May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಮನ್ ಕೀ ಬಾತ್ ವೀಕ್ಷಿಸಿ ಮುಖಂಡರು

ಚಿಕ್ಕಮಗಳೂರು:  ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ನಾಗರಾಜ್ ಸ್ವಗೃಹದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ೧೨೬ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಆಲಿಸಿದರು.

ಮನ್ ಕೀ ಭಾತ್‌ನಲ್ಲಿ ಪ್ರಧಾನಿಗಳು ನಾಡಿನ ಶ್ರೇಷ್ಟ ಸಾಹಿತಿ ಎಸ್.ಎಲ್.ಭೈರಪ್ಪನವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿ ಕನ್ನಡದಲ್ಲಿ ಪ್ರಖ್ಯಾತ ಕಾದಂಬರಿ, ಪುಸ್ತಕಗಳನ್ನು ರಚಿಸಿದ್ದಾರೆ. ಯುವಕರಿಗೆ ಸ್ಪೂರ್ತಿ ನೀಡುವಂಥ ಪುಸ್ತಕಗಳನ್ನು ಯುವಸಮೂಹ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜೀವನದ ದಾರಿ ರೂ ಪಿಸಿಕೊಳ್ಳಬೇಕು ಎಂದರು.

ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಸ್ವದೇಶಿ ವಸ್ತುಗಳ ತಯಾರಿಕೆಯಲ್ಲಿ ಹಲವಾರು ಮುಂದಾಗಿದ್ದಾರೆ. ಕೆಲ ವರು ಸ್ವದೇಶಿ ಉತ್ಪನ್ನಗಳ ಹೆಚ್ಚು ಪಸರಿಸಲು ಸ್ವಂತ ಕಂಪನಿಗಳನ್ನು ನಿರ್ಮಿಸಿಕೊಂಡು ನೂರಾರು ಮಹಿಳೆ ಯರಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವುದು ನಮ್ಮ ಮುಂದಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸ್ಥಾಪನೆಗೊಂಡು ಈ ಸಾಲಿಗೆ ಶತಬ್ದಿ ಪೂರೈಸುತ್ತಿದೆ. ಅಂದು ಕೇಶವಜೀ ಯವರು ಬ್ರಿಟಿಷರ ಕಪಿಮುಷ್ಠಿಯಿಂದ ಸಮಸ್ತ ಜನಾಂಗವನ್ನು ಭಾರತೀಯರೆನ್ನಲು ಸಂಘ ಸ್ಥಾಪಿಸಿ ಮುಂ ಂಚೂಣಿಗೆ ತಂದವರು. ಅನೇಕ ಏರುಪೇರು ನಡುವೆ ಬೃಹದಾಕಾರವಾಗಿ ಬೆಳೆದು ಶತಬ್ದಿ ಆಚರಿಸುತ್ತಿರುವು ದು ಹೆಮ್ಮೆಯ ಸಂಗತಿ ಎಂದರು.

ರಾಷ್ಟ್ರ ಆತ್ಮನಿರ್ಬಾರವಾಗಲು ದೇಶದ ಜನತೆಗೆ ಒಟ್ಟಾಗಿ ಸ್ವದೇಶಿ ಉತ್ಪನ್ನಗಳ ಬಳಸಲು ಮುಂದಾಗಬೇ ಕು, ಆ ನಿಟ್ಟಿನಲ್ಲಿ ದೈನಂದಿನ ದಿನಚರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಬೇಕು. ಇತ್ತೀಚೆಗೆ ವಿದೇಶಿಯಗರಿಗೂ ಭಾರತೀಯ ವಸ್ತ್ರಗಳು ಗಮನ ಸೆಳೆಯುತ್ತಿರುವುದು ದೇಶಕ್ಕೆ ಖುಷಿಯ ವಿಚಾ ರವಾಗಿದೆ ಎಂದು ಹೇಳಿದರು.

ಮುಂಬರುವ ದೀಪಾವಳಿ ಹಬ್ಬವು ಉತ್ಸವ ಸಂಕೇತವಾಗಿದೆ. ಶ್ರೀ ದುರ್ಗಾದೇವಿಯ ಆಚರಣೆಗಳು ಇ ಡೀ ರಾಷ್ಟ್ರಾದ್ಯಂತ ದೊಡ್ಡ ಹಬ್ಬವಾಗಿದೆ ಹಾಗೂ ಗಾಂಧಿ ಜಯಂತಿಯಂದು ಸರ್ವರು ಖಾದಿ ವಸ್ತ್ರ, ಹ್ಯಾಂಡಿ ಕ್ರಾಫ್ ವಸ್ತಗಳನ್ನು ಅಂದು ಖರೀದಿಸುವ ಮೂಲಕ ಸ್ವದೇಶಿಗಳ ವಸ್ತುಗಳ ಖರೀದಿಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತರಾಮಭರಣ್ಯ , ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ನಾಗರಾಜ್, ಮುಖಂಡರುಗಳಾದ ಹೆಚ್.ಕೆ.ಕೇಶವ ಮೂರ್ತಿ, ಪ್ರದೀಪ್, ನವೀನ್, ಬ್ಯಾಟರಿ ಮಂಜುನಾಥ್, ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು.

Leaders watch Mann Ki Baat at BJP worker’s house

 

Related posts

ಭಾರತ ಆಧ್ಯಾತ್ಮಿಕ ಸಂಪದ್ಭರಿತವಾಗಿದ್ದು, ಜಗತ್ತು ಗೌರವದಿಂದ ನೋಡುತ್ತಿದೆ

Team Suddigara

ಕ್ರೀಡಾ ಚಟುವಟಿಕೆ ದೈಹಿಕ-ಮಾನಸಿಕ ಆರೋಗ್ಯ ವೃದ್ದಿ

Team Suddigara

ಡಾ.ಬಾಬು ಜಗಜೀವನ ರಾಮ್ ಶೋಷಿತರ ಹಕ್ಕಿಗಾಗಿ ಹೋರಾಡಿದವರು

Team Suddigara

Leave a Comment