ಬೆಂಗಳೂರಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಕೇಂದ್ರ ಕಚೇರಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಜಿ.ಎಂ. ರಾಜಶೇಖರ್ ನೇತೃತ್ವದಲ್ಲಿ ಭೇಟಿ ನೀಡಿ ರಾಜ್ಯ ಸಂಘದಿಂದ ಅಕಾಡೆಮಿ ಅಧ್ಯಕ್ಷ ಆಯೇಶ ಖಾನಂ ರವರನ್ನು ಗೌರವಿಸಲಾಯಿತು.
ನಂತರ ಮಾತನಾಡಿದ ಅವರು ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ಸದಸ್ಯರು ಹಾಗೂ ಸಂಘಟನೆಯೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಪೂರಕವಾದ ಕರ್ನಾಟಕ ಸರ್ಕಾರದಿಂದ ರಚಿಸಲ್ಪಟ್ಟಿರುವ ಮಾಧ್ಯಮ ಅಕಾಡೆಮಿಯಿಂದ ಇತರ ಸೌಲಭ್ಯಗಳನ್ನು ಕಾರ್ಯಕ್ರಮಗಳನ್ನು ನಡೆಸಲಾಗುವುದು ನಿಮ್ಮ ಸಂಘಟನೆಯ ಸಹಕಾರ ಅಗತ್ಯವಿದೆ ಎಂದರು.
ಈ ಕುರಿತು ಸಂಘದ ರಾಜ್ಯಾಧ್ಯಕ್ಷರಾದ ಜಿಎಂ ರಾಜಶೇಖರ್ ಮಾತನಾಡಿ ಇಂದಿನ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿಯಿಂದ ದೊರೆಯುವ ಹಿರಿಯ ಪತ್ರಕರ್ತರ ರಚಿಸಿರುವ ಪುಸ್ತಕಗಳು ಹಾಗೂ ನುರಿತ ಪತ್ರಕರ್ತರಿಂದ ಕಾರ್ಯಗಾರಗಳು ಅಗತ್ಯವಿದ್ದು ನಿಮ್ಮ ಸಹಯೋಗದೊಂದಿಗೆ ಪತ್ರಕರ್ತರು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಈ ಕಾರ್ಯಕ್ರಮದಿಂದ ಹೆಚ್ಚಿನ ಅನುಕೂಲವಾಗುತ್ತದೆ. ಸಂಘದಲ್ಲಿ ಹೊಸದಾಗಿ ಸೇರುವ ಪತ್ರಕರ್ತರಿಗೆ ಪತ್ರಿಕೋದ್ಯಮದ ಕುರಿತಾದ ಮಾಧ್ಯಮ ಅಕಾಡೆಮಿಯಲ್ಲಿ ದೊರೆಯುವ ಪುಸ್ತಕಗಳನ್ನು ನೀಡಿದರೆ ಅನುಕೂಲವಾಗಲಿದೆ
Karnataka Media Journalists Association visits Media Academy President

Leave a Reply