October 26, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಹುಕ್ಕುಂದ ಗ್ರಾಮದಲ್ಲಿ 17 ಲಕ್ಷ ರೂ ವೆಚ್ಚದ ನೂತನ ಕಟ್ಟಡ ಉದ್ಘಾಟನೆ

ಚಿಕ್ಕಮಗಳೂರು:  ಸಂಬಂಧಗಳು ಉಳಿದು ಬೆಳೆಯಬೇಕೆಂಬ ದೃಷ್ಟಿಯಿಂದ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯವನ್ನು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಿಂದ ಕುಟುಂಬದಲ್ಲಿ ಸಾಮರಸ್ಯ, ಪ್ರೀತಿ, ವಿಶ್ವಾಸ ಉಳಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಅಭಿಪ್ರಾಯಿಸಿದರು.

ಅವರು ಇಂದು ಇಂದಾವರ ಗ್ರಾ.ಪಂ ವ್ಯಾಪ್ತಿಯ ಹುಕ್ಕುಂದ ಗ್ರಾಮದಲ್ಲಿ ಎನ್‌ಆರ್‌ಇಜಿಎ ಯೋಜನೆಯಡಿಯಲ್ಲಿ ೧೭ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬದಲ್ಲಿ ಹೆಣ್ಣು ಆರ್ಥಿಕ ಸದೃಢರಾದರೆ ಆ ಮನೆ ಉತ್ತಮವಾಗಿ ನಡೆಯುತ್ತದೆ. ಜೊತೆಗೆ ಲೋಕ ಕಲ್ಯಾಣ ಕಾರ್ಯಗಳು ಹೆಣ್ಣುಮಕ್ಕಳಿಂದ ಸಾಧ್ಯ ಎಂದ ಅವರು, ಹೊರಗೆ ದುಡಿಯಲು ಹೋದ ಪುರುಷ ಮನೆಗೆ ಊಟ ತಿಂಡಿಗೆ ಮರಳುವಂತೆ ನಡೆಯನ್ನು ಹೆಣ್ಣುಮಕ್ಕಳು ರೂಢಿಸಿಕೊಳ್ಳುವ ಅಗತ್ಯ ಇದೆ ಎಂದು ಕಿವಿಮಾತು ಹೇಳಿದರು.

ಇಂದು ಹಣ, ಆಸ್ತಿ, ಅಂತಸ್ತಿನಿಂದಾಗಿ ಸಂಬಂಧಗಳು ಉಳಿಯುತ್ತಿಲ್ಲ. ದಾಯಾದಿ ಕಲಹಗಳಾಗಿ ಮಾರ್ಪಟ್ಟು ನೆಮ್ಮದಿ ಇಲ್ಲದಂತಾಗಿದೆ. ಈ ಮಧ್ಯೆ ಹಿರಿಯರು ಆರೋಗ್ಯಕರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಹೇಳಿದರು.

ಆರೋಗ್ಯಕರವಾದ ಸಮಾಜ ಇದ್ದಾಗ ಮಾತ್ರ ನೆಮ್ಮದಿಯ ಬದುಕು ಕಾಣಲು ಸಾಧ್ಯ. ಕೃಷಿ ಚಟುವಟಿಕೆ ಲಾಭದಾಯಕ ಎಂಬುದನ್ನು ಯುವ ಪೀಳಿಗೆಗೆ ಪರಿಚಯಿಸದಿದ್ದರೆ ಮುಂದೆ ಆಹಾರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಸಂಸ್ಕಾರದ ಜೀವನ ಕಲಿಸದಿದ್ದರೆ ಎಷ್ಟು ದುಡಿಮೆ ಮಾಡಿದರೂ ಸಾಕಾಗುವುದಿಲ್ಲ. ಆಸೆ ಎಂಬ ಹುಚ್ಚು ಕುದುರೆಗೆ ದಾಸರಾದರೆ ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ ಎಂದು ಹೇಳಿದರು.

ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ, ಸಂಸ್ಕಾರದಲ್ಲಿ ಸಂಸ್ಕೃತಿ, ಧಾರ್ಮಿಕತೆಯ ನಂಬಿಕೆಯಲ್ಲಿ ಪ್ರಪಂಚದಲ್ಲೇ ಭಾರತ ಮುಂಚೂಣಿಯಲ್ಲಿದೆ. ವಿವಿಧತೆಯಲ್ಲಿ ಏಕತೆ-ಐಕ್ಯತೆ ಬಹಳ ಮುಖ್ಯವಾಗಿದ್ದು, ನಾಗರಿಕರು ಸಹೋದರತೆಯಿಂದ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಬದುಕಬೇಕೆಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಹುಕ್ಕುಂದ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ೧೦ ಲಕ್ಷ ರೂ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಇಂದಾವರ ಗ್ರಾ.ಪಂ ಅಧ್ಯಕ್ಷ ಸುಭಾಷ್, ಇಓ ವಿಜಯ್‌ಕುಮಾರ್, ಮಂಜೇಗೌಡ, ಜಯರಾಂ, ಜ್ಯೋತಿ, ಕೆಂಚಯ್ಯ, ಐ.ಡಿ. ಚಂದ್ರಶೇಖರ್, ದ್ರಾಕ್ಷಾಯಣಿ, ನೇತ್ರಾವತಿ, ಆಶಾ, ಸುರೇಶ್, ಸಂಪತ್ ರಾಜ್, ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಸುರಯ್ಯಬಾನು ಸ್ವಾಗತಿಸಿದರು.

New building costing Rs 17 lakh inaugurated in Hukkunda village

Related posts

ಲಕ್ಯಾ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಂ.ಕೃಷ್ಣೇಗೌಡ ಆಯ್ಕೆ

Team Suddigara

ಸದೃಢ ಆರೋಗ್ಯಕ್ಕೆ ಕ್ರೀಡಾಕೂಟಗಳು ಸಹಕಾರಿ

Team Suddigara

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು ವಿಫಲ

Team Suddigara

Leave a Comment

[t4b-ticker] [t4b-ticker]