May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ

ಚಿಕ್ಕಮಗಳೂರು:  ಭಾರತೀಯರ ಜನಮಾನಸದಲ್ಲಿ ಅಚ್ಚಳಿಯದ ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ. ಬಂಕಿಮ ಚಂದ್ರ ಚಟರ್ಜಿಯವರ ಸ್ಫೂರ್ತಿ, ರವೀಂದ್ರನಾಥ ಟಾಗೋ ರರ ಗಾಯನ ಮಹತ್ವದ್ದಾಗಿದೆ ಎಂದು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ‘ವಂದೇ ಮಾತರಂ’ ಗೀತೆ ೧೫೦ನೇ ವರ್ಷದ ಸಂಭ್ರ ಮಾಚರಣೆ ಅಂಗವಾಗಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರು ರಾಷ್ಟ್ರ ದ್ವಜಾಹಿಡಿದು ವಂದೇ ಮಾತರಂ ಗೀತೆ ಗಾಯನ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ದೇಶವು ಹಲವಾರು ಇತಿಹಾಸಗಳ ಸಂಭ್ರಮ ಆಚರಿಸುತ್ತಿವೆ. ಆರ್‌ಎಸ್‌ಎಸ್ ಶತಬ್ದಿ, ವಂದೇ ಮಾತರಂ ಗೀತೆಗೆ ೧೫೦ ರ ಸಂವತ್ಸರ ಹಾಗೂ ಸರ್ದಾರ್ ವಲ್ಲಬಾಯ್ ಪಟೇಲ್ ಜಯಂತಿಗಳು ಪ್ರಸ್ತುತ ಕಾಲಮಾನದಲ್ಲಿ ನಾವೆಲ್ಲರೂ ಆಚರಿಸುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದರು.

ಕೇಂದ್ರದಲ್ಲಿ ಭಾಜಪ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಮೂಲಬೇಡಿಕೆಗಳನ್ನು ಈಡೇರಿಸಿ ಪ್ರಶಂಸೆ ಗೆ ಪಾತ್ರವಾಗಿದೆ. ಅಲ್ಲದೇ ಸಮಸ್ತ ಹಿಂದೂಬಾಂಧವರ ಬಹುದಿನಗಳ ಕನಸಾದ ಶ್ರೀರಾಮ ಮಂದಿರವನ್ನು ನಿರ್ಮಾಣಗೊಳಿಸಿದೆ. ಜೊತೆಗೆ ಸ್ವದೇಶಿ ಉತ್ಪನ್ನ, ಬಳಕೆ ಹಾಗೂ ಖರೀದಿಯಲ್ಲಿ ಪ್ರತಿಯೊಬ್ಬರು ತೊಡಗಿಸಿ ಕೊಂಡು ಆತ್ಮನಿರ್ಭಾರವೆಂಬ ಕರೆಗೆ ಬದ್ಧರಾಗಬೇಕು ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿ ವಂದೇ ಗೀತೆ ಆಲನೆಯಿಂದ ಒಂದು ಕ್ಷಣ ಶರೀರವು ದೇಶಭಕ್ತಿಯತ್ತ ಒಲುಮೆ ಹೊಂದಲಿದೆ. ಅಂತ ಶಕ್ತಿ ವಂದೇ ಮಾತರಂ ಗೀತೆಯ ಸಾರಾಂಶವು ಜನರನ್ನು ಸೆಳೆಯುತ್ತವೆ ಎಂದು ಹೇಳಿದರು

ಇಡೀ ವಿಶ್ವದಲ್ಲಿ ವಂದೇ ಮಾತರಂ ಗೀತೆ ಎಲ್ಲರೂ ಒಗ್ಗೂಡಿಸುವ ಶಕ್ತಿಯಿದೆ. ಆದರೆ ಸ್ವಾತಂತ್ರ್ಯ ಪೂ ರ್ವದ ನಂತರ ಕಾಂಗ್ರೆಸ್ ಅಧಿಕಾರ ರಾಜ್ಯಗಳಲ್ಲಿ ವಂದೇ ಮಾತರಂ ಗೀತೆಯನ್ನು ನಿಷೇಧಕ್ಕೆ ಮುಂದಾಗಿ ದ್ದವು. ಈಚೆಯ ೨೦೧೭ರಲ್ಲಿ ಓವೈಸಿ ಕೂಡಾ ಆಂಧ್ರ ಪ್ರದೇಶದಲ್ಲಿ ಗೀತೆ ನಿಷೇಧಕ್ಕೆ ಪಣ ತೊಟ್ಟಿದ್ದು ಎಲ್ಲಾ ಏರುಪೇರುಗಳ ನಡುವೆ ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ವಂದೇ ಮಾತರಂ ಗೀತೆಯನ್ನು ಹೆಚ್ಚಿನ ಒತ್ತು ನೀಡಿ ದೇ ಶದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಗೀತೆ ಕಡ್ಡಾಯಗೊಳಿಸಿ, ರಾಷ್ಟ್ರಪ್ರೇಮ ಸಂಕೇತವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡಿತು ಎಂದು ತಿಳಿಸಿದರು.

ಇದೇ ವೇಳೆ ಶಿಕ್ಷಕಿ ಅಕ್ಷತ ಹೆಗ್ಡೆ ಅವರಿಂದ ವಂದೇ ಮಾತರಂ ಗೀತಗಾಯನ ನಡೆಯಿತು. ಈ ಸಂದ ರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್‌ಅರಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತ ಅನಿಲ್ ಕು ಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗ ವೆಂಕಟೇಶ್, ಎಸ್ಟಿ ಮೋರ್ಚಾ ಅಧ್ಯಕ್ಷ ನಂದೀಶ್ ಮದ ಕರಿ, ನಗರಸಭೆ ಸದಸ್ಯರಾದ ರೂಪ, ಸುಜಾತ, ಮುಖಂಡರುಗಳಾದ ಬಸವರಾಜ್, ಸಂತೋಷ್ ಕೋಟ್ಯಾ ನ್, ವೀಣಾಶೆಟ್ಟಿ, ಹೆಚ್.ಕೆ.ಕೇಶವಮೂರ್ತಿ, ಸಚಿನ್‌ಗೌಡ ಮತ್ತಿತರರು ಹಾಜರಿದ್ದರು.

The journey of the Vande Mataram song is unforgettable.

Related posts

ಡಾ.ಬಾಬು ಜಗಜೀವನ ರಾಮ್ ಶೋಷಿತರ ಹಕ್ಕಿಗಾಗಿ ಹೋರಾಡಿದವರು

Team Suddigara

ಸಂಡೂರಿನಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು

Team Suddigara

ನಾಡಪ್ರಭು ಕೆಂಪೇಗೌಡರು ಮುಂದಾಲೋಚನೆಯ ಅಪ್ರತಿಮ ವ್ಯಕ್ತಿ

Team Suddigara

Leave a Comment