May 18, 2026
Suddigaralive News
ಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತರೀಕೆರೆತಾಲೂಕು

ತರೀಕೆರೆ ತಾಲೂಕಿನ ರಹಮತ್‌ ಗೆ ರಾಜ್ಯೋತ್ಸವ ಪ್ರಶಸ್ತಿ

ಚಿಕ್ಕಮಗಳೂರು: ೨೦೨೫ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಹಮತ್‌ ತರೀಕೆರೆ ಅವರನ್ನು ಆಯ್ಕೆ ಮಾಡಲಾಗಿದೆ. ರಹಮತ್‌ ತರೀಕೆರೆ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳದವರಾಗಿದ್ದು, ದಸ್ತಗಿರಿಸಾಬ್‌ ಮತ್ತು ಜ್ಯೂಲೇಕ ಬಿ. ದಂಪತಿಗಳ ಪುತ್ರರಾಗಿ ಜನಿಸಿದರು.

ಕಡುಬಡತನ, ತುಂಬು ಕುಟುಂಬದಲ್ಲಿ ಜನಿಸಿದ ಅವರು, ಕಷ್ಟಕಾಪಣ್ಯಗಳನ್ನು ಬಾಲ್ಯದಲ್ಲಿಯೆ ಅನುಭವಿಸಿದವರು. ಸಮತಳದಿಂದ ತರೀಕೆರೆಗೆ ಅಪ್ಪ ಅಣ್ಣರೊಂದಿಗೆ ಬಂದು ನೆಲೆಸಿದರು. ರೈತರ ಉಪಕರಣಗಳಾದ ಗಾಡಿ ಅಚ್ಚು, ಕತ್ತು, ಕುಡ್ಲು ತಯಾರಿಕಾ ವೃತ್ತಿ (ಕುಲುಮೆ) ಕುಟುಂಬದಲ್ಲಿ ಜನಿಸಿದ ಇವರು ಬಡತನದಲ್ಲಿ ಶಿಕ್ಷಣ ಪಡೆದುಕೊಂಡರು.

ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಂಡು ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ೧೯೮೩ರಲ್ಲಿ ಏಳು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಪ್ರೋ.ಎಚ್‌.ಎಂ.ಚನ್ನಯ್ಯ ಅವರ ಮರ‍್ಗರ‍್ಶನದಲ್ಲಿ ೧೯೮೮ರಲ್ಲಿ ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ ಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡರು.

ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ರಹಮತ್‌ ತರೀಕೆರೆ ಅವರು, ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಭಾಷಾಕಾಯದ ಡೀನ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನೆಲೆಸಿದ್ದಾರೆ.

ಇವರ ಸಾಹಿತ್ಯ ಕೃಷಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದು, ಕತ್ತಿಯಂಚಿನ ದಾರಿ ಕೃತಿಗೆ ೨೦೧೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ದೇಶದಲ್ಲಿ ಅಸಹಿಷ್ಟುತೆಯನ್ನು ವಿರೋಧಿಸಿ ಪ್ರಶಸ್ತಿಯನ್ನು ಮರಳಿಸಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು. ಪ್ರತಿ ಸಂಸ್ಕೃತಿಗೆ ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೩), ರ‍್ನಾಟಕ ಸೂಫಿಗಳು ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೮), ಅಂಡಮಾನ್‌ ಕನಸು ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೦೦), ಸಾಹಿತ್ಯ ವಿರ‍್ಶಾ ಕ್ಷೇತ್ರದ ಒಟ್ಟು ಕೊಡುಗೆಗಾಗಿ ೨೦೦೮ರಲ್ಲಿ ಜಿಎಸ್‌ಎಸ್‌ ಪ್ರಶಸ್ತಿ, ಶಿವಮೊಗ್ಗ ರ‍್ನಾಟಕ ಸಂಘದಿಂದ ಲಂಕೇಶ್‌ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಾ.ಮಾ.ನಾಯಕ್‌ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದಾರೆ.

ಪ್ರತಿಸಂಸ್ಕೃತಿ, ರ‍್ನಾಟಕ ಸೂಫಿಗಳು, ಅಂಡಮಾನ್‌ ಕನಸು, ರ‍್ನಾಟಕ ನಾಥಪಂಥ, ರ‍್ಮಪರೀಕ್ಷೆ ಇವರ ಪ್ರಮುಖ ಕೃತಿಗಳಾಗಿದ್ದು, ಜತೆಗೆ ಮರದೊಳಗಿನ ಕಿಚ್ಚು, ಸಾಂಸ್ಕೃತಿಕ ಅಧ್ಯಯನ, ಲೋಕ ವಿರೋಧಿಗಳ ಜೊತೆಯಲ್ಲಿ, ಕತ್ತಿಯಂಚಿನ ದಾರಿ,ಹೊಸ ತಲೆಮಾರಿನ ತಲ್ಲಣ, ಚಿಂತನೆಯ ಪಾಡು, ನೇತುಬಿದ್ದ ನವಿಲು, ರ‍್ನಾಟಕ ಗುರುಪಂಥ ಸೇರಿದಂತೆ ಜನಪದ, ಸಂಶೋಧನೆ, ವಿರ‍್ಶೆ, ಚಿಂತನೆ, ಸಂಕಲನ, ಪ್ರವಾಸ ಕಥನಗಳು, ಜೀವನ ಚರಿತ್ರೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ರ‍್ದು ಮಾತೃಭಾಷೆಯಾಗಿದ್ದರು ಕನ್ನಡದ ಮೇಲೆ ಒಲವು ಬೆಳೆಸಿಕೊಂಡಿದ್ದ ರಹಮತ್‌ ತರೀಕೆರೆ ಅವರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಗತಿಪರ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ೭೦ನೇ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ನ.೧ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕರ‍್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

Rajyotsava Award to Rahmat of Tarikere Taluk

Related posts

ಮಹಾನ್ ಪುರುಷರ ಜಯಂತಿ ಆಚರಿಸುತ್ತಿರುವುದು ಆಶಾದಾಯಕ ಬೆಳವಣಿಗೆ

Team Suddigara

ಜಿಲ್ಲೆಗೆ 20 ಹೊಸ ಆರೋಗ್ಯ ಕ್ಷೇಮ ಕೇಂದ್ರ ಮಂಜೂರು

Team Suddigara

ಸಾರ್ವಜನಿಕರು ಪೊಲೀಸರ ಜನಸ್ನೇಹಿ ಸೇವೆಯನ್ನು ಗೌರವಿಸಿ

Team Suddigara

Leave a Comment