May 20, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಶ್ರೀ ಅಯ್ಯಪ್ಪನ ಆರಾದನೆಗೆ ಜಾತಿ-ಧರ್ಮವಿಲ್ಲ

ಚಿಕ್ಕಮಗಳೂರು: ಶ್ರೀ ಅಯ್ಯಪ್ಪಸ್ವಾಮಿ ಸರ್ವಧರ್ಮಿಯರ ಪ್ರತೀಕ. ಸ್ವಾಮಿಯ ಆರಾಧನೆಗೆ ಜಾತಿ, ಧರ್ಮ ಅಡ್ಡಬರುವುದಿಲ್ಲ. ಮಾಲೆ ಹಾಕಿದವರೆಲ್ಲಾ ಅಯ್ಯಪ್ಪನ ಭಕ್ತರೇ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸುವ ೫೨ ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಶಬರಿಮಲೆಗೆ ಮಾಲೆ ಹಾಕಿಕೊಂಡು ಹೋಗಿ ಸ್ವಾಮಿ ದರ್ಶನ ಪಡೆಯವುದು ವಿಶೇಷ. ೪೮ ದಿನ ಕಠಿಣ ವ್ರತ ಮಾಡುವವರಿಗೆ ಮೊದಲ ಪಾದ ಎಂದೂ, ಹೊಸದಾಗಿ ಮಾಲೆ ಹಾಕಿದವರನ್ನು ಕನ್ನಿ ಸ್ವಾಮಿಗಳು ಎಂದು ಕರೆಯುವ ಪದ್ದತಿ ಇದೆ. ನಾನೂ ಕೂಡ ೧೯೮೨ ನೇ ಸಾಲಿನಿಂದಲೂ ಅಯ್ಯಪ್ಪಸ್ವಾಮಿ ಭಕ್ತನಾಗಿದ್ದೇನೆ.

ಪೂಜಾಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಗಟ್ಟಿಯಾಗಿರುವ ದೇಶ ನಮ್ಮದು. ಧರ್ಮದ ನೆಲೆಗಟ್ಟಿನಲ್ಲೂ ನಿಂತಿದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಒಬ್ಬೊಬ್ಬರು ಒಂದೊಂದು ದೇವರನ್ನು ಆರಾಧಿಸುತ್ತಾರೆ. ದೇಶದ ರೈತರಿಗೆ ಉತ್ತಮ ಬೆಳೆ, ಬೆಲೆ ನೀಡಲಿ ಎಂದು ಅಯ್ಯಪ್ಪನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಪ್ರತಿವರ್ಷ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಶ್ರೀ ಅಯ್ಯಪ್ಪಸ್ವಾಮಿಯನ್ನು ಆರಾಧಿಸಿಕೊಂಡು ಬಂದಿರುವುದನ್ನು ನೋಡಿದ್ದೇವೆ. ಇಂದು ಮಾಲೆ ಹಾಕಿದವರೆಲ್ಲಾ ಜನವರಿ ೧೪ ಕ್ಕೆ ಶಬರಿಮಲೆಯಲ್ಲಿ ಮೂಡಿಬರುವ ಜ್ಯೋತಿ ನೋಡಿ ತಮ್ಮ ವೃತಾ ಕೊನೆಗೊಳಿಸುತ್ತರೆ ಎಂದರು.

ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ, ಸದಸ್ಯರಾದ ಎ.ಸಿ.ಕುಮಾರಗೌಡ, ರೂಪನಾಯಕ್, ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಅಶೋಕ್ ಸಚ್ಚಿದೇವ್, ಮಾಜಿ ಅಧ್ಯಕ್ಷ ನಾರಾಯಣಗೌಡ, ಸಮಿತಿಯ ಸದಸ್ಯರುಗಳು ಮತ್ತು ಅಯ್ಯಪ್ಪಸ್ವಾಮಿ ಭಕ್ತರು ಮತ್ತಿತರರಿದ್ದರು.

There is no caste or religion in the worship of Sri Ayyappa

 

Related posts

ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ

Team Suddigara

ಶೋಷಿತ ವರ್ಗ ವಿದ್ಯಾವಂತರಾಗುವುದು ಅಂಬೇಡ್ಕರ್ ಆಶಯ

Team Suddigara

ಭಾರತದಲ್ಲಿ ಹುಟ್ಟಿದ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸ

Team Suddigara

Leave a Comment