Category: ಚಿಕ್ಕಮಗಳೂರು ನಗರ

  • ಶೃಂಗೇರಿಯಲ್ಲಿ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ

    ಶೃಂಗೇರಿಯಲ್ಲಿ ಪತ್ರಕರ್ತರ ಭವನದ ಕಾಮಗಾರಿಗೆ ಚಾಲನೆ

    ಶೃಂಗೇರಿ: `ದಿನ ಪತ್ರಿಕೆಗಳಿಗೆಗಳಿಗೆ ತನ್ನದೇ ಆದ ಗೌರವಗಳು ಇದೆ. ದೃಷ್ಯ ಮಾಧ್ಯಮಗಳಲ್ಲಿ ಒಮ್ಮೆ ತೋರಿಸಿದ ವಿಡೀಯೋ ಅಳಿಸಿ ಹೋಗುತ್ತದೆ. ಆದರೆ ಪತ್ರಿಕೆಗಳಲ್ಲಿ ಶಾಶ್ವತವಾಗಿ ಅಕ್ಷರ ಉಳಿದಿರುತ್ತದೆ. ನ್ಯಾಯಾಲಯವು ಇಂದಿಗೂ ದಿನ ಪತ್ರಿಕೆಗಳ ಲಿಖಿತವೇ ಸಾಕ್ಷಿಗಳಾಗಿ ಪರಿಗಣಿಸುತ್ತಾರೆ. ಆಧುನಿಕ ತಂತ್ರಜ್ಞಾನವು ಸಾಕಷ್ಟು ಬೆಳೆದರೂ ಮುದ್ರಣ ಮಾಧ್ಯಮವು ತನ್ನ ಬರವಣಿಗೆಯ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

    ಶೃಂಗೇರಿಯ ಶಾರದಾ ನಗರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಪತ್ರಕರ್ತರ ಭವನದ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿ `ಸಮಾಜದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಭವನದ ನಿರ್ಮಾಣಕ್ಕೆ ಸರ್ಕಾರದಿಂದ ಕೂಡಾ ಹೆಚ್ಚಿನ ಅನುದಾನ ನೀಡುತ್ತೇವೆ. ವರದಿಗಾರರಿಗೂ ಸಾಕಷ್ಟು ಸಮಸ್ಯೆಗಳು ಇದ್ದು, ಸರ್ಕಾರದ ವತಿಯಿಂದ ಅವರಿಗೆ ನೀಡುವ ಸೌಲಭ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತೇವೆ. ಶೃಂಗೇರಿ ಕ್ಷೇತ್ರಕ್ಕೆ ಪತ್ರಕರ್ತರ ಭವನದ ಅವಶ್ಯಕತೆ ಇದ್ದು ಅದು ಸುಸಜ್ಜಿತವಾಗಿ ನಿರ್ಮಾಣಗೊಳ್ಳಬೇಕು ಎಂಬ ಆಶಯ ನಮ್ಮಲ್ಲಿದ್ದು ರೂ.೧೦ ಲಕ್ಷ ಅನುದಾನವನ್ನು ಶೀರ್ಘ್ರದಲ್ಲಿ ನೀಡುತ್ತೇನೆ’ ಎಂದರು.

    ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, `ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ಅಂಗವಾಗಿದ್ದು ಅವರು ನಿರಂತರ ಕಾರ್ಯ ಪ್ರವೃತ್ತರಾಗಿ ಉತ್ತಮ ಸುದ್ಧಿಗಳನ್ನು ಜನತೆಗೆ ತಲುಪಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸುವ ಭವನಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ಸದಾ ಸಹಕಾರವಿದೆ’ ಎಂದರು.

    ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ ರಾಜಶೇಖರ್ ಮಾತನಾಡಿ, `ಶೃಂಗೇರಿ ಕ್ಷೇತ್ರಕ್ಕೆ ಸಾಕಷ್ಟು ಗಣ್ಯರು ಭೇಟಿ ನೀಡುತ್ತಿದ್ದು ಪತ್ರಿಕಾಗೋಷ್ಠಿ ನಡೆಸಲು ಹಾಗೂ ವಿವಿಧ ಪ್ರಾಂತ್ಯಗಳಿಂದ ಬರುವ ಪತ್ರಕರ್ತರಿಗೆ ವಸತಿ ವ್ಯವಸ್ಥೆಯನ್ನು ಒಳಗೊಂಡ ಭವ್ಯ ಕಟ್ಟಡ ನಿರ್ಮಿಸುವ ಆಶಯ ನಮ್ಮದಾಗಿದೆ. ನಮ್ಮ ಆಶಯಗಳಿಗೆ ಕ್ಷೇತ್ರದ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ದಾನಿಗಳ ಸಹಕಾರ ಬೇಕು. ಭವನ ನಿರ್ಮಾಣಗೊಂಡ ಬಳಿಕ ಸಾರ್ವಜನಿಕರು ಕೂಡಾ ಭವನವನ್ನು ಬಳಸಿಕೊಳ್ಳಬಹುದು. ನಮ್ಮ ಉದ್ದೇಶ ದೊಡ್ಡದಿದ್ದು ಜನರು ನಮ್ಮ ಜೊತೆ ನಿರಂತರ ಸ್ಪಂದಿಸಬೇಕು’ ಎಂದರು.

    ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್, ಅಜ್ಜಂಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಸಮಿತಿ ಪದಾಧಿಕಾರಿ ಗೋಪಾಲ್, ಪತ್ರಕರ್ತರಾದ ಪ್ರದೀಪ್ ಹೆಬ್ಬಾರ್, ರಮೇಶ್, ದಿನೇಶ್ ಅಂಗುರ್ಡಿ, ಗೋಪಾಕೃಷ್ಣ, ರಂಜಿತ್, ರಮೇಶ್, ಅಭಿನವ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಎ.ಪಿ.ಎಂ.ಸಿ ಅಧ್ಯಕ್ಷ ಭಾಸ್ಕರ್ ನಾಯ್ಕ್, ಬೇಗಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮೀಶ ಮತ್ತು ಕಾಂಗ್ರೆಸ್ ಮುಖಂಡರು ಇದ್ದರು.

    Work on the Journalists’ Hall in Sringeri begins

  • ಗೃಹಬಳಕೆ ವಸ್ತುಗಳ ದರ ಕಡಿಮೆ ಮಾಡಿ ಪುಣ್ಯಕಟ್ಟಿಕೊಳ್ಳಿ

    ಗೃಹಬಳಕೆ ವಸ್ತುಗಳ ದರ ಕಡಿಮೆ ಮಾಡಿ ಪುಣ್ಯಕಟ್ಟಿಕೊಳ್ಳಿ

    ಚಿಕ್ಕಮಗಳೂರು: : ರಾಜ್ಯಸರ್ಕಾರ ಅಸ್ತತ್ವಕ್ಕೆ ಬಂದ ನಂತರ ಎಲ್ಲಾ ದರಗಳು ಹೆಚ್ಚಾಗುತ್ತಿವೆಯೇ ಹೊರತು ಇಳಿಮುಖ ಕಂಡೇ ಇಲ್ಲ. ಹಾಲಿನ ದರ, ವಿದ್ಯುತ್ ಮಿನಿಮಮ್ ಶುಲ್ಕ ಹೆಚ್ಚಳವಾಗಿದೆ. ಏರಿಸಿ ಪಾಪ ಕಟ್ಟಿಕೊಳ್ಳುವುದಕ್ಕಿಂತ ಇಳಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

    ಅವರು ಇಂದು ತಾಲ್ಲೂಕು ಅತ್ತಿಗುಂಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ
    ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಆಡಳಿತ ಕಟ್ಟಡದ ನಿರ್ಮಾಣದ ಕಾರ್ಯಕ್ಕೆ ಮುಂದಾಗಿರುವುದನ್ನು ಶ್ಲಾಘಿಸಿದ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರು ೫ ಲಕ್ಷ ರೂ ಅನುದಾನವನ್ನು ಎರಡು ಕಂತುಗಳಲ್ಲಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

    ಈ ಕಟ್ಟಡ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆಡಳಿತ ಕಚೇರಿ ಮತ್ತು ಬ್ಯಾಂಕಿನ ವಹಿವಾಟುಗಳನ್ನು ಮುಂದುವರೆಸಲು ಉತ್ತಮ ರೀತಿಯಲ್ಲಿ ಕಾಮಗಾರಿ ಕೈಗೊಂಡು ಗುಣಮಟ್ಟದ ಕಟ್ಟಡ ನಿರ್ಮಾಣವಾಗಲಿ ಎಂದು ಶುಭಹಾರೈಸಿದರು.

    ಐಡಿ ಪೀಠ ಪಂಚಾಯಿತಿಗೆ ನೀಡಿದ್ದ ಅನುದಾನ ವಾಪಾಸ್ ಪಡೆದಿರುವುದರಿಂದ ಕಾಮಗಾರಿ ಸ್ಥಗಿತವಾಗಿದೆ. ಇದು ಕಾರ್ಯರೂಪಕ್ಕೆ ಬಂದಿದ್ದರೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಸಿಗುತ್ತಿತ್ತು. ಪ್ರವಾಸೋದ್ಯಮದಿಂದಲೇ ಈ ಭಾಗದಲ್ಲಿ ನೂರಾರು ಜನರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದು, ೨೦೧೯-೨೦ ರಲ್ಲಿ ಹಾಕಿದ್ದ ಈ ಅನುದಾನ ವಾಪಾಸ್ ಹೋಗಿರುವುದನ್ನು ಮರಳಿ ನೀಡಬೇಕೆಂದು ಆಗ್ರಹಿಸಿದರು.

    ವಿದ್ಯುತ್ ಕಣ್ಣುಮುಚ್ಚಾಲೆ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರೇ ಇಂಧನ ಸಚಿವರಾಗಿರುವುದರಿಂದ ಬೇಸಿಗೆಯಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದ ಅವರು, ಮಳೆಗಾಲದಲ್ಲಿ ಮರ ಬಿದ್ದಿದೆ ಎಂಬ ಕಾರಣ, ಬೇಸಿಗೆಯಲ್ಲಿ ಓಲ್ಟೇಜ್, ಪವರ್ ಸಾಕಾಗುವುದಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ. ವಿದ್ಯುತ್ ಬಿಲ್ ದರ ಮಾತ್ರ ಏರಿಕೆಯಾಗುತ್ತಿದೆ ಎಂದು ಆರೋಪಿಸಿದರು.

    ಈ ಭಾಗಕ್ಕೆ ಸುಸಜ್ಜಿತ ಬಸ್ ಕೊಡಬೇಕು, ತಳ್ಳುಮಾಡಲ್ ಬಸ್ ನೀಡಿರುವುದು ಜನರ ಬದುಕಿನ ಜೊತೆ ಚೆಲ್ಲಾಟವಾಡಿದಂತಾಗುತ್ತದೆ. ಅತ್ತಿಗುಂಡಿ ಶಾಲೆಯ ಶೌಚಾಲಯ ದುರಸ್ಥಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

    ಮಾಜಿ ಜಿ.ಪಂ ಸದಸ್ಯೆ ಜೆಸಂತ ಅನಿಲ್‌ಕುಮಾರ್ ಮಾತನಾಡಿ, ಬಹು ವರ್ಷಗಳ ಕನಸಾಗಿದ್ದ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸುವ ಮೂಲಕ ನನಸಾಗಿದೆ ಎಂದು ಹೇಳಿದರು.

    ಈ ಕೃಷಿಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಪದಾಧಿಕಾರಿಗಳು ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಮುಖಂಡ ಮಂಜು, ಸಂಘದ ಅಧ್ಯಕ್ಷ ಚಂಗಪ್ಪ ಬಿ.ಆರ್, ಉಪಾಧ್ಯಕ್ಷ ಸೈಯದ್ ಮುಕ್ತಿಯಾರ್ ಪಾಷ, ನಿರ್ದೇಶಕರುಗಳಾದ ಶಿವಕುಮಾರ್, ಧರ್ಮೇಶ್, ಹರೀಶ್, ಭಾಗ್ಯ, ಕಮಲ, ಶಾಂತಕುಮಾರ್, ಈಶ್ವರ, ಜಗದೀಶ್, ಅಣ್ಣು, ಅಬೀಬುಲ್ಲಾಖಾನ್ ಮತ್ತಿತರರು ಉಪಸ್ಥಿತರಿದ್ದರು.

    Reduce the price of household items and earn merit.

  • ಯತ್ನಾಳ್ ಉಚ್ಚಾಟನೆ ಬೆಳವಣಿಗೆ ದುರಾದೃಷ್ಟಕರ

    ಯತ್ನಾಳ್ ಉಚ್ಚಾಟನೆ ಬೆಳವಣಿಗೆ ದುರಾದೃಷ್ಟಕರ

    ಚಿಕ್ಕಮಗಳೂರು: ದೇಶ ಮತ್ತು ಪಕ್ಷ ದೊಡ್ಡದು, ನಾವು ಪಕ್ಷಕ್ಕಿಂತ ದೊಡ್ಡವರಲ್ಲ, ಯತ್ನಾಳ್ ೪ ದಶಕಗಳ ಒಡನಾಡಿ, ಈ ಬೆಳವಣಿಗೆ ದುರಾದೃಷ್ಟಕರವೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ಬಿಜೆಪಿಯಿಂದ ಯತ್ನಾಳ್ ಆರು ವರ್ಷ ಉಚ್ಚಾಟನೆಹೊಂದಿರುವ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಪ್ರತಿಯೊಬ್ಬರಲ್ಲೂ ಸಾಮರ್ಥ್ಯ,ದೌರ್ಬಲ್ಯ ಇದ್ದೇ ಇರುತ್ತದೆ. ನಾನು ವಿಶ್ಲೇಷಣೆ ಮಾಡಲು ಇಚ್ಚಿಸುವುದಿಲ್ಲ,ಏಕ್ ಹೈ ತೋ ಸೇಫ್ ಹೇ ಎನ್ನುವುದು ಪಕ್ಷ,ಸಮಾಜ,ದೇಶ ಎಲ್ಲರಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.

    ಸಂದರ್ಭಕ್ಕೆ ಗ್ರಹಿಸಿ ಮಾತನಾಡೋದು ಸ್ವಾಭಾವಿಕ,ಯತ್ನಾಳ್ ಕೂಡ ಓರ್ವ ಬಲಿಷ್ಠ ನಾಯಕ, ಅದರ ಬಗ್ಗೆ ಅನುಮಾನ ಬೇಡ.ಪಕ್ಷ ಹಲವು ಕಾರಣಕ್ಕೆ ಒಂದು ಅನಿವಾರ್ಯ ನಿರ್ಧಾರಕ್ಕೆ ಬಂದಿರುತ್ತದೆ.ಎಲ್ಲರೂ ಒಟ್ಟಿಗೆ ಹೋಗುವ ವಾತಾವರಣ ನಿರ್ಮಾಣವಾಗಿದ್ದರೆ ಖುಷಿ ಪಡುವುದರಲ್ಲಿ ನಾನೇ ಮೊದಲಿಗ ಎಂದರು.

    ಶಾಸಕ ಬಸವನಗೌಡಪಾಟೀಲ್ ಯತ್ನಾಳ್ ಯಾವತ್ತೂ ಬಿಜೆಪಿ ಬಗ್ಗೆ ಮಾತನಾಡಲಿಲ್ಲ ಎಂಬ ಮಾತಿನ ಹಿನ್ನೆಲೆಯಲ್ಲಿ ಈಗ ನಾನು ಮತನಾಡಿದರೆ ಅವರವರ ಭಾವಕ್ಕೆ ಗ್ರಹಿಸುತ್ತಾರೆ.ಸತ್ಯ ಹೇಳಿದರೆ ಗ್ರಹಿಸುವವರು ಸತ್ಯವನ್ನೇ ಗ್ರಹಿಸುತ್ತಾರೆ ಎನ್ನುವಂತಿಲ್ಲ, ಸಂದರ್ಭಕ್ಕೆ ತಕ್ಕಂತೆ ತಮಗೆ ಬೇಕಾದಂತೆ ಗ್ರಹಿಸುತ್ತಾರೆ. ನಿಷ್ಠೆಯ ಮಾತು ಬಂದಾಗ ಪಕ್ಷಕ್ಕಿಂತ ದೊಡ್ಡದು ಎಂದು ನಾವು ಯಾವುದನ್ನೂ ಭಾವಿಸಿಲ್ಲ,ಅದಕ್ಕಿಂತ ದೊಡ್ಡದಿದ್ದರೆ ಅದು ದೇಶ ಮಾತ್ರ ಎಂದರು.

    ರಾಜ್ಯದಲ್ಲಿ ನಡೆದಿರುವ ಹನಿಟ್ರ್ಯಾಪ್ ವಿಷಯ ಕುರಿತು ಕೇಳಿದಾಗ ಕಾಂಗ್ರೆಸ್ ಪಕ್ಷ ಕೊಲೆಗಡುಕರ ಪಕ್ಷ ಎನ್ನುವುದು ನಿಜವಾಯಿತ್ತಲ್ಲ.ಕಾರ್ಖಾನೆಯೂ ಅವರದ್ದು,ಕೊಲೆಗೆ ಬಂದಿದ್ದರು ಎನ್ನುವ ಮಾತನ್ನು ಅವರೇ ಹೇಳಿದ್ದಾರೆಂದು ತಿಳಿಸಿದರು.

    ಆಡಳಿತ ಪಕ್ಷದವರದ್ದು, ಫೋನ್ ಟ್ಯಾಪ್ ಮಾಡುತ್ತಾರೆ ಅಂದಿದ್ದರು. ನಾನು ಅಂದೇ ಹೇಳಿದ್ದೇ, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಈ ರೀತಿಯ ಹೊಲಸು ರಾಜಕಾರಣ ಕರ್ನಾಟಕಕ್ಕೆ ಶೋಭೆ ತರುವುದಿಲ್ಲವೆಂದರು.

    Yatnal’s expulsion is an unfortunate development.

  • ಸರ್ಕಾರದ ಜನಪರ ಯೋಜನೆ ಪಡೆದ ಫಲಾನುಭವಿಗಳು ಆರ್ಥಿಕ ಸದೃಢರಾಗಬೇಕು

    ಸರ್ಕಾರದ ಜನಪರ ಯೋಜನೆ ಪಡೆದ ಫಲಾನುಭವಿಗಳು ಆರ್ಥಿಕ ಸದೃಢರಾಗಬೇಕು

    ಚಿಕ್ಕಮಗಳೂರು: ಸರ್ಕಾರಗಳು ಮಹಿಳೆಯರು ಮತ್ತು ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಬ್ಯಾಂಕ್‌ಗಳ ಮೂಲಕ ಆರ್ಥಿಕ ಸಾಲಸೌಲಭ್ಯ ನೀಡಲು ಮುಂದಾಗಿದ್ದು, ಇದರ ಪ್ರಯೋಜನ ಪಡೆದ ಫಲಾನುಭವಿಗಳು ಸ್ವ-ಉದ್ದಿಮೆ ಸ್ಥಾಪಿಸಿ ಆರ್ಥಿಕ ಸದೃಢರಾಗಬೇಕೆಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಕರೆನೀಡಿದರು.

    ಅವರು ಇಂದು ನಗರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ‘ಪಿಎಂ ಸ್ವ-ನಿಧಿ ಮತ್ತು ಸ್ವ-ನಿಧಿ ಸೇ ಸಮೃದ್ಧಿ ಮಾಸ ಅಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ನಿಗಧಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಉಳಿತಾಯದ ಹಣದಲ್ಲಿ ವಿಮಾ ಸೌಲಭ್ಯ ಪಡೆದು ಹಣ ತೊಡಗಿಸಿದವರಿಗೆ ೬೦ ವರ್ಷಗಳ ಬಳಿಕ ಪ್ರತೀ ತಿಂಗಳು ೩೫೦೦ ರೂ ಪಿಂಚಣಿ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು.

    ಈ ಯೋಜನೆಯಡಿ ೧೨೦೦ ಫಲಾನುಭವಿಗಳನ್ನು ಆಯ್ಕೆಮಾಡಬೇಕಾಗಿದ್ದು, ಕೇವಲ ೭೯ ಜನ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹೆಚ್ಚಿನ ಜನರಿಗೆ ಇದರ ಸದುಪಯೋಗ ದೊರೆಯುವಂತೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ನಗರಸಭೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ೪ ಕೋಟಿ ರೂ ವಿವಿಧ ರೀತಿಯ ಸ್ವ-ಉದ್ಯೋಗ ಸ್ಥಾಪನೆಗೆ ಸಾಲಸೌಲಭ್ಯ ನೀಡಲಾಗಿದೆ. ಸಾಲ ಪಡೆದ ಫಲಾನುಭವಿಗಳ ಖಾತೆಗೆ ೬ ಲಕ್ಷ ರೂ ಸಹಾಯಧನ ನೇರವಾಗಿ ಬ್ಯಾಂಕಿಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.

    ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಹರ್ಷ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಆಧಾರದಲ್ಲಿ ಪಿಎಂ ಸ್ವ-ನಿಧಿ ಯೋಜನೆಯಡಿ ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯಿಂದ ೬೦ ವರ್ಷ ಪೂರ್ಣಗೊಂಡವರಿಗೆ ಪಿಂಚಣಿ ನೀಡುವ ಯೋಜನೆಯನ್ನು ಜಾರಿಮಾಡಲಾಗಿದೆ ಎಂದು ತಿಳಿಸಿದರು.

    ೧೮-೪೦ ವರ್ಷ ವಯೋಮಾನದ ಒಳಗಿರುವವರಿಗೆ ಅವರ ವಯಸ್ಸಿನ ಆಧಾರದಲ್ಲಿ ಮಾಸಿಕ ವಿಮಾ ಮೊತ್ತ ಪಾವತಿಸಿದವರಿಗೆ ಕೇಂದ್ರಸರ್ಕಾರ ವಂತಿಕೆ ನೀಡಿ ೬೦ ವರ್ಷ ವಯಸ್ಸಾದವರಿಗೆ ೩೫೦೦ ರೂ ಪಿಂಚಣಿ ಸೌಲಭ್ಯ ದೊರೆಯಲಿದೆ ಎಂದರು.

    ನಗರಸಭೆ ಸಮುದಾಯ ಸಂಘಟನಾಧಿಕಾರಿ ಚಂದ್ರಶೇಖರಪ್ಪ ಹೆಚ್.ಎಸ್ ಮಾತನಾಡಿ, ಪ್ರಧಾನಮಂತ್ರಿ ಆತ್ಮನಿರ್ಭರ್ ಯೋಜನೆಯಡಿ ಗುರ್ತಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಶ್ರಮಯೋಗಿ ಮನ್‌ಧನ್ ಯೋಜನೆಗೆ ಬಂದ ೭೯ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಪೆನ್ಸನ್ ನೀಡುವ ಉದ್ದೇಶದಿಂದ ಇಂದು ಶಿಬಿರ ನಡೆಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಧಿಕಾರಿಗಳಾದ ರವಿ, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

    Beneficiaries of government’s public welfare schemes should become financially strong.

  • ಆಶಾಕಿರಣ ಚಾರಿಟಬಲ್ ಟ್ರಸ್ಟ್ ನ ಕಾವೇರಿ ವಸತಿ ಗೃಹ ಉದ್ಘಾಟನೆ

    ಆಶಾಕಿರಣ ಚಾರಿಟಬಲ್ ಟ್ರಸ್ಟ್ ನ ಕಾವೇರಿ ವಸತಿ ಗೃಹ ಉದ್ಘಾಟನೆ

    ಚಿಕ್ಕಮಗಳೂರು: ಅಂಧಮಕ್ಕಳ ಭಾವನೆಗಳಿಂದ ಬಿಡುಗಡೆಯಾಗುವ ವಿಚಾರಗಳು ಪರಿಶುದ್ಧತೆಯಿಂದ ಕೂಡಿರುತ್ತವೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

    ಅವರು ಇಂದು ಆಶಾಕಿರಣ ಶಾಲಾವರಣದಲ್ಲಿ ಆಶಾಕಿರಣ ಅಂಧಮಕ್ಕಳ ವಸತಿಯುತ ಪಾಠಶಾಲೆ, ಆಶ್ರಯ ಫೌಂಡೇಷನ್, ಜಿಲ್ಲಾ ಕಸಾಪ, ಜಿಲ್ಲಾ ಜಾನಪದ ಪರಿಷತ್ ಇವರುಗಳ ಸಹಯೋಗದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಕಾವೇರಿ ವಸತಿ ಗೃಹದ ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.

    ಅಂತಃಕರಣದಲ್ಲಿ ವಿಶೇಷ ಜ್ಞಾನ ಪಡೆದುಕೊಂಡು ಮಾತನಾಡುವವರು ಅಂಧಮಕ್ಕಳು, ವರನಟ ಡಾ. ರಾಜ್‌ಕುಮಾರ್‌ರವರು ಅಭಿಮಾನಿಗಳನ್ನು ದೇವರೆಂದು ಕರೆದರೆ, ಡಾ. ಜೆ.ಪಿ ಕೃಷ್ಣೇಗೌಡ ಅವರು ಅಂಧಮಕ್ಕಳನ್ನು ದೇವರೆಂದು ಕರೆದಿದ್ದಾರೆ. ದೇವರ ಸ್ವರೂಪವಾಗಿರುವ ಅಂಧಮಕ್ಕಳ ಶಾಲೆಯ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಬಯಸದೇ ಬಂದ ಭಾಗ್ಯ ಎಂದು ಹೇಳಿದರು.

    ಅಂಧ ಅಂದ ತಕ್ಷಣ ಎಲ್ಲರೂ ದೂರ ಸರಿಯುತ್ತಾರೆ, ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ, ಮಾತು ಬರುವುದಿಲ್ಲ ಎಂಬ ಕಾರಣಕ್ಕೆ ಸಮಾಜ ಮತ್ತು ಕುಟುಂಬದವರು ಸಹ ದೂರವಾಗುತ್ತಾರೆ. ಗೋವಿನ ಹತ್ತಿರ ಜೀವಿಸಿದರೆ ಆಯಸ್ಸು ಹೆಚ್ಚಾಗುತ್ತದೆ, ಪರಿಸರದ ಮಧ್ಯೆ ಇದ್ದರೆ ಮನುಷ್ಯನ ಆಯಸ್ಸು ಹೆಚ್ಚಾಗುತ್ತದೆ ಎಂದು ವಿಶ್ಲೇಷಿಸಿದರು.

    ಕಳೆದ ೩೦ ವರ್ಷಗಳಿಂದ ಒಟ್ಟಿಗೆ ಇದ್ದು, ಡಾ. ಜೆ.ಪಿ ಕೃಷ್ಣೇಗೌಡರು ಅಂಧಮಕ್ಕಳ ಸೇವೆ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ, ಅವರಿಗೆ ವಯಸ್ಸಾದಂತೆ ಕಾಣುತ್ತಿಲ್ಲ. ಕಾರಣ ಈ ಪರಿಸರದಲ್ಲಿ ದೇವರ ಸ್ವರೂಪಿಗಳೊಂದಿಗೆ ಜೀವಿಸುತ್ತಿರುವುದರಿಂದ ಆಯಸ್ಸು ಹೆಚ್ಚಾಗಿದೆ ಎಂದು ತಿಳಿಸಿದರು.

    ಹಿಂದೆ ಬಾಲಗಂಗಾಧರನಾಥ ಸ್ವಾಮಿಗಳು ರಾಮನಗರದಲ್ಲಿ ದೇವರ ಗೋಪುರ ಕಟ್ಟುವ ಹಾಗೆ ಕಲ್ಲಿನ ಗೋಡೆಯಿಂದ ಅಂಧಮಕ್ಕಳ ಶಾಲೆಯ ಕಟ್ಟಡವನ್ನು ನಿರ್ಮಿಸಿದ್ದಾರೆ. ಒಬ್ಬ ವ್ಯಕ್ತಿ ಬಡವ-ಶ್ರೀಮಂತ, ಮೇಲು-ಕೀಳು ಎಂಬ ಕೀಳರಿಮೆ ಬಿಟ್ಟು ನಾವೆಲ್ಲಾ ಮನುಷ್ಯರು ಎಂಬ ಭಾವನೆಯಿಂದ ಬದುಕುವುದು ಅಗತ್ಯ ಎಂದು ಹೇಳಿದರು.

    ತಂದೆ-ತಾಯಿಯಿಂದ ಪಡೆದ ಸಂಸ್ಕಾರವನ್ನು ಜನಪರ ಕಾರ್ಯಗಳಿಗೆ ಪ್ರಸ್ತುತ ಸಮಾಜದಲ್ಲಿ ಬಳಕೆ ಮಾಡುವವರು ಬಹಳ ವಿರಳ ಎಂದು ವಿಷಾಧಿಸಿದರು.
    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಡಾ. ಜೆ.ಪಿ ಕೃಷ್ಣೇಗೌಡ ನೇತೃತ್ವ, ಸಹಯೋಗದ ಕಾರಣದಿಂದ ಸಾವಿರಾರು ದಿವ್ಯಾಂಗ ಮಕ್ಕಳಿಗೆ ಆಶ್ರಯ ನೀಡಿ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ, ದಾಸೋಹ ನೀಡುತ್ತಿರುವ ಬಗ್ಗೆ ಶ್ಲಾಘಿಸಿದರು.

    ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷರಾದ ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿ, ಇಲ್ಲಿ ಅಂಧಮಕ್ಕಳ ಪಾಠಶಾಲೆ ಸ್ಥಾಪಿಸಲು ಬಾಲಗಂಗಾಧರನಾಥ ಮಹಾಸ್ವಾಮಿಗಳು ಮಾರ್ಗದರ್ಶಕರಾಗಿ ಶಕ್ತಿ ತುಂಬಿದ್ದರು. ೨೫ನೇ ವರ್ಷದ ಬೆಳ್ಳಿ ಮಹೋತ್ಸವಕ್ಕೆ ನಿರ್ಮಲಾನಂದನಾಥ ಮಹಾಸ್ವಾಮಿಗಳು ಆಗಮಿಸಿ ಸಂಸ್ಥೆಗೆ ಬಲ ತುಂಬಿದ್ದರು. ಗುಣನಾಥ ಶ್ರೀಗಳು ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿರುವುದು ಸಮಾಜ ಸೇವೆಗೆ ಸಮರ್ಪಿಸಿಕೊಂಡಿರುವುದಕ್ಕೆ ಉದಾಹರಣೆಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ನಸ್ರುಲ್ಲಾ ಶರೀಫ್, ಮೋಹನ್, ಎಐಟಿ ಪ್ರಾಂಶುಪಾಲರಾದ ಡಾ. ಸಿ.ಟಿ ಜಯದೇವ, ಜ್ಯೋತಿ ಜೆ.ಪಿ ಕೃಷ್ಣೇಗೌಡ ಡಾ.ವರ್ಷ .ಮತ್ತಿತರರು ಉಪಸ್ಥಿತರಿದ್ದರು.ಅಂಧಮಕ್ಕಳ ಶಾಲೆಯ ಕಾರ್ಯದರ್ಶಿ ಹೆಚ್.ಸಿ ಮಹೇಶ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಲಕ್ಷ್ಮಣ್‌ಗೌಡ ಕೊನೆಯಲ್ಲಿ ವಂದಿಸಿದರು.

    Asha Kirana Charitable Trust’s Cauvery Residential Home inaugurated

  • ಶ್ರೀಗುರು ನಿರ್ವಾಣಸ್ವಾಮಿಮಠದ ಜಾತ್ರೆಗೆ ತೆರೆ

    ಶ್ರೀಗುರು ನಿರ್ವಾಣಸ್ವಾಮಿಮಠದ ಜಾತ್ರೆಗೆ ತೆರೆ

    ಚಿಕ್ಕಮಗಳೂರು: ಕೈಮರದ ಶ್ರೀಗುರು ನಿರ್ವಾಣಸ್ವಾಮಿ ಮಠದ ಶ್ರೀಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿಮಹೋತ್ಸವ ನಾಡಿನ ಭಕ್ತರ ಸಮ್ಮುಖದಲ್ಲಿ ನಡೆಯಿತು.

    ಚಂದ್ರದ್ರೋಣ ಗಿರಿಪರ್ವತ ಸಾಲಿನ ಪದತಲದ ಕೈಮರ ಸಮೀಪ ಹೊಸಳ್ಳಿಯ ಶ್ರೀಗುರು ನಿರ್ವಾಣಸ್ವಾಮಿ ಮಠದಲ್ಲಿ ಸಂಪ್ರದಾಯದಂತೆ ಪಾಲ್ಗುಣಬಹುಳ ಏಕಾದಶಿ ಮತ್ತು ದ್ವಾದಶಿಯಂದು ಶ್ರೀಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿ ಮಹೋತ್ಸವ ಶ್ರದ್ಧಾಭಕ್ತಿಯೊಂದಿಗೆ ಇಂದು ಸಂಪನ್ನಗೊಂಡಿತು.

    ಶ್ರೀಮಠದ ಧರ್ಮದರ್ಶಿ ಎನ್.ಮಹೇಶ್ ಮತ್ತು ಕಾರ್‍ಯದರ್ಶಿ ಎನ್.ಎಂ.ಅಜಯ್ ನೇತೃತ್ವದಲ್ಲಿ ಹೊಸಳ್ಳಿ, ತೋಟದಳ್ಳಿ, ಹಿತ್ಲುಮಕ್ಕಿ, ಪುಟ್ಟೇನಹಳ್ಳಿ, ಮಾವಿನಹಳ್ಳಿ, ದಾಸರಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಇಂದು ಮಧ್ಯಾಹ್ನ ಶ್ರೀಸ್ವಾಮಿಯ ಅಲಂಕೃತ ಪಲ್ಲಕ್ಕಿಯನ್ನು ಶ್ರೀಮಠದ ಸುತ್ತ ಮೂರುಸುತ್ತು ಉತ್ಸವ ನಡೆಸಿ ಉತ್ಸವಮೂರ್ತಿಯನ್ನು ಗರ್ಭಗುಡಿಯೊಳಗೆ ನೆಲೆಗೊಳಿಸಿದರು. ಜಾತ್ರಾಮಹೋತ್ಸವ ನಡೆಸಿಕೊಟ್ಟ ಗ್ರಾಮಸ್ಥರಿಗೆ ಶ್ರೀಮಠದ ವತಿಯಿಂದ ಪ್ರಸಾದ ಭೋಜನ ಜೊತೆಗೆ ತೆಂಗಿನಕಾಯಿಯ ತಾಂಬೂಲ ನೀಡಿ ಗೌರವಿಸಲಾಯಿತು.

    ಏಕಾದಶಿಯ ಮಂಗಳವಾರ ಪೂರ್ವಾಹ್ನ ಶ್ರೀಮಲ್ಲಿಕಾರ್ಜುನಸ್ವಾಮಿ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಆವರಣಕ್ಕೆ ತಂದು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯಗಳು ಮೊಳಗಿದವು. ಒಳಾವರಣದ ಪಲ್ಲಕ್ಕಿಯಮ್ಮ ಸಹೋದರಿಯರ ಗುಡಿಯ ಮುಂದೆ ಪೂಜೆಸ್ವೀಕರಿಸಿ ಹೊರಟ ಉತ್ಸವಕ್ಕೆ ಸುಮಂಗಲಿಯರು ಆರತಿ ಬೆಳಗಿ ಸ್ವಾಗತಕೋರಿದರು. ಶ್ರೀಗುರು ನಿರ್ವಾಣಸ್ವಾಮಿಗಳ ಗದ್ದುಗೆಯ ಮುಂಭಾಗಕ್ಕೆ ಬಂದ ಉತ್ಸವ ಪೂಜೆ ಸ್ವೀಕರಿಸಿ ಪ್ರಾಂಗಣದಲ್ಲಿ ಪ್ರದಕ್ಷಣೆಹಾಕಿ ರಾಜದ್ವಾರದಿಂದ ಹೊರಟು ಗರುಡಗಂಬ ಸುತ್ತಿ ಜನರ ಹರ್ಷೋದ್ಘಾರದ ನಡುವೆ ಮುನ್ನಡೆಯಿತು.

    ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಠದ ಹೊರ ಆವರಣದಲ್ಲಿ ಮೂರುಸುತ್ತುಗಳ ಉತ್ಸವದ ನಂತರ ಶ್ರೀಸ್ವಾಮಿಯನ್ನು ಸಂಪಿಗೆ ಮರದ ಕೆಳಗಿನ ಪಲ್ಲಕ್ಕಿಕಟ್ಟೆಯ ಮೇಲೆ ಮೂರ್ತ ಮಾಡಲಾಯಿತು. ‘ಭಹಲ್ಲರಿ ವೀರ…’ ಖಡ್ಗ ಸಮರ್ಪಣೆಯೊಂದಿಗೆ ಹಳ್ಳಿವಾದ್ಯದ ತಾಳಕ್ಕೆ ಹೆಜ್ಜೆಹಾಕಿದ ಗ್ರಾಮಸ್ಥರು ಶ್ರೀಸ್ವಾಮಿಯ ಪವಾಡಗಳನ್ನು ಹಾಡಿಹೊಗಳಿದರು. ಪಲ್ಲಕ್ಕಿಯಲ್ಲಿ ವಿರಾಜಮಾನರಾದ ಶ್ರೀಸ್ವಾಮಿಗೆ ಗ್ರಾಮಸ್ಥರು ಪೂಜೆಸಲ್ಲಿಸಿ ಹಣ್ಣುಕಾಯಿ ಫಲಸಮರ್ಪಿಸಿ ಭಕ್ತಿ-ಭಾವ ಮೆರೆದರು.

    ಇಳಿಹೊತ್ತಿನಲ್ಲಿ ಪಲ್ಲಕ್ಕಿಗೆ ಪೂಜೆಸಲ್ಲಿಸಿ ಮಠದ ಆವರಣದಿಂದ ಹೊರಟ ರಾತ್ರಿಯ ಉತ್ಸವ ತೋಟದ ಆವರಣದಲ್ಲಿರುವ ಕೆಂಚಪ್ಪನ ಗುಡಿ ಹಾದು, ಗಾಳಿಹಳ್ಳಿಮಠ ತಲುಪಿತು. ಅಲ್ಲಿ ಪೂಜೆ ಸ್ವೀಕರಿಸಿದ ನಂತರ ಗಾಳಿಹಳ್ಳಿಮಠದ ಶ್ರೀಸಿದ್ದೇಶ್ವರಸ್ವಾಮಿಯ ಪಲ್ಲಕ್ಕಿ ಉತ್ಸವವೂ ಜೊತೆಗೂಡಿ ಹೊರಟವು. ಹೊಸಳ್ಳಿ ಪಲ್ಲಕ್ಕಿಹರದಲ್ಲಿ ನೂರಾರು ಗ್ರಾಮಸ್ಥರು ನೆರೆದು ಎದುರುಗೊಂಡರು. ಜೋಡಿ ಪಲ್ಲಕ್ಕಿಗಳ ಉತ್ಸವ ಹರದಲ್ಲಿ ವಿದ್ಯುತ್ ದೀಪಾಲಂಕಾರದ ನಡುವೆ ನಡೆಯಿತು.

    ನಂತರ ಶ್ರೀಮಲ್ಲಿಕಾರ್ಮುನಸ್ವಾಮಿ ಪಲ್ಲಕ್ಕಿಯು ಶ್ರೀ ಗುರುನಿರ್ವಾಣಸ್ವಾಮಿ ಮಠತಲುಪಿ ಗದ್ದುಗೆ ಆಗುವುದರ ವೇಳೆಗೆ ಬೆಳಗಿನಜಾವ ಸಮೀಪಿಸಿತು. ರಾತ್ರಿಪೂರ್ತಿ ಜಾತ್ರೆಯ ಸಡಗರ ಮನೆಮಾಡಿತ್ತು. ಶ್ರೀಮಠದ ಆವರಣ ತಳಿರುತೋರಣ, ಕೇಸರಿಪತಾಕೆ, ಬಂಟಿಂಗ್ಸ್ ಜೊತೆಗೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದೊಂದಿಗೆ ಝಗಮಗಿಸಿತು. ನೂರಾರು ಅಂಗಡಿಮುಂಗಟ್ಟುಗಳು ಜಾತ್ರೆಯ ಸಡಗರ ಹೆಚ್ಚಿಸಿತು.

    ಪಾಲ್ಗುಣ ಬಹುಳ ತದಿಗೆ ಮಾರ್ಚ್ ೧೭ರಂದು ಹಗಲು ಬ್ರಹ್ಮರಥೋತ್ಸವ, ರಾತ್ರಿ ಮಹಾರಥೋತ್ಸವ ಜರುಗಿತ್ತು. ಚೌತಿಯ ಮಂಗಳವಾರ ಘಳಿಗೆ ತೇರು ನಡೆದಿತ್ತು. ಪಂಚಮಿಯಂದು ಓಕಳಿ, ಮಂಟಪ ಉತ್ಸವ ನಡೆದಿದ್ದರೆ, ದಶಮಿಯ ಸೋಮವಾರ ಧ್ವಜಾರೋಹಣ, ಸಂತರ್ಪಣೆ, ಭಕ್ತಾದಿಗಳ ಮುಡಿತೆಗೆಸುವುದು, ಹರಕೆ ಹಾಡ್ಯಗಳನ್ನೊಪ್ಪಿಸಿ ಆಶೀರ್ವಾದ ಪಡೆಯಲು ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ನಿನ್ನೆ ಮತ್ತು ಇಂದು ಪಲ್ಲಕಿಉತ್ಸವ ನಡೆದಿದ್ದು, ಮಧ್ಯಾಹ್ನ ಗ್ರಾಮಸ್ಥರಿಗೆ ತಾಂಬೂಲ ನೀಡುವುದರೊಂದಿಗೆ ಪ್ರಸಕ್ತ ಸಾಲಿನ ಶ್ರೀಗುರುನಿರ್ವಾಣಸ್ವಾಮಿ ಮಠದ ಜಾತ್ರಮಹೋತ್ಸವ ಸಂಪನ್ನಗೊಂಡಿತ್ತು.

    Sri Guru Nirvana Swamy Matha Jatregetere

     

  • ಕ್ಷೇತ್ರವ್ಯಾಪ್ತಿಯಲ್ಲಿ ಆಶ್ರಯ ನಿವೇಶನಕ್ಕೆ ಭೂಮಿ ಗುರ್ತಿಸಲು ಸೂಚನೆ

    ಕ್ಷೇತ್ರವ್ಯಾಪ್ತಿಯಲ್ಲಿ ಆಶ್ರಯ ನಿವೇಶನಕ್ಕೆ ಭೂಮಿ ಗುರ್ತಿಸಲು ಸೂಚನೆ

    ಚಿಕ್ಕಮಗಳೂರು:  ಕ್ಷೇತ್ರವ್ಯಾಪ್ತಿಯ ೨೩ ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ನಿವೇಶನ ನೀಡಲು ಭೂಮಿ ಗುರ್ತಿಸುವಂತೆ ಹಾಗೂ ವಸತಿ ರಹಿತ, ನಿವೇಶನ ರಹಿತರ ಪಟ್ಟಿಯನ್ನು ಒಂದು ತಿಂಗಳ ಒಳಗೆ ಸಿದ್ಧಪಡಿಸಲು ಶಾಸಕ ಹೆಚ್.ಡಿ ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

    ಅವರು ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್, ಇಓ, ಪಡಿಓ, ಎಡಿಎಲ್‌ಆರ್, ಎಸಿಎಫ್, ಆರ್‌ಐ, ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

    ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಆದೇಶದಂತೆ ಆಡಳಿತಕ್ಕೆ ಚುರುಕು ಮುಟ್ಟಿಸಲು ಇಂದು ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದು ಹೇಳಿದರು.

    ಚಿಕ್ಕಮಗಳೂರು ತಾಲ್ಲೂಕಿನ ಗ್ರಾಮಾಂತರದಲ್ಲಿ ಈಗಾಗಲೇ ಒಟ್ಟು ೨೦೯೦ ಜನ ನಿವೇಶನ ರಹಿತ ಫಲಾನುಭವಿಗಳು ಇದ್ದು, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ ಅವರು, ಅತೀ ಶೀಘ್ರದಲ್ಲಿ ಪಟ್ಟಿಯನ್ನು ತಯಾರಿಸುವಂತೆ ತಿಳಿಸಿರುವುದಾಗಿ ಹೇಳಿದರು.

    ಗ್ರಾ.ಪಂ ವ್ಯಾಪ್ತಿಯಲ್ಲಿ ಇ-ಖಾತೆಗಳ ಬಗ್ಗೆ ಸಮಸ್ಯೆ ಇದ್ದು, ಎಲ್ಲಾ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಿ ಈ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಇಓ ಹಾಗೂ ತಮ್ಮ ಗಮನಕ್ಕೆ ತೊಡಕುಗಳ ವಿವರಿಸಿದ ಹಿನ್ನೆಲೆಯಲ್ಲಿ ಸರ್ಕಾರದ ತಂತ್ರಾಂಶದಲ್ಲಿ ಕ್ರಯಪತ್ರ ಕಡ್ಡಾಯವಾಗಿರಬೇಕೆಂದು ತಿಳಿಸಿದ್ದಾರೆ, ಪತ್ರಾರ್ಜಿತ ಆಸ್ತಿಗೆ ಕ್ರಯಪತ್ರ ಇರುವುದಿಲ್ಲ. ಈ ಸಂಬಂಧ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

    ಲಕ್ಯಾ ಮತ್ತು ಸಖರಾಯಪಟ್ಟಣ ಹೋಬಳಿ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ರೈತರು ಅರ್ಜಿ ಸಲ್ಲಿಸಿದ್ದಾರೆ, ಈ ಬಗ್ಗೆ ಪರಿಶೀಲಿಸಿ, ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

    Instructions to identify land for shelter sites within the constituency

  • ರಾಜ್ಯಸರ್ಕಾರ ಅಭಿವೃದ್ಧಿ ಪಥದ ಜೊತೆಗೆ ಅಭಿವೃದ್ಧಿ ಪರ್ವ

    ರಾಜ್ಯಸರ್ಕಾರ ಅಭಿವೃದ್ಧಿ ಪಥದ ಜೊತೆಗೆ ಅಭಿವೃದ್ಧಿ ಪರ್ವ

    ಚಿಕ್ಕಮಗಳೂರು:  ರಾಜ್ಯಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗದೆ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿರುವ ಜೊತೆಗೆ ಅಭಿವೃದ್ಧಿ ಪರ್ವ ಆರಂಭಿಸಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

    ಅವರು ಇಂದು ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮಲ್ಲೇನಹಳ್ಳಿ ಗ್ರಾಮದಿಂದ ಭಕ್ತರಹಳ್ಳಿ ತರೀಕೆರೆ ರಸ್ತೆ ಸಿಆರ್‌ಎಫ್ ಯೋಜನೆಯಡಿಯಲ್ಲಿ ೬ ಕೋಟಿ ರೂ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ಸರ್ಕಾರ ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಪರವಾಗಿ ಯಾವುದೇ ಜಾತಿಬೇಧವಿಲ್ಲದೆ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣಕ್ಕೆ ಪಣತೊಟ್ಟು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ರೀತಿಯಲ್ಲಿ ಅಭಿವೃದ್ಧಿಯನ್ನು ನಡೆಸುತ್ತಿದೆ ಎಂದು ತಿಳಿಸಿದರು.

    ಕಳೆದ ಹಲವಾರು ದಿನಗಳಿಂದ ಹಿಂದೆ ಬಿಳಿಕೆರೆ-ತರೀಕೆರೆ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಈಗ ತುಂಬಾ ಕಡೆ ಗುಂಡಿಬಿದ್ದಿರುವುದರಿಂದ ಆಯ್ದ ಭಾಗದಲ್ಲಿ ಮರು ಡಾಂಬರೀಕರಣ ಮಾಡಲು ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

    ಸುಮಾರು ೬ ಕೋಟಿ ರೂ ವೆಚ್ಚದಲ್ಲಿ ಮಲ್ಲೇನಹಳ್ಳಿಯಿಂದ ಭಕ್ತರಹಳ್ಳಿ ವರೆಗೆ ೭ ಕಿ.ಮೀ ರಸ್ತೆಯನ್ನು ಮರು ಡಾಂಬರೀಕರಣ ಮಾಡುವುದರಿಂದ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

    ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಮಳೆಗಾಲ ಆರಂಭವಾಗುದರೊಳಗೆ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕೆಂದು ಸೂಚನೆ ನೀಡಿದರು.

    ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಹಲವಾರು ಜನಪರವಾದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಆರ್‌ಎಫ್ ಯೋಜನೆಯಡಿ ರಾಜ್ಯಸರ್ಕಾರ ನೀಡುವ ಅನುದಾನದ ಮೂಲಕ ಅಭಿವೃದ್ಧಿಪಡಿಸಿ ನಂತರ ಕೇಂದ್ರ ಸರ್ಕಾರದಿಂದ ಹಣವನ್ನು ವಾಪಸ್ ಪಡೆದುಕೊಳ್ಳಲಿದೆ. ಅದಕ್ಕಾಗಿ ಸಚಿವರಿಗೆ ಅಭಿನಂದಿಸುವುದಾಗಿ ತಿಳಿಸಿದರು.

    ಲೋಕೋಪಯೋಗಿ ಇಲಾಖೆ ವತಿಯಿಂದ ಜಾಗರದಲ್ಲಿ ೧೦ ಕೋಟಿ ರೂಗಳ ಕಾಮಗಾರಿ, ಗಂಗೆಗಿರಿ ಕೊಂಡದಖಾನ್ ವರೆಗೆ ರಸ್ತೆ ಅಭಿವೃದ್ಧಿಗೆ ೫ ಕೋಟಿ ರೂ, ಜಾಗರದಿಂದ ನೆತ್ತಿನ ಕೋಟೆಗೆ ೫ ಕೋಟಿ ರೂ ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ೧೪ ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದೆ ಎಂದರು.

    ಇದಲ್ಲದೆ ಪಿಆರ್‌ಡಿಯಲ್ಲಿ ಹಳ್ಳಿಗಳ ಒಳಭಾಗದ ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ ನೀಡಲಾಗಿದ್ದು, ನಗರದ ಮುಖ್ಯರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷ ಅನುದಾನದಲ್ಲಿ ೧೦ ಕೋಟಿ ರೂ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕೆ. ಮಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಗ್ರಾ.ಪಂ ಸದಸ್ಯ ದಿನೇಶ್, ಶಿವು, ಸುರೇಶ್, ಬಿಂಡಿಗ ದೇವಿರಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕುಲಶೇಖರ್, ಮುಖಂಡರಾದ ಕಲ್ಲೇಶ್, ಜಯರಾಂ, ಜಗದೀಶ್, ಅಧಿಕಾರಿ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    Foundation stone laid for re-asphalting work costing Rs. 6 crore

  • ಚಿಕ್ಕಹಳ್ಳ ಗ್ರಾಮದ ಕೆಲವರಿಂದ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ

    ಚಿಕ್ಕಹಳ್ಳ ಗ್ರಾಮದ ಕೆಲವರಿಂದ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ

    ಚಿಕ್ಕಮಗಳೂರು: ತಾಲೂಕಿನ ಸತ್ತಿಹಳ್ಳಿ ಗ್ರಾಮಪಂಚಾಯಿತಿ ಚಿಕ್ಕಹಳ್ಳ ಗ್ರಾಮಕ್ಕೆ ಸರಕಾರದಿಂದ ಮಂಜೂರಾದ ರಸ್ತೆಯಿದ್ದರೂ ಸಂಚರಿಸಲು ರಸ್ತೆಯೇ ಇಲ್ಲ ಎಂದು ಗ್ರಾಮದ ಕೆಲವರು ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥ ಪ್ರದೀಪ್ ದೂರಿದರು.

    ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ ಅವರು, ಚಿಕ್ಕಹಳ್ಳ ಗ್ರಾಮಸ್ಥರು ಸಂಚರಿಸಲು ಇರುವ ರಸ್ತೆ ಸುಸ್ಥಿತಿಯಲ್ಲಿದೆ. ಆದರೆ, ಸ್ವಲ್ಪ ದೂರವಾಗುತ್ತದೆ. ಈ ಕಾರಣದಿಂದ ಗ್ರಾಮಸ್ಥರಾದ ಕಾಳೇಗೌಡ, ದೀಕ್ಷಿತ್ ಮತ್ತಿತರರು ನಮ್ಮ ಒತ್ತುವರಿ ಜಮೀನಿನಲ್ಲಿ ಪರ್‍ಯಾಯ ರಸ್ತೆ ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಹಾಲಿ ಇರುವ ರಸ್ತೆಗೆ ೨೦೦೩-೦೪ ರಲ್ಲಿ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆಯಾಗಿ ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ರಸ್ತೆ ವಿಚಾರದಲ್ಲಿ ಹೈಕೋರ್ಟಿನಲ್ಲಿ ನಮ್ಮ ಪರವಾದ ಆದೇಶ ಬಂದಿದೆ. ಈಗ ಸಾರ್ವಜನಿಕ ರಸ್ತೆಯಿದ್ದರೂ ರಸ್ತೆಯೇ ಇಲ್ಲ ಎಂದು ಸುಳ್ಳು ಹೇಳಿ ಸಮಾಜ ಮತ್ತು ಜಿಲ್ಲಾಡಳಿತದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಅಲ್ಲದೆ ನಮ್ಮ ಜಮೀನಿನಲ್ಲೇ ಪರ್‍ಯಾಯ ರಸ್ತೆ ಬೇಕು ಎಂದು ನಮಗೆ ತೊಂದರೆ ನೀಡುವ ಉದ್ದೇಶ ಹೊಂದಿದ್ದಾರೆ ಎಂದರು.

    ರಸ್ತೆ ವಿಚಾರವಾಗಿ ಅಶಾಂತಿ ಮೂಡಿಸುವ ಮೂಲಕ ನಮ್ಮ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾರೆ. ಈ ವಿಚಾರಗಳನ್ನು ಪರಿಶೀಲಿಸಿ ಇವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳುವ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಜೇಂದ್ರ, ಅರವಿಂದ್, ಲಕ್ಷ್ಮಣಗೌಡ ಇದ್ದರು.

    Some people from Chikkahalla village provided false information to the district administration.

  • ಕೆನರಾ ಬ್ಯಾಂಕ್‌ನಿಂದ ಸಿಡಿಎ ಕಚೇರಿಗೆ ಕಾರು ಕೊಡುಗೆ

    ಕೆನರಾ ಬ್ಯಾಂಕ್‌ನಿಂದ ಸಿಡಿಎ ಕಚೇರಿಗೆ ಕಾರು ಕೊಡುಗೆ

    ಚಿಕ್ಕಮಗಳೂರು: ನಗರದ ಬೈಪಾಸ್ ಸಮೀಪದ ಕೆನರಾ ಬ್ಯಾಂಕ್ ಶಾಖೆಯ ಸಿ. ಎಸ್.ಆರ್. ನಿಧಿಯಿಂದ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಗೆ ೧೨ ಲಕ್ಷ ರೂ. ವೆಚ್ಚದ ಸುಜುಕಿ ಕಂಪನಿ ಯ ಕಾರನ್ನು ಸೋಮವಾರ ಸಂಜೆ ಕೊಡುಗೆ ನೀಡಿದರು.

    ಈ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಬ್ಯಾಂಕ್ ಈಗಾಗಲೇ ಸಿಎಸ್‌ಆರ್ ನಿಧಿಯಡಿ ಹಲವಾರು ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಿ ಕೆಲಸ ಮಾಡಿವೆ. ಜೊತೆಗೆ ನಗರಸಭೆ, ಮೆಡಿಕಲ್ ಕಾಲೇ ಜಿಗೂ ವಾಹನಗಳ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

    ಮುಂಬರುವ ದಿನಗಳಲ್ಲಿ ಕೆನರಾ ಬ್ಯಾಂಕ್ ಸಿಆರ್‌ಎಸ್ ನಿಧಿಯಡಿ ಹೆಚ್ಚು ಕಾರ್ಯನಿರ್ವಹಿಸಲಿ ಹಾ ಗೂ ಸಿಡಿಎ ಕಚೇರಿ ವ್ಯವಹಾರಗಳು ಈ ಶಾಖೆಯಿಂದ ಕೂಡಿರುವ ಹಿನ್ನೆಲೆ ಇನ್ನಷ್ಟು ಸಾಮಾಜಿಕ ಕಾರ್ಯ ದಲ್ಲಿ ತೊಡಗಲಿದೆ ಎಂದು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಆಯುಕ್ತೆ ನಾಗರತ್ನ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಕೊಟ್ಟಾರಿ, ಸಹಾಯಕ ವ್ಯವಸ್ಥಾಪಕ ಅನಿಲ್, ನಗರಸಭಾ ಸದಸ್ಯ ಕೀರ್ತಿಶೇಟ್, ಸಿಡಿಎ ಇಂಜಿನಿಯರ್ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

    Canara Bank donates car to CDA office