October 19, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ರಕ್ತದಾನ ಜೀವ ಉಳಿಸುವ ಮಹತ್ವಾದಾನ

ಚಿಕ್ಕಮಗಳೂರು: ರಕ್ತದಾನ ಜೀವ ಉಳಿಸುವ ಮಹತ್ವಾದಾನ. ರಕ್ತದಾನ ಮಾಡು ವವರ ಆರೋಗ್ಯ ಸುಧಾರಿಸುವ ಜೊತೆಗೆ ದೈಹಿಕ, ಮಾನಸಿಕ ಹಾಗೂ ಶಾರೀರಿಕವಾಗಿ ಆರೋಗ್ಯವಾಗಿರಲು ಸಹಕಾರಿ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಹೋಲಿಕ್ರಾಸ್ ಆಸ್ಪತ್ರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಸಹಯೋಗದಲ್ಲಿ ವಕೀಲರಿಗೆ ಹಮ್ಮಿಕೊಂಡಿದ್ಧ ರಕ್ತದಾನ ಶಿಬಿರ ಹಾಗೂ ಉಚಿ ತ ಕಣ್ಣಿನ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದಲ್ಲಿ ಹೆಚ್ಚು ಯುವವಕೀಲರು ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಬೇಕು. ಪ್ರಕೃತಿ ಮನುಷ್ಯನಿ ಗಾಗಿ ಸಾಕಷ್ಟು ಕೊಡುಗೆಯನ್ನು ನೀಡಿದೆ, ಆದರೆ ಮನುಷ್ಯ ಅಲ್ಪಮಾನವನಾಗದೇ, ಮತ್ತೊಬ್ಬರ ಜೀವ ಉಳಿ ಸುವ ರೀತಿಯಲ್ಲಿ ರಕ್ತದಾನದಲ್ಲಿ ತೊಡಗಿಸಿಕೊಂಡರೆ ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು.

ತುರ್ತು ಚಿಕಿತ್ಸೆ ಅಥವಾ ಅಪಘಾತ ವೇಳೆಯಲ್ಲಿ ರಕ್ತವು ಬಹಳಷ್ಟು ಅವಶ್ಯಕತೆಯಿದೆ. ಹೀಗಾಗಿ ವಕೀಲ ರು ಸೇರಿದಂತೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದಾಗಬೇಕು. ಓರ್ವನ ರಕ್ತದಾನದಿಂದ ಕನಿಷ್ಟ ಮೂರು ಮಂದಿ ಜೀವ ಉಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಹೋಲಿಕ್ರಾಸ್ ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ|| ಅನೀತ್‌ಕುಮಾರ್ ಮಾತನಾಡಿ ಮೊದಲು ಅನ್ನದಾನ ವು ಸರ್ವಶ್ರೇಷ್ಟವಾಗಿತ್ತು. ಇತ್ತೀಚೆಗೆ ಅನ್ನದಾನಕ್ಕೆ ಹೆಚ್ಚು ದಾನಿಗಳು ಹೆಚ್ಚು ತೊಡಗಿಸಿಕೊಂಡಿರುವ ಕಾರಣ, ರಕ್ತದಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಲ್ಲದೇ ದೇಹದಲ್ಲಿನ ಕೊಲೆಸ್ಟ್ರಾಲ್ ಹಾಗೂ ಮಧುಮೇಹ ಕಾಯಿ ಲೆಗಳನ್ನು ಪತ್ತೆಹಚ್ಚಬಹುದು ಎಂದು ತಿಳಿಸಿದರು.

ದೇಶದಲ್ಲಿ ರಕ್ತದ ಕೊರತೆಯಿಂದ ಅನೇಕರು ಜೀವ ಕಳೆದುಕೊಂಡು ಕುಟುಂಬವು ಬೀದಿಪಾಲಾಗುತ್ತಿದೆ. ರಕ್ತದಾನಕ್ಕಿಂತ ಹೆಚ್ಚು ಮನುಷ್ಯನ ಪ್ರಾಣ ಹಾರಿಹೋಗುತ್ತಿದೆ. ಹಾಗಾಗಿ ಯುವಜನತೆ ಎಚ್ಚೆತ್ತುಕೊಂಡು ಕನಿಷ್ಟ ಮೂರು ಹಾಗೂ ಮಹಿಳೆಯರು ಐದು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಅಮೂಲ್ಯ ಜೀವ ಉಳಿಸಲು ಸಾಧ್ಯ ಎಂದರು.

ಡೆಂಗ್ಯೂ, ಅಪಘಾತಗಳಂಥ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ಆ ನಿಟ್ಟಿನಲ್ಲಿ ಶಾಲಾ-ಕಾ ಲೇಜು, ಸಾರ್ವಜನಿಕರಲ್ಲಿ ರಕ್ತದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ಇಂದು ವಕೀ ಲರಿಗಾಗಿ ರಕ್ತದಾನ ಹಾಗೂ ಕಣ್ಣಿನ ತಪಾಸಣೆ ಆಯೋಜಿಸಿ ಪೂರಕವಾಗಿ ಆಸ್ಪತ್ರೆ ಕೆಲಸ ಮಾಡುತ್ತಿದೆ ಎಂ ದು ಹೇಳಿದರು.

ಶಿಬಿರದಲ್ಲಿ ವಕೀಲರಿಗೆ ಕಣ್ಣಿನ ಸಮಸ್ಯೆ ಕಂಡುಬಂದಲ್ಲಿ ಆಸ್ಪತ್ರೆ ವತಿಯಿಂದ ಶಸ್ತ್ರಚಿಕಿತ್ಸೆ, ವೈದ್ಯರ ಸಲಹೆ ಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದು, ಕೇವಲ ಲೆನ್ಸ್‌ಗಳಿಗೆ ಮಾತ್ರ ಆರ್ಥಿಕ ವೆಚ್ಚವನ್ನು ರೋಗಿ ಗಳು ಭರಿಸಬೇಕಾಗಿದ್ದು, ಒಟ್ಟಾರೆ ಸಾಮಾಜಿಕ ಕಾರ್ಯಕ್ರಮದಡಿ ಆಸ್ಪತ್ರೆ ತೊಡಗಿಸಿಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತ ಪ್ಪ, ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ಪ್ರಕಾಶ್, ವಕೀಲರ ಸಂಘದ ಖಜಾಂಚಿ ಡಿ.ಬಿ.ದೀಪಕ್, ವಕೀಲರುಗಳಾದ ರಮೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

The life-saving importance of blood donation

Related posts

ವಿದ್ಯಾರ್ಥಿಗಳು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು

Team Suddigara

ಇಂದು ವಿಧಾನ ಪರಿಷತ್ ಚುನಾವಣೆ ಮತ ಮರುಎಣಿಕೆ

Team Suddigara

ಜಾಗರ ಹೋಬಳಿ ಅಭಿವೃದ್ಧಿ ಕಾಮಗಾರಿಗಳಿಗೆ 21 ಕೋಟಿ ರೂ.ಗಳ ಅನುದಾನ

Team Suddigara

Leave a Comment

[t4b-ticker] [t4b-ticker]