ಭದ್ರಾನದಿಯಲ್ಲಿ ಮುಳುಗಿ ರಾಜಸ್ತಾನಿ ಯುವಕರ ಸಾವು

ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ರಾಜಸ್ತಾನಿ ಯುವಕರ ಪೈಕಿ ಇಬ್ಬರು ಭದ್ರಾನದಿಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಭದ್ರಾನದಿಯ ವಶಿಷ್ಠಾಶ್ರಮದ ಸಂಜೀವ ಮೆಟ್ಟಿಲಿನ ತೂಗುಸೇತುವೆ ಬಳಿ ದುರ್ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುವ ರಾಜಸ್ತಾನ ಮೂಲದ ಯುವಕರಾದ ಜಗದೀಶ್(೩೩) ಮತ್ತು ಚೋಟಾ ಸಿಂಗ್(೨೮) ಮೃತಪಟ್ಟಿದ್ದಾರೆ. ಹೋಳಿ ಹಬ್ಬ ರಜೆ ಹಿನ್ನಲೆ ೧೨ ಜನ ಯುವಕರು ಎರಡು ಕಾರಿನಲ್ಲಿ ಶನಿವಾರ ಕಳಸಕ್ಕೆ ಬಂದಿದ್ದರು.

ಕಳಸ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ ಯುವಕರು ಭಾನುವಾರ ಬೆಂಗಳೂರಿಗೆ ಮರಳುವ ಮೊದಲು ವಿಶಿಷ್ಠಾಶ್ರಮದ ತೂಗು ಸೇತುವೆ ನೋಡಲು ತೆರಳಿದ್ದರು. ೧೦ಜನ ಸ್ನೇಹಿತರು ತೂಗುಸೇತುವೆ ನೋಡಲು ತೆರಳಿದ್ದ ವೇಳೆ ಇಬ್ಬರು ಯುವಕರು ನೀರಿನಲ್ಲಿ ಈಜಾಡಲು ತೆರಳಿದ್ದಾರೆ.

ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಳುಗುತಜ್ಞ ಭಾಸ್ಕರ್ ನೆರವಿನಿಂದ ಇಬ್ಬರ ಮೃತದೇಹವನ್ನು ಹೊರತಗೆಯಲಾಗಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rajasthani youth dies after drowning in Bhadra river

Comments

Leave a Reply

Your email address will not be published. Required fields are marked *