ಚಿಕ್ಕಮಗಳೂರು: ಸ್ವಾತಂತ್ರö್ಯ ಪೂರ್ವದ ಮುನ್ನ ಸ್ಥಾಪಿತವಾದ ರಾಷ್ಟಿçÃಯ ಸ್ವಯಂ ಸಂಘವು ಎರಡು ದಶಕಗಳ ಮೊದಲೇ ಉಗಮವಾಗಿದ್ದರೆ ಭಾರತ ರಾಷ್ಟçವು ವಿಭಜನೆಗೊಳ್ಳದೇ ಅಖಂಡ ರಾಷ್ಟç ವಾಗಿ ಬೆಳಗುತ್ತಿತ್ತು ಎಂದು ಆರ್ಎಸ್ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಮನೋಹರ್ ಹೇಳಿದರು.
ನಗರದ ಗಾಯತ್ರಿ ಸಮುದಾಯ ಭವನದಲ್ಲಿ ರಾಷ್ಟಿçÃಯ ಸ್ವಯಂ ಸಂಘವು ಏರ್ಪಡಿಸಿದ್ಧ ಸಂಕ್ರಾAತಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ವಿಶ್ವದ ಮುಂಚೂಣಿ ರಾಷ್ಟçವಾದ ಭಾರತದ ಮೇಲೆ ಮೊಘಲರು ಸೇರಿದಂತೆ ಅನೇಕ ಮತಾಂಧ ಶಕ್ತಿಗ ಳು ಯುದ್ಧೋಪಾದಿಯಲ್ಲಿ ಆಕ್ರಮಣ ನಡೆಸಿದರೂ ಸೋತಿರಲಿಲ್ಲ. ಆದರೆ ಬ್ರಿಟಿಷರು ದೇಶದ ಅಧ್ಯಯನ ನಡೆಸಿ ಮೊದಲು ಗುರುಕುಲ ಪದ್ಧತಿ ನಾಶಕ್ಕೆ ಮುಂದಾಗಿದ ಕಾರಣ ಭಾರತೀಯ ಸಂಸ್ಕೃತಿಗೆ ಕೊಡಲಿಪೆಟ್ಟು ಬಿತ್ತು ಎಂದರು.
ಗುರುಕುಲ ಪದ್ಧತಿ ನಾಶಗೊಳಿಸಿ, ಮಕ್ಕಳಿಗೆ ಕಾನ್ವೆಂಟ್ ಪದ್ಧತಿ ಜಾರಿಗೆ ತಂದರು. ಕಾನ್ವೆಂಟ್ ಎಂದರೆ ಇಂಗ್ಲೇಡ್ ದೇಶದಲ್ಲಿ ಅಪ್ಪ, ಅಮ್ಮವಿಲ್ಲದ ಶಾಲೆಗಳು ಎಂದರ್ಥ. ಅಲ್ಲಿಂದ ಭಾರತ ಅಧಪಥನಕ್ಕೆ ಮುಂದಾ ಗಿದ್ದನ್ನು ಕಂಡ ಸಂಘಟನೆ, ದೇಶಕ್ಕೆ ಔಷಧಿ ನೀಡುವ ಸಲುವಾಗಿ ರಾಷ್ಟಾçದ್ಯಂತ ಶಾಖೆಗಳನ್ನು ಸ್ಥಾಪಿಸಿ ಹಿಂ ದೂ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ ಎಂದರು.
ಅಮೇರಿಕಾ ಸೇರಿದಂತೆ ಇಡೀ ವಿಶ್ವಾದ್ಯಂತ ಸುಮಾರು ೫೨ ದೇಶಗಳಲ್ಲಿ ಆರ್ಎಸ್ಎಸ್ ಸಂಘಟನೆ ಕಾರ್ಯಪ್ರವೃತ್ತವಾಗಿದೆ. ಇದನ್ನು ಗಮನಿಸಿದರೆ ಪ್ರಪಂಚದ ದೊಡ್ಡಣ್ಣ ಅಮೇರಿಕಾವಲ್ಲ, ಭಾರತವೆಂದು ಪರಿ ಗಣಿಸಬೇಕು. ಹಾಗಾಗಿ ಹಿಂದೂ ಸಮಾಜವು ಪ್ರತಿ ಮನೆಗಳಲ್ಲಿ ರಾಷ್ಟçಭಕ್ತಿ ಮೂಡಿಸಿ, ಸಂಘಟನೆಗೆ ಕೈಜೋ ಡಿಸಬೇಕಿದೆ ಎಂದು ತಿಳಿಸಿದರು.
೧೯೨೫ರಲ್ಲಿ ಜನನಗೊಂಡ ಆರ್ಎಸ್ಎಸ್ ಸಂಘಟನೆ, ಕೇವಲ ಎರಡು ದಶಕಗಳ ಹಿಂದೆ ಜನಿಸಿದ್ದರೆ ಅಖಂಡ ಭಾರತದಲ್ಲಿ ಪಾಕಿಸ್ತಾನ ದೇಶ ಪ್ರತ್ಯೇಕವಾಗುತ್ತಿರಲಿಲ್ಲ. ಸ್ವಾತಂತ್ರö್ಯದ ಬಳಿಕ ಅಂದಿನ ಆಡಳಿತವು ಸಂಘಟನೆಯನ್ನು ಬೇರುಸಮೇತ ಕಿತ್ತೊಗೆಯಲು ಅನೇಕ ಸಂಚು ನಡೆಸಿ ವಿಫಲಗೊಂಡವು. ಆದರೀಗ ಸದೃ ಢವಾಗಿ ನಿಂತಿರುವ ಕಾರಣ ಜಗತ್ತಿನ ಅತಿದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ ಎಂದರು.
ಹಿAದುತ್ವ ಬೇರಿನಿಂದ ಗಟ್ಟಿಗೊಳಿಸುವ ಹಾಗೂ ಒಗ್ಗೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸುಮಾರು ೭೩ ಸಾವಿರ ಶಾಖೆಗಳನ್ನು ಸಂಘಟನೆ ಹೊಂದಿದೆ. ಈ ಬಲವನ್ನು ಗಮನಿಸಿದ ಪ್ರಸ್ತುತ ಇಂಗ್ಲೇಡ್ ದೇಶ, ಸಂಘ ಟನೆ ಎಂದರೆ ಆರ್ಎಸ್ಎಸ್ನಂತೆ ಇರಬೇಕೆಂದಿದ್ದರು ಎಂದ ಅವರು ತಪಸ್ಸಿನಿಂದ ಸಂಘಟನೆ ಬೆಳೆದು ಕತ್ತ ಲೆಯಿಂದ ಬೆಳಕು ಚೆಲ್ಲುತ್ತಿದೆ ಎಂದು ಹೇಳಿದರು.
ಸದ್ಯದಲ್ಲೇ ಆರ್ಎಸ್ಎಸ್ ಸಂಘಟನೆ ಶತದಿನೋತ್ಸವಕ್ಕೆ ಕಾಲಿಡುತ್ತಿದೆ. ಸಂಘಟನಾ ಬಲವು ಮೇ ಲ್ನೋಟಕ್ಕೆ ಬಂಡೆಯAತೆ ಕಾಣುತ್ತಿದೆ. ಕೆಳಹೊಕ್ಕಿ ವೀಕ್ಷಿಸಿದರೆ ಬೃಹದಾಕಾರವಾಗಿ ಬೆಳೆದಿದೆ. ಪ್ರಚಾರ ಬಯ ಸದೇ ರಾಷ್ಟç ಚಿಂತನೆಗೆ ಬೇರೂರಿರುವ ಏಕೈಕ ಸಂಘಟನೆ ಆರ್ಎಸ್ಎಸ್ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಮಂ ಡಲಗಳನ್ನು ರಚಿಸಿಕೊಂಡು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇಂದಿನ ಯುವಸಮೂಹಗಳಿಗೆ ಪಾಲಕರು ದೇಶದ ಆಚಾರ-ವಿಚಾರಗಳನ್ನು ಮನದಟ್ಟಾಗಿ ತುಂಬಬೇ ಕು. ರಾಷ್ಟç ಮೊದಲು ಎಂಬ ವಿವೇಕವಾಣಿಯನ್ನು ಅನುಸರಿಸಬೇಕು. ಸಂಘಟನೆ ಬೆಳೆದ ಹಾದಿಯನ್ನು ಪರಿ ಚಯಿಸಿ ಸ್ವಯಂ ಪ್ರೇರಿತರಾಗಿ ಮಕ್ಕಳು ಸೇರಿದಂತೆ ಗಂಡನನ್ನು ಸೇರ್ಪಡೆಗೊಳಿಸಿದರೆ ಭವ್ಯಭಾರತ ನಿರ್ಮಾ ಣವಾಗುಲ್ಲಿ ಸಂದೇಹವಿಲ್ಲ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಸಂಘಟನೆ ಕಾರ್ಯಕರ್ತರಿಂದ ಶಾರೀರಿಕ ಮತ್ತು ದಂಡ ವ್ಯಾಯಾಮ ನಡೆ ಸಲಾಯಿತು. ಬಳಿಕ ಶ್ಲೋಕ ಹಾಗೂ ಹಿಂದುತ್ವದ ಗೀತೆ ಹಾಡಲಾಯಿತು. ಈ ಸಂದರ್ಭದಲ್ಲಿ ಆರ್ಎಸ್ಎಸ್ ಜಿಲ್ಲಾ ಸಂಚಾಲಕ ಗನಶ್ಯಾಮ್ ಆಳ್ವ, ನಗರ ಸಂಚಾಲಕ ರಾಜರಾಮ್ ಕೋಟೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.
The RSS organization is active in about 52 countries around the world.
