿಯುತ್ತಾರೆ. ಆಗ ಭೀಮಾ ಹಲ್ಲು ಕಡಿದು ಹೀಗೆ ಆಗಬೇಕಿತ್ತು ಎನ್ನುತ್ತಾನೆ. ಆಗ ಧರ್ಮರಾಯ ಅರ್ಜುನನಿಗೆ ಹೇಳಿ ಅವರನ್ನು ಬಿಡಿಸಿಕೊಂಡು ಬರಲು ಹೇಳುತ್ತಾನೆ. ಆಗ ಧರ್ಮರಾಯ ವಯಂ ಪಂಚಾದಿಕಂ ಶತಂ ಎಂಬ ಮಾತನ್ನು ಹೇಳುತ್ತಾನೆ ಎಂದರು.

Shashi Tharoor represents 1.4 billion people of India.

Comments

Leave a Reply

Your email address will not be published. Required fields are marked *