May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಕಳಸದಲ್ಲಿ ಸಡಗರ ತಂದ ಗಿರಿಜಾಕಲ್ಯಾಣ ಉತ್ಸವ

ಕಳಸ: ಪಟ್ಟಣದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಜನಸಂದಣಿಯ ದೃಶ್ಯ. ಪಟ್ಟಣದ ಕಳಸೇಶ್ವರ ದೇವಸ್ಥಾನದಲ್ಲಿ ಕಳಸೇಶ್ವರ ಮತ್ತು ಗಿರಿಜೆಯು ಒಟ್ಟಿಗೇ ಇರುವ ದೃಶ್ಯ ಕಣ್ತುಂಬಿಕೊಳ್ಳಲು ಭಕ್ತರು ಉತ್ಸಾಹದಿಂದ ನೆರೆದಿದ್ದರು.

ಕಳೆದ ವಾರ ಆರಂಭಗೊಡಿದ್ದ ಗಿರಿಜಾ ಕಲ್ಯಾಣದ ವಿಧಿಗಳು ಸಂಪ್ರದಾಯಬದ್ಧವಾಗಿ ನೆರವೇರಿದ್ದವು. ಭಕ್ತರು ಎಲ್ಲ ವಿಧಿಗಳಲ್ಲೂ ಗಂಡು–ಹೆಣ್ಣಿನ ಕಡೆಯವರಂತೆ ಪಾಲ್ಗೊಂಡು ದೇವರ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಾರವಿಡೀ ಗಿರಿಜಾಂಬಾ ದೇವಸ್ಥಾನ ಮತ್ತು ಕಳಸೇಶ್ವರ ದೇವಸ್ಥಾನದ ಪರಿಸರದಲ್ಲಿ ಹಬ್ಬದ ಸಡಗರ, ಭಕ್ತರ ಲವಲವಿಕೆ ಇತ್ತು. ಶನಿವಾರ ಮಧ್ಯರಾತ್ರಿಯ ನಂತರ ಗಿರಿಜೆಯನ್ನು ಕಳಸೇಶ್ವರನ ಸನ್ನಿಧಿಗೆ ಕರೆತಂದ ನಂತರ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಕಲಶೇಶ್ವರ ಮತ್ತು ಗಿರಿಜೆಯ ಕಲ್ಯಾಣ ನಡೆಯಿತು.

ದೇವರ ವಿವಾಹವಾದ ನಂತರ ಒಂದು ದಿನ ಮಾತ್ರ ಕಳಸೇಶ್ವರ ಗಿರಿಜೆಯನ್ನು ಒಟ್ಟಿಗೆ ಕೂರಿಸುವ ಸಂಪ್ರದಾಯ ಇದೆ. ಕಾಶಿಯಲ್ಲಿ 12 ವರ್ಷಕ್ಕೊಮ್ಮೆ ಕಲ್ಯಾಣ ನಡೆದರೆ ಕಳಸದಲ್ಲಿ ಮಾತ್ರ ಪ್ರತಿ ವರ್ಷವೂ ಈಶ್ವರ ಮತ್ತು ಪಾರ್ವತಿ ನಡುವೆ ಕಲ್ಯಾಣ ನೆರವೇರುತ್ತದೆ. ಕಳಸವು ಇದೇ ಕಾರಣಕ್ಕೆ ದಕ್ಷಿಣ ಕಾಶಿ ಎಂದೇ ಹೆಸರಾಗಿದೆ.

ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಪ್ರತಿ ವರ್ಷವೂ ಕಳಸಕ್ಕೆ ಧಾವಿಸುತ್ತಾರೆ. ಭಾನುವಾರ ಕಳಸೇಶ್ವರ ದೇವಸ್ಥಾನದಲ್ಲಿ ಭಕ್ತರು ದೇವರ ಜೋಡಿಗೆ ನಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೋರಿಕೆ ಸಲ್ಲಿಸಿದರು. ಆನಂತರ ವಿವಾಹದ ಸಿಹಿಯೂಟವನ್ನು 3 ಸಾವಿರಕ್ಕೂ ಹೆಚ್ಚು ಜನರು ಸವಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕಲ್ಯಾಣದ ವಿಧಿಗಳನ್ನು ಮತ್ತು ವಿವಾಹ ಮಹೋತ್ಸವದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು.

Girijakalyana Utsava

Related posts

ಕ್ರೀಡಾಕೂಟದಿಂದ ಸಮಾಜದಲ್ಲಿ ಸೌಹಾರ್ದತೆ ವೃದ್ಧಿ

Team Suddigara

ಸಿಎಂ-ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Team Suddigara

13 ಫಲಾನುಭವಿಗಳಿಗೆ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಉಚಿತ ಬೋರ್‌ವೆಲ್

Team Suddigara

Leave a Comment